ಸಮಯವಿದೆಯೆ ಪಪ್ಪಾ?


ಸಮಯವಿದೆಯೆ ಪಪ್ಪಾ?
ಆಚ ಗುಡ್ಡದಾಚೆ ಇದ ನದಿ
ಆಹಾ! ಎಷ್ಟು ಚಂದ ಅದರ ತುದಿ
ಅಬ್ಬಾ… ಎಷ್ಟು ದೊಡ್ಡ ಸುಳಿ
ಹೇಗೋ ಪಾರಾದೆ ನುಸುಳಿ
ಸರ್ರೆಂದು ಜಾರುವುದು ನುಣ್ಣನೆಯ ಹಾವು
ಎದೆಯೆತ್ತರಕೂ ಹಾರುವುದು ಪುಟಾಣಿ ಮೀನು
ಬಾ ಪಪ್ಪಾ ತೋರಿಸುವನು…

ಸಮಯವಿದೆಯೆ ಪಪ್ಪಾ?
ಬೆಟ್ಟವೇರೋಣ ಬಾ ನೀನು
ಅಲ್ಲಿಂದ ಮುಟ್ಟೋಣ
ಆಕಾಶ, ಚಂದ್ರನನ್ನು
ಮೆಟ್ಟಿಲುಗಳೇ ಬೇಡ
ಜಾರುಗುಪ್ಪೆಯಾಡುತ್ತ
ಉರುಳುರುಳಿ ಸೇರಬಹುದು ನೆಲವನ್ನು
ಬಾ ಪಪ್ಪಾ ತೋರಿಸುವೆನು…

ಕರಿಬೇವಿನ ಮರದಲ್ಲಿ
ಕಟ್ಟಿದ ಗುಬ್ಬಿ ಗೂಡು
ಇಟ್ಟಿದೆ ಪುಟ್ಟ ಮೊಟ್ಟೆ
ನೀನು ಬಾ ನೋಡು
ನಿಂಬೆಯ ಎಲೆ ಮೆದ್ದು
ಗಡದ್ದು ನಿದ್ದೆಯಲ್ಲಿದೆ ಕಂಬಳಿ ಹುಳು
ಬಾ ಪಪ್ಪಾ ತೋರಿಸುವೆನು…


ಬೆತ್ತ ಆಚೆ ಇಡು
ಎಲ್ಲ ಹೇಳುವೆನು

ನಿಜ ಶಾಲೆ ತಪ್ಪಿಸಿ
ಸಾಬಣ್ಣನ ಹೊಲಕ್ಕೆ ಹೋಗಿದ್ದೆನು
ದೆವ್ವವಲ್ಲ….
ಬೆದರು ಬೊಂಬೆ
ಪರೀಕ್ಷೆ ಮಾಡಿದೆನು

ಬೆತ್ತ ಆಚೆ ಇಡು
ನಿಜವ ಹೇಳುವೆನು
ಪಾಠದ ಪುಸ್ತಕ ತೆರದರೆ
ಬರೀ ಗುಡ್ಡ ಬೆಟ್ಟ ನದಿಯೇ ಕಾಣುವುದು
ಮನ ಅದರ ಹಿಂದೆ-ಮುಂದೆ
ಸುಳಿದಾಡುವುದು
*****

One thought on “0

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಸ್ಸಂಜೆಯ ಮಿಂಚು – ೨೪
Next post ಪತಿರೂಪ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…