Home / ಕವನ / ಕವಿತೆ / ಕಲ್ಯಾಣದ ದಾರಿತುಂಬ

ಕಲ್ಯಾಣದ ದಾರಿತುಂಬ

ಪ್ರತಿ ಹಕ್ಕಿಯ ಕೊರಳ ತುಂಬಾ
ಧ್ವನಿಸುವ ಹಾಡು ನನ್ನ ನಿನ್ನ ಪ್ರೇಮ
ನಲಿಯುವ ಉಲಿಯುವ ಹಾಡಾಗಿ
ಸೂರ್ಯ ಕಿರಣ ಚೆಲ್ಲಿದ್ದಾನೆ ಶುಭ ಮುಂಜಾವಿನಲಿ.

ಅರಿಕೆಗೊಂಡ ಪ್ರೀತಿ ಪ್ರತಿ ಹನಿಹನಿ
ಚಿಮ್ಮಿ ಲಹರಿಯ ತೇಲಿ ಸಾಗಿವೆ ಸಾಕ್ಷಿ
ಬೀಜಗಳು ಚಿಗುರುವ ಮೊಳಕೆಯಾಗಿ
ಮರು ಹುಟ್ಟಿನ ಹಸಿರು ರೂಪಕಗಳಲಿ.

ಬಯಲ ಭಾಷೆಯಲಿ ಮೌನ ಮಾತು
ತೆರೆಯದಿದ್ದರು ಅರ್ಥ ಹೊಮ್ಮುವ ನಾದ
ಪ್ರತಿಮೆಗಳು ಹಣತೆಯಲ್ಲಿ ದೀಪಗಳು
ಸಂಜೆ ದೇವರು ಮನೆಯ ಬಿಂಬದಲ್ಲಿ
ಸಾವಿರಾರು ಚಿಕ್ಕೆಗಳ ಫಳಫಳ.

ನೀಲ ರಾಶಿ ನೀರ ರಾಶಿ ಒಲವರಾಶಿ
ಬೀಜ ರಾಶಿಗಳಲಿ ಎದೆಯ ಹದ
ಮುದವಾಗಿ ತೀಡಿತೀಡಿ ಎದ್ದ ಕವಿತೆಗಳು
ದಾರಿಯಲಿ ಸವೆದ ಚಂದ್ರನ ತುಂಬಾ ಬೆಳದಿಂಗಳು.

ಹಕ್ಕಿಯೊಂದು ಹಾರಿಬಂದು ಭಾವ
ಚಂದ್ರನಲಿ ಬೆಳದಿಂಗಳು ತುಂಬಿ
ಅವನ ಬೆಳಕಿಂಡಿ ಇವಳ ಕನಸುಗಳಲಿ
ಬಿಂದು ಬಿಂದು-ವಿನಿಂದು ಚಲಿಸಿದ
ಅಲ್ಲಮನ ರಂಗೋಲಿ ಕಲ್ಯಾಣದ ದಾರಿತುಂಬ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...