Home / ಕವನ / ಕವಿತೆ / ಉಮರ ಸಂದೇಶ

ಉಮರ ಸಂದೇಶ


ನಶ್ವರವು ಜಗದಲ್ಲಿ ನರನ ಬಾಳದರಿಂದ
ಇರುವಲ್ಪದಿನಗಳಲಿ ವ್ಯಥೆ-ಚೆ೦ತೆಯೇಕೆ?
ಮತ್ಯುವೊ೦ದತಿಸತ್ಯವಾಗಿರಲು ನಾವಿಂದು
ಸುಖ ಹೀರಬೇಕು; ನಾಳೆಯನೆಣಿಸಬೇಕೇ?


ಸತ್ತ ಮೇಲೇನೆಂದು ತಿಳಿದವರು ಯಾರಿಲ್ಲ.
ಎಷ್ಟೊ ಜನ ಹೋಗಿಹರು, ಬಂದವರ ಕಾಣೆ.
ಸೊಗವಡುವುದೇ ನಾಕವಳಲುವುದೆ ದಿಟ ನರಕ.
ಸತ್ತ ಮೇಲೆಲ್ಲರೂ ಒ೦ದು ಹಿಡಿ ಮಣ್ಣೇ.


ವಿಧಿಯದೃಷ್ಟದ ಬಲುಮೆ ನರನ ಕುಣಿಸುವುದಿಲ್ಲಿ.
ಬಂದುದನ್ನನುಭವಿಸಬೇಕು. ಕೊರಗುವುದೇ?
ಹಿರಿಯಾಸೆ ಬೇಡ, ಮಿತ ಸರಳತೆಯೆ ಸಾಕೆಮಗೆ.
ಇಹ ಸುಖವು ಶೂನ್ಯವೆನೆ ಪರವು ದಿಟವಿಹುದೇ?


ಪ್ರೇಮವೆಂಬುದೆ ಮುಖ್ಯ, ದ್ರಾಕ್ಷಾಸವವೆ ಸೌಖ್ಯ,
ನಲ್ಲೆಯುಗುರಿನ ಸಿತಾರದ ಮಿಡಿತದಿಂಪು,
ಮನದನ್ನೆ ತುಟಿಯೊತ್ತು, ನಲ್ಗಬ್ಬ ಬಳಿಯಿರವು,
ಇಷ್ಟಿರಲು ರೊಟ್ಟಿಯಿರೆ ಅದೆ ಸಗ್ಗ ಸೊಂಪು


ಸತ್ಯವಾವುದೊ ಏನೊ, ಒಬ್ಬೊಬ್ಬರೂಂದೊಂದು
ನುಡಿಯುವರು: ಹೇಳಿಕೆಯೊಳಲ್ಲವೊಮ್ಮತವು
ಆಯುಸ್ಸು ಮಿತವಿಹುದು, ಚಿ೦ತಿಯಮಿತವದಿರಲು
ಬೇಕು ದೊರೆತಷ್ಟು ಸುಖವುಲ್ಲಾಸದಿರವು


ಪುಣ್ಯವೋ ಪಾಪವೋ ಮಸಣದೊಳಗೊಂದೆ ತೆರ
ನಮ್ಮ ಮೈ ಮಣ್ಣಾಗಿ ಘಟವಾಗಬಹುದು.
ಇಂದು ಮನವನು ಸೂರೆಗೊಂಡ ಸೊಬಗೇ ನಾಳೆ
ದೂಳಿನಲಿ ದೂಳಾಗಿ, ತಿರುಗಿ ಹೂವಹುದು


ಎಷ್ಟು ಸುಖ ಪಡೆದಷ್ಟು ಲಾಭವೇ ನಮಗಹುದು.
ನಶ್ವರದ ಲೋಕದಲಿ ತಡದಿರವು ಸಲ್ಲ
ಬಾ ಹೀರು ಮಧುವನ್ನು ತಡವೇಕೆ? ತಡೆಯೇಕೆ?
ಉಮರ ಸಂದೇಶವಿದು. ಆಲಿಸೀ ಸೊಲ್ಲ
*****
ಶ್ರೀ.ಡಿ.ವಿ.ಗು೦ಡಪ್ಪನವರ ‘ಉಮರನ ಒಸಗೆ‘ ಯನ್ನು ಓದಿದ ಮೇಲೆ ಬರೆದುದು.
೧೯೪೫

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...