Home / ಕವನ / ಕವಿತೆ / ಯುದ್ಧ ಮತ್ತು ಶಾಂತಿ

ಯುದ್ಧ ಮತ್ತು ಶಾಂತಿ

ಸಾಕು ಸಮರದ ದಿನಗಳು
ಕರಾಳ ಸಾವು ನೋವುಗಳು
ಯುಗಯುಗಗಳ ಜೀವರಾಶಿಯನು
ನಿಮಿಷಾರ್ಧದಲ್ಲಿ ನಿರ್ನಾಮ ಮಾಡುವ
ಸಮರವನು ಸಾರುವದು ಬೇಡ.

ನೋಡುತ್ತಿದೆ ಜಗತ್ತು
ತತ್ತರಿಸಿ ಕಣ್ಣು ಬಿಟ್ಟು
ಯುದ್ಧಭೀತಿಯಿಂದ.
ನೋವಿನಿಂದ ಬಿಕ್ಕಳಿಸಿ
ಅಳುತಿವೆ ನಕ್ಷತ್ರಗಳು.
ಆಕಾಶವೆಲ್ಲ ಥರಗುಟ್ಟಿ
ನಡಗುತ್ತಿದೆ.
ಭೂಮಿ ಬಾಯ್ತೆರೆದು ಬೇಡುತ್ತಿದೆ.
“ನಮಗೆ ಯುದ್ಧ ಬೇಡ,
ಶಾಂತಿ ಬೇಕು, ಶಾಂತಿ” ಎಂದು.
ನೆಲ, ಜಲವನ್ನು ವಿಷವಾಗಿಸುವ,
ಮನುಕುಲವನು ನಾಶ ಮಾಡುವ
ಬರದ ಭೀಕರ ವಿಷಬೀಜ ಬಿತ್ತುವ,
ವಿಶ್ವವನ್ನೇ ಸ್ಮಶಾನವನ್ನಾಗಿಸುವ,
ಸಮರಗಳು ನಮಗೆ ಬೇಡ
ಹಿರೋಷಿಮಾ ನಾಗಾಸಾಕಿಗಳ
ಕತ್ತಲೆಯ ಕರಿ ನೆರಳುಗಳು
ಕೂಗಿ ಕೂಗಿ ಹೇಳುತ್ತಿವೆ.
“ಯುದ್ಧ ಬೇಡ – ಶಾಂತಿ ಬೇಕು” ಎಂದು

ಸಾಮ್ರಾಜ್ಯಶಾಹಿಗಳ ಪ್ರತಿಷ್ಠೆಗೆ
ವಿಶ್ವವನ್ನೇ ಗೋರಿ ಮಾಡುವುದು ಬೇಡ
ನೀಲಿ ಕಣ್ಣಿನ ಗಿಡುಗನ ನೀತಿಯಲಿ
ಮಾನವೀಯತೆಯ ಹುಡುಕುವದು ಬೇಡ
ದುಡ್ಡಿನ ಧಣಿಗಳ ಡಾಲರ್‌ಗಳಿಂದ
ಕೈಗಳನ್ನು ಕಟ್ಟಿಸಿಕೊಂಡು
ಮಾನವೀಯತೆಯ ಮಾರಿಕೊಂಡು
ದುರಂತವನ್ನಪ್ಪುವದು ಬೇಡ.
ಸದ್ದಿಲ್ಲದೇ ಮನುಕುಲವ ನಾಶಮಾಡುವ
ಯುದ್ಧ ಢಾಕಿಣಿಗೆ ಶರಣಾಗುವದು ಬೇಡ.
ತೈಲ ಸಮುದ್ರದಲ್ಲಿ ಸಿಕ್ಕ ಹಕ್ಕಿಗಳು
ಕಂಗೆಟ್ಟು ಕೇಳುತ್ತಿವೆ –
ನೋವಿನಿಂದ ಬೇಡುತ್ತಿವೆ –
“ನಮಗೆ ಯುದ್ಧ ಬೇಡ
ಶಾಂತಿ ಬೇಕು – ಶುದ್ಧ ಪರಿಸರಬೇಕು” ಎಂದು.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...