Home / ಲೇಖನ / ವಿಜ್ಞಾನ / ಆಮ್ಲ ಮಳೆ

ಆಮ್ಲ ಮಳೆ

water-464953_960_720ಭೂಮಿಯ ಮೇಲಿನ ಜೀವ ಸಂಕುಲಕ್ಕೆ ಮಾರಕವಾದ ಆಮ್ಲ ಮಳೆ ಅತ್ಯಂತ ಅಪಾಯಕಾರಿ.  ಈ ಮಳೆಯಿಂದಾಗುವ ಅನಾಹುತಗಳನ್ನು ಅರಿಯಲು ಜಪಾನ್, ಚೀನಾ ಸೇರಿದಂತೆ ಹತ್ತು ರಾಷ್ಟ್ರಗಳು ಜಪಾನ್‌ನಲ್ಲಿ ಸಭೆ ಸೇರಲಿವೆ.  ಇಲ್ಲಿ ರಚಿಸಲಾಗುವ ಸಂಘಟನೆಯು ಏಷ್ಯಾದಲ್ಲಿ ಸುರಿಯುವ ಆಮ್ಲ ಮಳೆಯ ಪರಿಣಾಮಗಳನ್ನು ಅಧ್ಯಯನ ಮಾಡಲಿದೆ.

ಈ ದಿನಗಳಲ್ಲಿ ದಿನಕ್ಕೊಂದು ಕಾರ್ಖಾನೆ ತಲೆಯೆತ್ತುತ್ತಿದೆ.  ಇವುಗಳ ಜೀವಾಳ ಕಲ್ಲಿದ್ದಲು ಮತ್ತು ತೈಲ ಅನಿಲಗಳು.  ಈ ಉದ್ಯಮಗಳು ಹೊರ ಚೆಲ್ಲುವ ರಾಸಾಯನಿಕ ವಸ್ತುಗಳು, ರಾಸಾಯನಿಕ ಇಂಧನಗಳನ್ನು ಬಳಸುವ ವಾಹನಗಳಿಂದ ಹೊರಚೆಲ್ಲುವ ಹೊಗೆ, ಕೃಷಿಗಾಗಿ ಬಳಸುವ ಗೊಬ್ಬರ  ಕ್ರಿಮಿನಾಶಕಗಳೂ, ಯುದ್ದಕ್ಕಾಗಿಯೇ ಸೃಷ್ಟಿಸಲಾದ ಮಾರಕ ವಿಷಾನಿಲಗಳು ವಾತಾವರಣವನ್ನು ಒಂದೇ ಸಮನೇ ಮಲಿನಗೊಳಿಸುತ್ತಿವೆ.  ಈ ವಿಷಾನಿಲಗಳಲ್ಲಿ ಗಂಧಕದ ಡೈ ಆಕ್ಸೈಡ್ ಅಲ್ಲದೆ ಸಾರಜನಕದ ಆಕ್ಸೈಡ್ ವಾಯುಮಂಡಲದಲ್ಲಿ ಸೇರಿಕೊಂಡ ಮೇಲೆ ಅಲ್ಲಿರುವ ಆಮ್ಲಜನಕ ಹಾಗೂ ನೀರಾವಿಗಳೊಂದಿಗೆ ಬೆರೆತು ಸಲ್ಫ್ಯೂರಿಕ್ ಆಮ್ಲ ಹಾಗೂ ನೈಟ್ರಿಕಾಮ್ಲಗಳಾಗಿ ಪರಿವರ್ತನೆ ಹೊಂದುತ್ತವೆ.  ಇವು ಮಳೆಯೊಂದಿಗೆ ಬೆರೆತು ಭೂಮಿಗೆ ಇಳಿಯುತ್ತವೆ.

ಮಳೆಯ ಸಾಮಾನ್ಯ ಪಿ.ಹೆಚ್. ಅಂಶವು ೫.೬ರಷ್ಟಿರುತ್ತದೆ.  ಆದರೆ ಪಿ.ಹಚ್. ಮಟ್ಟವು ಇದಕ್ಕಿಂತ ಕಡಿಮೆ ಆದಾಗ ಅದು ಆಮ್ಲ ಮಳೆಯಾಗುತ್ತದೆ.  ಪಿ.ಹೆಚ್. ಕಡಿಮೆ ಇರುವ ಮಳೆಯಾದರೆ ಮನುಷ್ಯರ ಮೈಮೇಲೆ ಬೊಬ್ಬೆಗಳು ಏಳಬಹುದು.  ಕೆರೆ, ನದಿ, ಸಮುದ್ರಗಳಲ್ಲಿ ಸೇರಿ ಅಲ್ಲಿಯ ಜಲಚರಗಳ ನಶಿಸುವಿಕೆಗೆ ಕಾರಣವಾಗುತ್ತದೆ.  ಆಮ್ಲದ ಅಂಶ ಮೀನುಗಳ ಶರೀರವನ್ನು ಸೇರಿದಾಗ ಎಲುಬುಗಳಲ್ಲಿರುವ ಕ್ಯಾಲ್ಸಿಯಂ ಅಂಶವನ್ನು ಕರಗುವಂತೆ ಮಾಡಿ ಮೂಳೆಗಳನ್ನು ಮೃದುವನ್ನಾಗಿ ಮಾಡಿ ಅವುಗಳ ಸಾವಿಗೆ ಕಾರಣವಾಗುತ್ತದೆ.

ಈಗಾಗಲೇ ಆಮ್ಲ ಮಳೆ ಯೂರೋಪ್ ಬ್ರಿಟನ್ ಅಮೆರಿಕಾಗಳಲ್ಲಿ ಕಾಣಿಸಿಕೊಂಡು ದುಷ್ಪರಿಣಾಮ ಬೀರಿದೆ.  ಕೆನಡಾದಲ್ಲಿ ಸುಮಾರು ೧೪,೦೦೦ ಕೆರೆ, ಸರೋವರಗಳು ಆಮ್ಲ ಮಳೆಯಿಂದಾಗಿ ಬರಿದಾಗಿವೆ.  ನಲವತ್ತು ಸಾವಿರ ಕೆರೆಗಳು ಆಮ್ಲದಿಂದ ತುಂಬಿವೆ. ಚಿಕ್ಕ ಪುಟ್ಟ ಜಲಚರಗಳಲ್ಲದೆ ಅಸಂಖ್ಯ ಸಾಲ್ಮನ್ ಮೀನುಗಳು ಬಲಿಯಾಗಿವೆ.

ಭಾರತವೂ ಈ ಅಪಾಯದಿಂದ ಹೊರತಿಲ್ಲ.  ಹೈದರಾಬಾದ್‌ನ ವಿವಿಧೆಡೆಗಳಲ್ಲಿ ಆಮ್ಲ ಮಳೆ ಬಿದ್ದ ವರದಿಯಾಗಿದೆ.  ಆದರೆ ಈ ಆಮ್ಲ ಮಳೆ ಹೆಚ್ಚಿನ ಹಾನಿ ಮಾಡುವಷ್ಟು ತೀರ್ವವಾಗಿಲ್ಲ ಹಾಗೂ ಇದು ಮುಂದುವರೆದರೆ ಮುಂದಾಗುವ ಹಾನಿಗಳ ಸೂಚನೆಯನ್ನು ಕೊಟ್ಟಿದೆ.  ಮಥುರಾ ತೈಲ ಶುದ್ಧಿಕರಣ ಕಾರ್ಖಾನೆಯಿಂದ ಹೊರ ಬರುವ ಆಮ್ಲ ಅನಿಲಗಳು, ಆಗ್ರಾದ ತಾಜ್‌ಮಹಲ್‌ನ ಸೌಂದರ್ಯಕ್ಕೆ ಕುತ್ತಾಗಿದೆ.  ಭರತ್‌ಪುರ ಪಕ್ಷಿಧಾಮದ ಸರೋವರವು ಆಮ್ಲಾಂಶ ಹೊಂದಿರುವುದರಿಂದ ನೀರ ಹಕ್ಕಿಗಳು ಭೇಟಿ ಕೊಡುವುದನ್ನು ನಿಲ್ಲಿಸಿವೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...