Home / ಕಥೆ / ಕಿರು ಕಥೆ / ದೈವ ಎಲ್ಲಿದೆ?

ದೈವ ಎಲ್ಲಿದೆ?

ಒಬ್ಬ ಸಾಧಕ ದೈವವನ್ನು ಹುಡುಕಿ ಹೊರಟಿದ್ದ. ದಾರಿಯಲ್ಲಿ ಪೂಜಾರಿ ಸಿಕ್ಕ. ಪೂಜಾರಿಯ ಹತ್ತಿರ ಕೇಳಿದ- “ದೈವ ಎಲ್ಲಿದೆ?” ಎಂದು.

“ಅದು ಮಂದಿರದಲ್ಲಿ ಇರುವ ವಿಗ್ರಹದಲ್ಲಿ”- ಎಂದ. ಸಾಧಕನಿಗೆ ಉತ್ತರ ತೃಪ್ತಿ ಕೊಡಲಿಲ್ಲ.
ಮುಂದೆ ಹೋಗುತ್ತ-ಒಬ್ಬ ವ್ಯಾಪಾರಿ ಎದುರಾದ. ಅವನನ್ನು ಉದ್ದೇಶಿಸಿ “ದೈವ” ಎಲ್ಲಿದೆ ಗೊತ್ತೆ?” ಎಂದ “ಇದೊ ನನ್ನ ಬೆನ್ನು ಮೇಲಿನ ಮೂಟೆಯಲ್ಲಿದ್ದಾನೆ” ಎಂದ. ಏನೋ ಒಗಟಂತಿದೆ ಉತ್ತರ ಎಂದು ಮುಂದೆ ನಡೆದ. ಹೋಗುತ್ತಿರುವಾಗ ಒಂದು ಗೃಹಸ್ಥ ಎದುರಾದ.

“ತಮಗೆ ದೈವ ಎಲ್ಲಿದೆ ಗೊತ್ತಿದೆಯೇ?” ಎಂದು ಕೇಳಿದ. “ದೇವರ ಮನೆಯಲ್ಲಿ ಫೋಟೊದಲ್ಲಿದೆ” ಎಂದ ಗೃಹಸ್ಥ. ಫೋಟೋದಲ್ಲಿ ದೈವವನ್ನು ಬಂಧಿಸಿಡಲು ಸಾಧ್ಯವಿಲ್ಲವೆಂದುಕೊಳ್ಳುತ್ತ ಮುಂದೆ ನಡೆದ.

ಸಾಗರ ತಟದಲ್ಲಿ ಒಬ್ಬ ಮೀನುಗಾರ ಮೀನುಹಿಡಿಯುತ್ತಿದ್ದ. “ದೈವ ಎಲ್ಲಿ ಇದೆ ಗೊತ್ತೇ?”ಎಂದ ಸಾಧಕ.

“ಇದೊ ಜಾಲದಲ್ಲಿ” ಎಂದು ಮೀನುಗಳನ್ನು ತೋರಿಸಿದ. ಮನಸ್ಸಿಗೆ ಸಮ್ಮತವಾಗಲಿಲ್ಲ.

ಮುಂದೆ ನಡೆಯುತ್ತಾ ಕಾಡು ಸೇರಿದ. ವೃಕ್ಷದಲ್ಲಿ ಹಕ್ಕಿ ಹಾಡುತ್ತಿತ್ತು. “ಹಕ್ಕಿ, ಹಕ್ಕಿ, ದೈವ ಎಲ್ಲಿದೆ ಗೊತ್ತಾ?” ಎಂದ.

“ನನ್ನ ಜೆಂಟಿ ರೆಕ್ಕೆಯಲ್ಲಿ” ಎಂದು ಹೇಳಿತು.

ಅವನಿಗೆ ಏನೂ ಅರ್ಥವಾಗಲಿಲ್ಲ. ಒಂದು ಅತಿ ದೊಡ್ಡ ವೃಕ್ಷದಡಿ ನಿಂತು, ಮತ್ತೆ ಅದೇ ಪ್ರಶ್ನೆ ಕೇಳಿದ. ವೃಕ್ಷ ಹೇಳಿತು “ದೈವ ಬೇರಿನಲ್ಲಿದೆ” ಎಂದಿತು.

ಕಾಡು ಮುಗಿದಾಗ ಬೆಟ್ಟ, ಎದುರಾಯಿತು. “ಬೆಟ್ಟವೇ? ನಿನಗೆ ದೈವದ ಗುಟ್ಟು ಗೊತ್ತಾ?”ಎಂದು ಕೇಳಿದ.

“ನನ್ನ ಶಿಖರದಲ್ಲಿ ಅಭಿಷಕ್ತವಾಗಿರುವ ಮೌನವೇ ದೈವ” ಎಂದಿತು.

ಬೆಟ್ಟ ಗುಡ್ಡ ದಾಟಿ ವಿಶ್ರಮಿಸಿಕೊಳ್ಳಲು ಒಂದು ತೋಟಕ್ಕೆ ಬಂದ. ಅಲ್ಲಿ ವಿಧವಿಧ ಹೂ ಹಣ್ಣಿನ ಗಿಡ ಮರಗಳು ಇದ್ದವು.

ಮಾವಿನ ಮರದಡಿ ನಿಂತು ಕೇಳಿದ “ದೈವ ಎಲ್ಲಿದೆ ಗೊತ್ತೇ?” ಎಂದು.

“ಒಂದು ಹಣ್ಣು ಕಿತ್ತಿ ತಿನ್ನು ದೈವದ ರುಚಿ ಸವಿಯುವ ದೈವ ಕಾಣುವೆ” ಎಂದಿತು. ಸಾಧಕ ಹಣ್ಣನ್ನು ಕಿತ್ತು ತಿಂದು ಸಂತಸಗೊಂಡ.

ಒಂದು ಹೂವಿನ ಬಳಿ ಬಂದು ಮತ್ತೆ ಅದೇ ಪ್ರಶ್ನೆ ಕೇಳಿದ.

“ನನ್ನ ನಗುವಿನಲ್ಲಿ, ನನ್ನ ಗಂಧದಲ್ಲಿ ದೈವ” ಎಂದಿತು. ಮಧುರ ಪರಿಮಳವನ್ನು ಆಘ್ರಾಣಿಸಿ ಮತ್ತಷ್ಟು ಸಂತಸ ಗೊಂಡ.

ಅಲ್ಲೇ ಇದ್ದ ತಿಳಿ ಕೊಳವನ್ನು ಮತ್ತೆ ಅದೇ ಪ್ರಶ್ನೆ ಕೇಳಿದ. “ಬೊಗಸೆ ನೀರು ಕುಡಿ ದೈವವ ಸವಿ” ಎಂದಿತು ತಿಳಿ ಕೊಳ.

ಅಷ್ಟರಲ್ಲಿ ಮುಪ್ಪಡಿರಿದ ತೋಟ ಮಾಲಿ ಬಂದ. ಕೊನೆಗೆ ಇವನನ್ನೂ ಕೇಳಿಬಿಡುವ ಎಂದು ಮತ್ತೆ ಅದೇ ಪ್ರಶ್ನೆ ಕೇಳಿದ.

“ಅಯ್ಯೋ! ದೈವಕ್ಕಾಗಿ ಇಷ್ಟು ಹುಡುಕಾಡಬೇಕೆ? ದೈವ ಎಲ್ಲೆಲ್ಲೂ ಇದೆ. ನಿನ್ನಲ್ಲಿ, ನನ್ನಲ್ಲಿ, ಇಡೀ ಜಗದಲ್ಲಿ ಪ್ರಕೃತಿಯಲ್ಲಿ ವಿಕೃತಿಯಲ್ಲ” ಎಂದಾಗ ಸಾಧಕನ ಕಣ್ಣು ತೆರೆಯಿತು.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...