Home / ಕಥೆ / ಕಿರು ಕಥೆ / ಸುವರ್ಣ ಮುಹೂರ್ತ

ಸುವರ್ಣ ಮುಹೂರ್ತ

ಅದು ಒಂದು ಸುವರ್ಣಮುಹೂರ್ತ. ಗುರುಗಳು ಘಟಿಕೋತ್ಸವ ಏರ್ಪಡಿಸಿದ್ದರು. ಶಿಷ್ಯಂದಿರಿಗೆ ಪಟ್ಟಿಗಳನ್ನು ಕೊಟ್ಟು ಅವರವರ ಬಾಳ್ವೆಯ ಆರಂಭಕ್ಕೆ ಕಳಿಸಿ ಕೊಡುವ ವಿದಾಯದ ದಿನವೂ ಆಗಿತ್ತು. ಎಲ್ಲರಿಗೂ, ಗುರುಗಳು ಒಂದು ಬಿಳಿಯ ಚೀಲ, ಕರಿಯ ಚೀಲ, ಮತ್ತೊಂದು ಕರಿಬಿಳಿ ಮಿಶ್ರಣದ ಚೀಲ, ನಾಲ್ಕನೇಯದು ಬೂದು ಬಣ್ಣದ ಚೀಲಗಳನ್ನು ಇತ್ತು ಬೀಳ್ಕೊಡುತ್ತಿದ್ದರು.

ಶಿಷ್ಯರು “ಬರಿಯ ಚೀಲಗಳು ಏಕೆ ಗುರುಗಳೇ?” ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಗುರುಗಳು ಹೇಳಿದರು “ಬಿಳಿಯ ಚೀಲ ನಿಮ್ಮ ಪುಣ್ಯ ಸಂಪಾದನೆಯಿಂದ ತುಂಬುತ್ತದೆ. ಕರಿಯ ಚೀಲ ಪಾಪದಿಂದ, ಇನ್ನು ನಿಮ್ಮ ಕರಿಬಿಳಿಚೀಲ ಪಾಪ ಪುಣ್ಯ ಎರಡರಿಂದ.” ಎಂದರು.

“ಹಾಗಾದರೆ ಈಬೂದೂ ಬಣ್ಣದ ಚೀಲ ಏಕೆ ಗುರುಗಳೇ?” ಎಂದು ಕೇಳಲು ಗುರುಗಳು ಹೇಳಿದರು- ಅದು ಸ್ವಚ್ಚ ಬಾಳ್ವೆಯ ನಿಶ್ಚಲತೆ, ಸಮನ್ವಯತೆಯ, ಮುಕ್ತ ಸ್ಥಿತಿಯಿಂದ ತುಂಬುತ್ತದೆ.”

“ಈ ಚೀಲಗಳು ಸಾಂಕೇತಿಕ ಮಾತ್ರ” ಎಂದು ಹೇಳಿ,

“ಈಗ ಚೀಲಗಳನ್ನು ಇಲ್ಲಿ ಇಟ್ಟುಬಿಡಿ” ಎಂದರು. ನಿಮ್ಮ ಬಲಗೈಯಲ್ಲಿ ಬಿಳಿಚೀಲವಿದೆ ಎಂದು ಭಾವಿಸಿ. ನಿಮ್ಮ ಎಡಗೈಯಲ್ಲಿ ಕರಿ ಚೀಲವಿದೆ ಎಂದು ಭಾವಿಸಿ, ನಿಮ್ಮ ಬೆನ್ನ ಮೇಲೆ ಪಾಪಪುಣ್ಯದ ಕರಿಬಿಳಿ ಚೀಲವಿದೆ ಎಂದು ಭಾವಿಸಿ ನಿಮ್ಮ ದೇಹದ ಹೃದಯ ವೃಕ್ಷದಲ್ಲಿ ತೂಗು ಹಾಕಿ ಈ ಬೂದು ಬಣ್ಣದ ಚೀಲ. ಇದು ತುಂಬುವುದಿಲ್ಲ, ತುಳುಕುವುದಿಲ್ಲ, ಬರಿದಾಗುವುದು ಇಲ್ಲ. ಆ ಸ್ಥಿತಿ ಮುಕ್ತದ ಪರಮಾನಂದ ಸ್ಥಿತಿ.” ಎಂದಾಗ ಶಿಷ್ಯರ ಘಟಿಕೋತ್ಸವದ ಸ್ವತಿವಾಚನ ಮುಗಿಯಿತು. ನಿಜವಾದ ಪಟ್ಟಗಳೇನೆಂದು ಅರಿತು ಬಾಳ್ವೆಯಲ್ಲಿ ಪಟ್ಟ ಏರಲು ಸಿದ್ಧರಾದರು ಶಿಷ್ಯರು.
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...