Home / ಕವನ / ಕವಿತೆ / ದುರ್ದೈವಿ

ದುರ್ದೈವಿ

ಮಾಮರದ ತೋಪಿನಲಿ
ಚೆಂದಿರನ ಬೆಳಕಿನಲಿ
ಕೊಳದ ಸೋಪಾನದಲಿ
ಕುಳಿತಿರುವಳಿವಳಾರು?

ನೀರಿನಂಚಿಗೆ ಸರಿದು
ತೊಯ್ಸಿಹಳು ನಿರಿಗಳನು
ಕಾಲ್ಗಳನು ಚಾಚುವಳು
ಮುದುರುವಳು ಕ್ಷಣಕೊಮ್ಮೆ

ಉಬ್ಬಿಹುದು ಇವಳೆದುಯು
ನಿಟ್ಟುಸಿರ ಬಿಡುತಿಹಳು
ಜೀವದಾಶೆಯ ತೊರೆದು
ಕುಳಿತಿಹಳು ತನುಗಾತ್ರಿ

ದಾರಿಗರ ಅರಿವಿಲ್ಲ
ಪ್ರಾಣಿಗಳ ಭಯವಿಲ್ಲ
ಗಂಗೆಯನು ದಿಟ್ಟಿಸುತ
ಉಸಿರುತಿಹಳೇನನೋ

ಯೌವನದ ಶೋಭೆಯಲಿ
ತುಂಬಿ ತುಳುಕುವ ಮುಖವು
ಕಳೆಗುಂದಿ ಬಾಡಿಹುದು
ಕಂಬನಿಯ ತರುತಿಹಳು

ಜಗದ ಸುಖವನು ಬಿಟ್ಟು
ಬಂದಿಹಳು ದುರ್ದೈವಿ
ಏನಿಹುದೊ ಮನದಿಚ್ಛೆ
ಯಾರೇನು ಮಾಡಿದರೊ

ನಿಷ್ಕಳಂಕದ ಪ್ರೇಮ
ಸ್ಪೂರ್ತಿಯಲಿ ಬಂಧಿಸುತ
ಅಧರವನು ಚುಂಬಿಸುವ
ಗೆಳೆಯನೇನಾದನೋ

ತಾಳಲಾರೆವು ಹಸಿವ
ಏನ ಕೊಡುವೆಯೆ ಅಮ್ಮ
ಎನುತ ಪೀಡಿಸಿ ಸುಳಿವ
ಮಕ್ಕಳೇನಾದರೋ

ಜಗಕೆ ಒಡೆಯನು ಪರಮ
ಕರುಣಮೂರ್ತಿಯು ಎಂದು
ಜನರು ಹೊಗಳುತಲಿರುವ
ದೇವ ತಾನೆಲ್ಲಿಹನೊ

ಶೂನ್ಯ ಹೃದಯಳು ಇನ್ನು
ಮುಳುಗುವಳು ಕ್ಷಣದೊಳಗೆ
ಕಂಗಳನು ಮುಚ್ಚಿದಳು
ಎಚ್ಚರವ ತಪ್ಪಿದಳು

ಕಾಲಚಕ್ರವ ನೆಗೆದು
ಸ್ಥೂಲಕಾಯವ ಬಿಟ್ಟು
ಯಾರು ಅರಿಯದ ಸ್ಥಳಕೆ
ಹೊರಡುತಿದೆ ಇವಳಾತ್ಮ

ಹೋಗಿ ಬದಿಯಲಿ ಕುಳಿತು
ಮೈದಡವಿ ಕಣ್ಣೊರಸಿ
ಏಳು ತಂಗೀ ಎಂದು
ಸಂತೈಸಿ ಕರೆಯಲೇ?

ಪೋಗು! ನೀನಾರಿಲ್ಲಿ
ಬಂದುದೇತಕೆ? ಎಂದು
ಕ್ರೂರ ದೃಷ್ಟಿಯೊಳೆನ್ನ
ನೋಡಿಬಿಡುವಳೊ ಏನೊ!

ಆಗುವುದು ನಿಲ್ಲದದು
ಆಗದಿಹುದಾಗದದು
ಹೀಗೆಂದು ಜನಕಜೆಯು
ಸಾಗಿದಳು ಮುಂದೆ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...