Home / ಲೇಖನ / ವಿಜ್ಞಾನ / ಗಾಢಂಧಕ್ಕಾರದಲ್ಲಿಯೂ ಚಿತ್ರ (ಎವಾ ಫೋಟಾಗ್ರಫಿ)

ಗಾಢಂಧಕ್ಕಾರದಲ್ಲಿಯೂ ಚಿತ್ರ (ಎವಾ ಫೋಟಾಗ್ರಫಿ)

ಕಗ್ಗತಲಲ್ಲಿ ಯಾವ ಬೆಳಕಿನ ಸಹಾಯವಿಲ್ಲದೇ ಚಿತ್ರ ಕ್ಲಿಕ್ಕಿಸುವ ಶೋಧನೆಗಳಾಗಿವೆ. ಇಂಥಹ ಚಿತ್ರಗಳನ್ನು ತೆಗೆದು ಪ್ರದರ್ಶಿಸಿದ ಪ್ರಥಮ ಸಂಶೋಧಕ ಎಂದರೆ ಬೇರ್‍ಡೆ, ಅವನ ಸಹಾಯಕರು. ಈ ಕ್ಯಾಮರಾವು ವಿದ್ಯುತ್ ಶಕ್ತಿಯನ್ನು ಉಪಯೋಗಿಸದೇ ಗಾಢಂಧಾಕ್ಕಾರದಲ್ಲಿಯೂ ಸಹ ೨೦೦ ಗಜಗಳ ದೂರದಲ್ಲಿ ನಿಂತಿರುವ ಮನುಷ್ಯನ ಅಥವಾ ಒಂದು ಮೈಲು ದೂರದಲ್ಲಿ ಕತ್ತಲೆಯಲ್ಲಿರುವ ಮನೆಯ ಚಿತ್ರಗಳನ್ನು ಸೆರೆಹಿಡಿಯ ಬಲ್ಲಸಾಮರ್ಥ್ಯ ಹೊಂದಿದೆ. ಇ.ವಿ.ಎ. ಸಾಧನದ ಕಾರ್ಯ ವಿಧಾನವು ಸಾಮಾನ್ಯ ಕ್ಯಾಮರಾದಂತೆಯೆ ಬೆಳಕಿನ ಬದಲು ವಸ್ತುವಿನಿಂದ ಹೊರಚಿಮ್ಮುವ ಕಿರಣಗಳನ್ನು ಸೆರೆಹಿಡಿದು ತೆಳುವಾದ ತೈಲದಿಂದ ಲೇಪಿತವಾಗಿರುವ ಮೆಲ್ಮೈ ಆ ವಸ್ತುವಿನ ಚಿತ್ರಣವನ್ನುಂಟುಮಾಡುತ್ತದೆ. ತೈಲ ಲೇಪಿತ ಪಟದ ಮೇಲೆ ಇನ್ಫ್ರಾರೆಡ್‌ಕಿರಣಗಳು ತಾಗಿದ ಭಾಗದಲ್ಲಿ ಅವುಗಳ ಶಾಖದ ತೀಷ್ಟತೆಯಿಂದಾಗಿ ತೈಲವು ಕರಗಿ ಆವಿಯಾಗಿ ಹೋಗುತ್ತದೆ. ವಸ್ತುವಿನ ವಿವಿಧ ಭಾಗಗಳಿಂದ ವಿವಿಧ ತೀಕ್ಷ್ಣತೆಯ ಕಿರಣಗಳು ತೈಲ ಫಲಕದ ಮೇಲೆ ಬಿದ್ದಾಗ ಆಯಾ ಭಾಗಗಳ ಪ್ರತಿರೂಪವು ಕಪ್ಪು ಬಿಳುಪಾಗಿ ಚಿತ್ರಿಸಲಾಗುತ್ತದೆ. ಇನ್ನೂ ಸ್ಪಷ್ಟವಾದ ಚಿತ್ರವನ್ನು ಇ.ವಿ.ಎ. ಸಾಧನದೊಂದಿಗೆ ಅಳವಡಿಸಿರುವ ಸಾಧಾರಣ ಕ್ಯಾಮರಾದಿಂದ ಪಡೆಯಬಹುದು.

ಎವಾಪೊರಾಗ್ರಫಿ ಒಂದು ಸಣ್ಣಪೆಟ್ಟಿಗೆಯಿಂದ ಮಾಡಲ್ಪಟ್ಟಿದೆ. ಇದರ ಒಂದು ಬದಿಗೆ ಗಾಜಿನ ಕಿಟಕಿ ಇದೆ. ಇದಕ್ಕೆ ಎದುರಾಗಿ ಎಣ್ಣೆಯಿಂದ ಲೇಪಿತವಾದ ಒಂದು ಪಟಲವಿರುತ್ತದೆ. ಇವೆರಡಕ್ಕೂ ನಡುವೆ ಇನ್ಫ್ರಾರೆಡ್ ಕಿರಣಗಳನ್ನು ಸೇರಬಲ್ಲ ಕೆಲವು ಸೂಕ್ಷ್ಮ ಉಪಕರಣಗಳಿರುತ್ತವೆ. ಸಾಮಾನ್ಯ ಬೆಳಕಿನ ಕಿರಣಗಳು ಈ ಕ್ಯಾಮರಾದ ಮೇಲೆ ಯಾವ ಪರಿಣಾಮವನ್ನು ಉಂಟುಮಾಡುವುದಿಲ್ಲ.

ಉಪಯೋಗಗಳು : E.V.A. ಕ್ಯಾಮರಾದ ಸಹಾಯದಿಂದ ಯುದ್ಧ ಕಾಲದಲ್ಲಿ ಶತ್ರುಗಳಿಗೆ ಗೊತ್ತಾಗದಂತೆ ಅವರ ಸೈನ್ಯದ ಚಿತ್ರಗಳನ್ನು ತೆಗೆಯಬಹುದಾಗಿದೆ. ಶತ್ರುಗಳ ಗುಪ್ತ ಕಾರ್ಯ ಸ್ಥಾನಗಳ ಛಾಯಾಚಿತ್ರಗಳನ್ನು ಗಾಢಾಂದಕ್ಕಾರದಲ್ಲಿಯೂ ಸೆರೆಹಿಡಿಯಬಹುದಾಗಿದೆ. ಭೂಗರ್ಭದಲ್ಲಿಡಗಿರುವ ಕಾರ್ಖಾನೆಗಳೂ ಸಹ ಬೆಕ್ಕಿನ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗುವದೇ ಇಲ್ಲ. ಕೈಗಾರಿಕಾರಂಗದಲ್ಲಿಯೂ ಇದರ ಉಪಯೋಗ ಇಲ್ಲದಿಲ್ಲ. ಯಂತ್ರಗಳು ಕೆಲಸ ಮಾಡುತ್ತಿರುವಾಗಲೇ ಅವುಗಳನ್ನು E.V.A.ಕ್ಯಾಮರಾಗಳಿಂದ ವಿಕ್ಷೀಸಿ ಯಾವ ಭಾಗಗಳನ್ನು ಬದಲಿಸಿ ಮುಂದೊದಗಬಹುದಾಗಿದ್ದ ಅಪಾಯವನ್ನು ತಪ್ಪಿಸಬಹುದು ಎಂದು ತಿಳಿಸುತ್ತದೆ. ರಾತ್ರಿಯ ಗಾಢಾಂಧಕಾರದಲ್ಲಿ ನೀರಿನಲ್ಲಿ ಮುಳುಗಿ ಹೋದ ಮನುಷ್ಯ ಅಥವಾ ಇತರ ಉಪಯುಕ್ತ ವಸ್ತುಗಳು ಇರುವ ಸ್ಥಳವನ್ನು ಗುರುತಿಸಲು E.V.A.ಸಾಧನದಿಂದ ಸಾಧ್ಯವಾಗುತ್ತದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...