Home / ಕವನ / ಕವಿತೆ / ಒಂದು ಆಲದ ಮರ

ಒಂದು ಆಲದ ಮರ


ಈ ಆಲದ ಮರವನ್ನು ನೋಡಿ: ಇದರ ಕೆಳಗೆ ಯಾವ ಮಕ್ಕಳೂ
ಆಡಲಿಲ್ಲ, ಇದರ ಎಲೆಗಳು ಗಾಳಿಯ ಓಟಕ್ಕೆ ಗಲಗಲಿಸಲಿಲ್ಲ,
ಇದರ ಕೊಂಬೆಗಳಿಂದ ಯಾರೂ ನೇಣುಹಾಕಿಕೊಳ್ಳಲಿಲ್ಲ-
ಎಂದರೆ ನಿಮಗೆ ಆಶ್ಚರ್ಯವಾಗುತ್ತದೆಯೆ?
ಅತ್ಯಂತ ನೀರಸವಾದ ಈ ಮರದ ಕಾಂಡದ ಮೇಲೆ
ಚುನಾವಣಾಪತ್ರಗಳನ್ನು ಅಂಟಿಸುವುದಿತ್ತು.  ಈ ದಾರಿಯಾಗಿ ಹೋಗುವ
ಕೆಲಸದ ಹೆಂಗಸರು ಮರೆಯಲ್ಲಿ ಕೂತು ಉಚ್ಚೆ
ಹೊಯ್ಯುವುದಿತ್ತು.  ಒಮ್ಮೆ ಕೆಲವು ಪಡ್ಡೆಹುಡುಗರು ಇದರ ಮೇಲೆ
ಏನೇನೋ ಹೆಸರುಗಳನ್ನು ಕೊರೆಯಲು ಪ್ರಯತ್ನಿಸಿದ್ದರು.


ಈ ಆಲದ ಮರವನ್ನು ಗಮನಿಸಿ:  ಇದರ ತೊಗಟೆಗಳು
ಒಬ್ಬ ವೃದ್ಧನ ಮೈಯಂತೆ ಸುಕ್ಕುಗಟ್ಟಿವೆ ಎಂದರೆ
ಏನನ್ನೂ ಹೇಳಿದಂತಾಗಲಿಲ್ಲ-ಯಾಕೆಂದರೆ ನಿಜವಾಗಿ ಹೇಳುವುದಿದ್ದರೆ
ಇವು ಮರಗಟ್ಟಿವೆ.  ಮತ್ತು ಇದರ ಬಳಲುಗಳು ಬೆರಳಿಲ್ಲದ
ತೋಳುಗಳಂತೆ ಇಳಿಬಿದ್ದಿವೆ ಎಂದರೆ ಈ ಆಲದಮರವನ್ನು
ಬಣ್ಣಿಸಿದಂತಾಗಲಿಲ್ಲ.  ಯಾಕೆಂದರೆ ಅದು ಮನಸ್ಸಿಗೆ ತರುವುದು
ಶನಿವಾರ-ರವಿವಾರವೆಂದಿಲ್ಲದೆ ಈ ಪೇಟೆಯ ಬೀದಿಗಳಲ್ಲಿ
ಕೈಚಾಚುವ ಭಿಕ್ಷುಕರನ್ನು.


ಹೀಗೆ ನಾವು ಹೋಲಿಕೆಗಳನ್ನು ಕೊಡುವಾಗ ಕೆಲವು ಸಂದರ್ಭಗಳಲ್ಲಿ
ಮರವು ಮನುಷ್ಯನನ್ನೂ ಮನುಷ್ಯನು ಮರವನ್ನೂ
ಸೂಚಿಸುವ ಕಾರಣ
ಹೋಲಿಸದಿರೋಣ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...