Home / ಕವನ / ಕವಿತೆ / ಯುದ್ಧ ಮತ್ತು ಶಾಂತಿ

ಯುದ್ಧ ಮತ್ತು ಶಾಂತಿ

ಸಾಕು ಸಮರದ ದಿನಗಳು
ಕರಾಳ ಸಾವು ನೋವುಗಳು
ಯುಗಯುಗಗಳ ಜೀವರಾಶಿಯನು
ನಿಮಿಷಾರ್ಧದಲ್ಲಿ ನಿರ್ನಾಮ ಮಾಡುವ
ಸಮರವನು ಸಾರುವದು ಬೇಡ.

ನೋಡುತ್ತಿದೆ ಜಗತ್ತು
ತತ್ತರಿಸಿ ಕಣ್ಣು ಬಿಟ್ಟು
ಯುದ್ಧಭೀತಿಯಿಂದ.
ನೋವಿನಿಂದ ಬಿಕ್ಕಳಿಸಿ
ಅಳುತಿವೆ ನಕ್ಷತ್ರಗಳು.
ಆಕಾಶವೆಲ್ಲ ಥರಗುಟ್ಟಿ
ನಡಗುತ್ತಿದೆ.
ಭೂಮಿ ಬಾಯ್ತೆರೆದು ಬೇಡುತ್ತಿದೆ.
“ನಮಗೆ ಯುದ್ಧ ಬೇಡ,
ಶಾಂತಿ ಬೇಕು, ಶಾಂತಿ” ಎಂದು.
ನೆಲ, ಜಲವನ್ನು ವಿಷವಾಗಿಸುವ,
ಮನುಕುಲವನು ನಾಶ ಮಾಡುವ
ಬರದ ಭೀಕರ ವಿಷಬೀಜ ಬಿತ್ತುವ,
ವಿಶ್ವವನ್ನೇ ಸ್ಮಶಾನವನ್ನಾಗಿಸುವ,
ಸಮರಗಳು ನಮಗೆ ಬೇಡ
ಹಿರೋಷಿಮಾ ನಾಗಾಸಾಕಿಗಳ
ಕತ್ತಲೆಯ ಕರಿ ನೆರಳುಗಳು
ಕೂಗಿ ಕೂಗಿ ಹೇಳುತ್ತಿವೆ.
“ಯುದ್ಧ ಬೇಡ – ಶಾಂತಿ ಬೇಕು” ಎಂದು

ಸಾಮ್ರಾಜ್ಯಶಾಹಿಗಳ ಪ್ರತಿಷ್ಠೆಗೆ
ವಿಶ್ವವನ್ನೇ ಗೋರಿ ಮಾಡುವುದು ಬೇಡ
ನೀಲಿ ಕಣ್ಣಿನ ಗಿಡುಗನ ನೀತಿಯಲಿ
ಮಾನವೀಯತೆಯ ಹುಡುಕುವದು ಬೇಡ
ದುಡ್ಡಿನ ಧಣಿಗಳ ಡಾಲರ್‌ಗಳಿಂದ
ಕೈಗಳನ್ನು ಕಟ್ಟಿಸಿಕೊಂಡು
ಮಾನವೀಯತೆಯ ಮಾರಿಕೊಂಡು
ದುರಂತವನ್ನಪ್ಪುವದು ಬೇಡ.
ಸದ್ದಿಲ್ಲದೇ ಮನುಕುಲವ ನಾಶಮಾಡುವ
ಯುದ್ಧ ಢಾಕಿಣಿಗೆ ಶರಣಾಗುವದು ಬೇಡ.
ತೈಲ ಸಮುದ್ರದಲ್ಲಿ ಸಿಕ್ಕ ಹಕ್ಕಿಗಳು
ಕಂಗೆಟ್ಟು ಕೇಳುತ್ತಿವೆ –
ನೋವಿನಿಂದ ಬೇಡುತ್ತಿವೆ –
“ನಮಗೆ ಯುದ್ಧ ಬೇಡ
ಶಾಂತಿ ಬೇಕು – ಶುದ್ಧ ಪರಿಸರಬೇಕು” ಎಂದು.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...