ಬುದ್ಧನ ಮಾಡಿ

ಬುದ್ಧನ ಮಾಡಿ
ಹೇಗಾದರು ಮಾಡಿ
ಮರದಿಂದ ಮಾಡಿ
ಮಣ್ಣಿಂದ ಮಾಡಿ
ಕಲ್ಲಿಂದ ಮಾಡಿ
ಹುಲ್ಲಿಂದ ಮಾಡಿ
ದಂತದಿಂದ ಮಾಡಿ
ಚಂದ್ರಕಾಂತದಿಂದ ಮಾಡಿ

ಬುದ್ಧನೆಂದರೆ ಬುದ್ಧ
ಮಾಯಾದೇವಿಯ ಕನಸು ಬುದ್ಧ
ಶುದ್ಧೋದನನ ನನಸು ಬುದ್ಧ
ಯಶೋಧರಾ ಬುದ್ಧ
ರಾಹುಲ ಬುದ್ಧ
ಗೌತಮ ಬುದ್ಧ
ಸಿದ್ದಾರ್ಥ ಬುದ್ಧ
ಸಕಲ ಪದಾರ್‍ಥ ಬುದ್ಧ

ಅಂಗಳ ದಾಟಿದ ಬಯಲು ದಾಟಿದ
ನದೀ ದಾಟಿದ ಬೆಟ್ಟ ದಾಟಿದ
ಒಂದಡಿಯಲ್ಲೆ ಎಲ್ಲ ದಾಟಿದ
ಎಲ್ಲ ದಾಟಿದವನೆ ಮರಳಿ ಬಂದವನು
ಎಲ್ಲರನ್ನೂ ಎದೆಗೆತ್ತಿಕೊಂಡವನು

ಕರವ ನೋಡಿರಿ ಅಭಯಹಸ್ತ
ಕಣ್ಣ ನೋಡಿರಿ ಕಾರುಣ್ಯಪೂರ್‍ಣ
ಅಧರ ನೋಡಿರಿ ಮಂದಹಾಸ
ಶಿರ ಕೋಟಿ ಸೂರ್‍ಯಪ್ರಕಾಶ

ಅಂಥ ಬುದ್ಧನಿಗೆ ಶರಣು
ಬುದ್ಧ ಶರಣಂ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವನು-ಅವಳು
Next post ಉಮರನ ಒಸಗೆ – ೩೯

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…