Home / ಕವನ / ಕವಿತೆ / ತಗಣಿಗಳೊಡನೆ ಮಹಾಯುದ್ಧ

ತಗಣಿಗಳೊಡನೆ ಮಹಾಯುದ್ಧ

ವೀರರೆಂಬವರಾರು ? ಶೂರರಿರುವವರಾರು ?
ಬನ್ನಿರೋ ಬಹು ಬೇಗ, ತನ್ನಿರೋ ನಿಮ್ಮ ಮಹಾಬಲವ
ಬಂದಿಹುದು ಮಹಾಯುದ್ಧದ ಮಹಾ ಉಸಿರು
ನೋಡ ನಿಂತಿಹರು ಸುರಗಣವೂ ನಿಮ್ಮ ರಣ ಛಲವ

ಮನೆ ಮನೆಗೂ ಮನ ಮನಗೂ ಹಾಹಾಕಾರ
ತಡೆಯದೇ ಬಿಡದೇಳಿ, ನಿಮ್ಮೆಲ್ಲ ಶೌರ್ಯ ತಾಳಿ
ಹೊಸೆದು ಹುರಿಮಾಡಿ ನಿಮ್ಮ ಮೀಸೆಯಾಕಾರ
ಖಡ್ಗ ಖಠಾರಿ ಢಾಲುಗಳೊಡನೆ ಮುಗಿಬೀಳಿ

ಸೊಡ್ಡು ಹೊಡೆಯಿರಿ ನೀವು ಕಾಳಗದ ಇದಿರು
ಮಿಂಚುವಾ ಖಡ್ಗದೊಡನೆ ಮಿಂಚು ನೀವಾಗಿ
ನಿಮ್ಮ ವೈರಿಗಳದೋ ಅಲ್ಲಿ ಅಡಗಿ ನಿಂತಿಹರು
ಕಾದಿಹರು ಕಾಳಗಕೆ; ಇರಿದು ಕೊಲ್ಲಿರಿ ರೇಗಿ

ಬಲುಜೋಕೆ; ಸಿಗರವರು ಬಹು ಬೇಗ
ಕಡಿದಾರು, ರಕ್ತ ಕುಡಿದಾರು! ಬಿಡಬೇಡಿರವರ
ನಿಲುವಿಗೆ ಕಿರಿದಾದರೂ ನಿಲುಕದಾ ವೇಗ
ಮೈಮರೆಯದೇ ಮುನ್ನುಗ್ಗಿ; ಹಿಡಿಯಲವರ

ಹಗಲು ದಾಳಿಗರಲ್ಲ; ರಾತ್ರಿವೀರರವರು
ನಿದ್ರಿಸದಿರಿ, ನುಸುಳಿ ಬಂದಾರು; ಬಿಡದೆ ಕಾಡ್ಯಾರು
ನಿಮ್ಮ ಮೇಲೇರಿ ಬರಬಹುದು ಅವರು
ಆಯಾಸ ಆಲಸ್ಯ ಆತುರವ ತಡೆಯಿರಿ ನೀವೆಲ್ಲರು

ಮನೆ ಮನೆಯ ನುಗ್ಯಾರು; ಬೀಡಾರ ಹಾಕ್ಯಾರು
ಗುಡಿಲು ಗುಂಡಾರ ಏನು; ಅರಮನೆ ಏನು
ಎಲ್ಲೆಡೆಗು ಹೊಕ್ಕಾರು; ಸುತ್ತೆಲ್ಲ ಮುತ್ಯಾರು
ಲೆಕ್ಕಿಸದೆ ಜನರ ನೋವು ದಣಿವುಗಳನು

ರಕ್ತ ಹೀರಿ ಕೆಂಪೇರಿದ ಜೀರಿಗೆ ಮುಖದವರು
ಏನವರ ಒನಪು ಒಯಾರ; ಸುತ್ತೆಲ್ಲ ಜೈಸ್ಯಾರ
ವಿಷಮದ್ದಿಗೂ ಸೋಲದ ರಿಪು ತಂಡದವರು
ಇವರ ಸಂಹಾರವರಿಯದ ನಮಗೆಲ್ಲ ಧಿಕ್ಕಾರ !
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...