Home / ಕವನ / ಲಾವಣಿ / ಜೈಲಿನ್ಕಂಡಿ

ಜೈಲಿನ್ಕಂಡಿ

ರಚನೆ: ೫ನೆಯ ಸೆಪ್ಟೆಂಬರ್ ೧೯೪೨, ಮೈಸೂರು

ಮಾನವ ಜನ್ಮದಾಗ್ ಹುಟ್ಟಿದ್ಮೇಲೆ
ಏನೇನ್ಕಂಡಿ
ಜೀವನ್ದೊಳ್ಗೆ ಸಾಯೋತನ್ಕ
ಗಂಡಾಗುಂಡಿ.

ಲಕ್ಷ್ಮೀಪುರಂ ಸ್ಟೇಷನ್ನೊಳ್ಗೆ
ಕುಳಿತ್ಕೊಂಡಿ
ಬರೀತೇನೆ ಲಾವಣಿ ಒಂದು,
ಜೈಲಿನ್ಕಂಡಿ.

ಹಿಂದೆ ಎಂದೂ ಜೈಲಿನ್ಕಡ್ಗೆ
ಸುಳ್ದಿರ್ಲಿಲ್ಲ
ಜೈಲಿನ್ಜೀವ್ನ ಹೆಂಗಂಬೋದ್
ತಿಳ್ದಿರ್ಲಿಲ್ಲ!

ಸಾವಿರ್ದೊಂಬೈನೂರ ನಲ್ಪ.
ತ್ತೆರ್ಡ್ನೇ ಇಸ್ವಿ
ಸೆಪ್ಟೆಂಬರು ಐದ್ನೇ ತಾರೀಕ್
ಜೈಲಿಬಂದ್ವಿ!

ಪೋಲೀಸ್ನೋರು ಮೀಟಿಂಗಾದ್ಮೇಲ್
ನನ್ನನ್ಹಿಡ್ದ್ರು,
ನನ್ನೇಲ್ನಂಬ್ಕೆ ಇಲ್ದೋರಂಗೆ
ಬೀಗಾ ಜಡ್ದ್ರು;

ಲಾಕಪ್ನಾಗೆ ಸೇರಿತ್ತು
ಎರ್ಡಿಂಚ್ಕಸ
ಮಾಡೋದೆಂಗೆ ಎನ್ನಿಸ್ಬಿಡ್ತು
ಅದ್ರಾಗ್ವಾಸ!

ಮಧ್ಯೆ ಮಧ್ಯೆ ಟೆಲಿಫೋನ್ ಗಂಟೆ
ಹೊಡ್ಕೊಳ್ತಿತ್ತು
ಬೂಡ್ಸಿನ್ಧಕ್ಕೆಯೊಳ್ಗೆ ಎದೆ
ಧಸ್ಸೆನ್ತಿತ್ತು.

ಲಾಕಪ್ನಿಂದ ಹೊರಕ್ನೋಡೋಕ್
ಇತ್ತೊಂದ್ಕಿಂಡಿ
ಅದ್ರಿಂದೊಳ್ಗೆ ಗುಬ್ಬಚ್ಯೊಂದು
ಬರೋದ್ಕಂಡಿ.

ಹೊರಗ್ಗಾಳೀಲ್ ಕುಣ್ದಾಡ್ತಿದ್ವು
ಮರ್ದೆಲ್ಗೊಳು
ನಿಮ್ ಸ್ವಾತಂತ್ರ್ಯ ನಮ್ಗಿಲ್ವಲ್ಲ
ಅಯ್ಯೋ ಗೋಳು!

ಎಂಬೋ ಯೋಚ್ನೆ ತುಂಬಿ ಬಂತು
ಮನಸ್ನೊಳ್ಗೆ
ಕೆನ್ನೀರ್ತುಂಬ್ತು ತಕ್ಷಣ್ವೇನೆ
ಕಣ್ಣಿನೊಳ್ಗೆ!

ಕಣ್ಣೀರ್ನೊಳ್ಗೆ ಕಾಣ್ದೇಹೋಯ್ತು
ಜೈಲಿನ್ಕಟ್ಟು
ಬಿಚ್ಚಿ ಹೋಯ್ತು ಒಂದ್ ಕ್ಷಣ್ದಲ್ಲೆ
ಸ್ಪಪ್ನದ್ಕಟ್ಟು!
***

ಹಿಮಾಲಯ ಮಲೆ ಮೇಲೆ
ನಾಡಿನ್ಬಾವ್ಟ
ಹಾರ್ತಾ ಇದೆ ಅದರ್ಮೇಲೆ
ಬಾನಿನ್ಗುಮ್ಟ!

ಬಾವ್ಟದ್ಪಾದ ತೊಳೀತಿದೆ
ಗಂಗಾ ನದಿ
ಅದ್ಕೇ ಅದು ಭಾರತದಾಗೆ
ಪಾವನ ನದಿ!

ಬಾವ್ಟವನ್ನು ಹಿಡ್ದಿದ್ದಾರೆ
ಗಾಂಧೀಯೋರು
ಎಡ್ಬಲ್ದಲ್ಲಿ ಜವ್ಹರ್ಲಾಲು
ಆಜಾದರು.

ಎಲ್ಲೂ ಕೂಗ್ತಾರ್ “ಬೋಲೋ ಭಾರತ್
ಮಾತಾಕಿ ಜೈ”
ಭಾರತ್ಮಾತೆ ಉತ್ರ ಕೊಟ್ಳು
“ಗಾಂಧೀಕಿ ಜೈ!”
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...