Home / ಕವನ / ಕವಿತೆ / ಬೆಳದಿಂಗಳ ಬಾಲೆ

ಬೆಳದಿಂಗಳ ಬಾಲೆ

ತೋಟಕ ಬಾರೆ ಬೆಳದಿಂಗಳ ಬಾಲೆ
ತೋಟಕೆ ಬಾ ಊಟಕೆ ಬಾ
ಕಾದಿರುವೆನು ನಾ
ಬೆಳದಿಂಗಳ ಬಾಲೆ

ಎಂತು ಅರಳಿವೆ ನೋಡು ಇರುಳ ಹೂವುಗಳು
ಗಿಡಗಳ ಮೇಲೆ ನಿಂತು ಕಾದಿವೆ ಅವು ನಿನಗಾಗಿ
ಸಂಜೆ ಮಲ್ಲಿಗೆ ರಾತ್ರಿ ಮಲ್ಲಿಗೆ
ಇರುಳ ರಾಣಿಯರ ಕಂಪು ಹಗುರವಾಗಿ

ಇಬ್ಬನಿಯ ತಂಪು ಒಂದೊಂದು ಎಲೆಯಿಂದ
ಹನಿಯಾಗಿ ಬೀಳುವುದು ಹುಲ್ಲ ಮೇಲೆ
ತಿಳಿಮೋಡಗಳ ರಾಸಿ ಬಿಳಿಯಾಗಿ ಆಕಾಶ
ಗಾಳಿ ಸುಳಿಯುವುದು ಸ್ವಚ್ಛಂದದಿಂದ

ನೀ ಬಂದು ಮುಟ್ಟಿದರೆ ಮುಟ್ಟಿದುದು ಅಮೃತವೆ
ನೀ ಬಂದು ತಟ್ಟಿದರೆ ತಟ್ಟಿದುದು ಋತವೆ
ಕುಡಿದುದೇ ಪಾನ ಹಾಡಿದುದೆ ಗಾನ
ಮಾತನಾಡುವುದು ಯಾಮಿನಿಯ ಮೌನ

ಏನಿದದ್ಭುತವು
ಕಾನು ಬೆಳಗುವುದು ಕಾನನವು ಹೊಳೆಯುವುದು
ಜಗವೆ ತೊಳೆಯುವುದು
ಮನ ಬೆರಗಾಗುವುದು
ನೆಲಜಲ ಚರಾಚರವೆ ತುಡಿಯುವುದು
ಎದ್ದು ಕುಣಿಯುವುದು
ನಿನ್ನ ಆಗಮನಕೆ

ಗೀತ ನಿನ್ನದು ಸಂಗೀತ ನಿನ್ನದು
ರಾತ್ರಿ ಮುಗಿಯುವ ವರೆಗೆ
ಗಾಯನ ನಿನ್ನದು ನರ್‍ತನ ನಿನ್ನದು
ಇಡೀ ರಾತ್ರಿಯೇ ನಿನ್ನ ಸೆರೆಗೆ

ಗೆಜ್ಜೆ ನಿನ್ನದು ಹೆಜ್ಜೆ ನಿನ್ನದು
ಗೆಜ್ಜೆಪಾದದ ಲಜ್ಜೆಯೂ ನಿನ್ನದು
ಲಾಸ್ಯ ನಿನ್ನದು ಮೃದುಹಾಸ್ಯ ನಿನ್ನದು
ಮಧುರ ನಿನ್ನದು ಮಾಧುರ್‍ಯವೂ ನಿನ್ನದು

ಸಾವಿರ ವರ್‍ಷ ಬೇಡ
ಇನ್ನಿಲ್ಲದ ಹರ್‍ಷ ಬೇಡ
ನಿನ್ನೊಂದು ಸ್ಪರ್‍ಶವಲ್ಲದೆ
ನನಗಿನ್ನೇನು ಬೇಡ

ಕ್ಷಣವೊಂದೆ ಸಾಕು
ಅದುವೆ ಕಲ್ಪ ನನಗೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...