Home / ಕವನ / ಅನುವಾದ / ಆಸ್ಪತ್ರೆಯಲ್ಲಿ

ಆಸ್ಪತ್ರೆಯಲ್ಲಿ

ಮೂಲ: ಜಯ ಗೋಸ್ವಾಮಿ

ಸ್ವಪ್ನಮೋಹಿತನಂತೆ ಸಾವನ್ನೂ ಬದಿಗಿಟ್ಟು
ನೀನು ನಿದ್ರಿಸುತ್ತಿರುವೆ
ನಿದ್ದೆ, ಎಚ್ಚರ, ಮತ್ತೆ ನಿದ್ದೆ ಎರಡೂ ನೆಲೆಗೆ
ಹೊರಳುತ್ತಲೇ ಇರುವೆ.
ನಾವು ಬಂದಿದ್ದೇವೆ ನಿನ್ನ ಕಾಣುವುದಕ್ಕೆ,
ನಿನ್ನ ಮಕ್ಕಳೊ ನಾವು
ಓ ಅರಸುಕುವರ, ಇದು ನಮ್ಮ ಭಾಗ್ಯ.

ನೀನು ಯುವಕನಲ್ಲ, ಇಲ್ಲಿ ಯುವಕರೆ ಇಲ್ಲ,
ಹೆಣ್ಣುಗಳ ತೋಳಲ್ಲಿ ತೋಳಿಟ್ಟು ಅವರೆಲ್ಲೂ
ಅಲೆಯುತ್ತಿದ್ದಾರೆ
ಮಳೆ ಸುರಿಯುವುದು ಸಂಜೆ ಬಾನೇ ಕಳಚಿದ ಹಾಗೆ,
ಯಾರೂ ಇಲ್ಲ ಇಲ್ಲಿ, ಪ್ರೀತಿಮಾತಾಡಲು
ಖಾಯಿಲೆ ಬಿದ್ದ ಕವಿಗೆ.

ಕಾಯಿಲೆಯೊ ಅಥವಾ ಸ್ವಪ್ನಮೋಹಿತನೊ?
ಮರುಳಾದಂತಿದೆ ಅವನು ಕನಸುಗಳಿಗೆ.

ಹಿರಿಯ ವ್ಯಕ್ತಿತ್ವವೊಂದು ಕನಸಿನುರಿಯಲ್ಲಿ ಬಿದ್ದು
ಸುಟ್ಟುಹೋಗುತ್ತಿದೆ,
ಆದರಿನ್ನೂ ನೀನು ಸ್ವಪ್ನಮಂತ್ರಗಳಲ್ಲಿ
ಅರ್ಥವೇನನ್ನೋ ಕಾಣುತ್ತಿರುವೆ.
ಎಲ್ಲ ವ್ಯಾಧಿಗಳನ್ನೂ ಪೃಥ್ವಿಯಾಚೆಗೆ ನಾವು ಗುಡಿಸಿಬಿಡುವಂತಾಗಲಿ,
ಎಲ್ಲ ವ್ಯಾಧಿಗಳೂ ಇಲ್ಲಿಂದ ತೊಲಗಲಿ.

ನಿಧಾನ ಮಳೆ ನಿಲ್ಲುವುದು, ಬರುತ್ತಾರೆ ಒಳಗೆ
ವರ್ಚಸ್ವೀ ತರುಣರು,
ಅಲ್ಲಿ ಕಾದಿದೆ ಅವರಿಗೊಂದು ಬೆರಗು;
ಆಗಷ್ಟೆ ಮುಗಿಸಿಟ್ಟ ಕವನ, ಬದಿಯಲ್ಲೇ
ಸಿಹಿತಿಂಡಿ ಪೊಟ್ಟಣ,
ಪಕ್ಕದಲ್ಲೇ ಒಂದು ಮುಗ್ಧ ಮಗುವಿನ ಹಾಗೆ
ನಿದ್ರಿಸುತ್ತಿದ್ದಾನೆ ವಿನಯ ಮಜುಂದಾರ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...