Home / ಕವನ / ಕವಿತೆ / ಎರಡು ಚಿತ್ರ

ಎರಡು ಚಿತ್ರ

ಹುಡುಗ ಹಾಡುತಿತ್ತು, ಮತ್ತೆ ಆಡುತಿತ್ತು,
ನಡುನಡುವೆ ಓಡುತಿತ್ತು;
ಹುಡಗ ಕೆಲೆಯುತಿತ್ತು, ಹಾಗೆ ಕುಣಿಯುತಿತ್ತು,
ಏನೋ ತೊದಲಾಡುತಿತ್ತು.
ಏನು ತಿಳಿಯತಿತ್ತೊ! ಏನು ಹೊಳೆಯುತಿತ್ತೊ!
ಕೈಹೊಯ್ದು ನಗುತಲಿತ್ತು;
ಏನು ನಿಟ್ಟಿಸುತಿತ್ತೊ! ಏನು ದಿಟ್ಟಿಸುತಿತ್ತೊ!
ಹಿಗ್ಗೊಂದು ಮಿಗುತಲಿತ್ತು.
ಒಮ್ಮೊಮ್ಮೆ ಬಂದದ್ದೆ ‘ಅಪ್ಪ ಅಪ್ಪಾ’ ಎಂದು
ತೊಡೆಗಳನ್ನಪ್ಪುತಿತ್ತು;
ಒಮ್ಮೆ ಮುನಿದಂತೆ ದುರುದುರನೆ ನೋಡುತ್ತಿತ್ತು,
ಎಲ್ಲವೂ ಒಪ್ಪುತಿತ್ತು.
ಮತ್ತೆ ಅಳುತಲು ಇತ್ತು, ಹುಚ್ಚುಚ್ಚು ನಗುತ್ತಿತ್ತು,
ಯಾಕೇನೊ ಚೀರುತಿತ್ತು;
ಮತ್ತೇನು ಮುಗುದೇನು? ಏನು ಮಾಡಿದ್ದೆಲ್ಲ
ಚೆಂದವೇ ತೋರುತಿತ್ತು.
* * * *

ಹಿರಿಯನಡ್ಡಾಡುತಿಹ, ಮನದೆಡೆಯಲಾಡುತಿಹ,
ಎದೆ ಹೊಕ್ಕು ನೋಡುತಿಹನು;
ಹಿರಿಯ ತೀರದ ದುಃಖವನ್ನು ತಾ ತಿರುತಿರುಗಿ
ಮನದೊಳಗೆ ತೋಡುತಿಹನು.
ತುದಿಸಿಗದ ತೊಡಕನ್ನು ಬಿಡಿಸಲೆಳಸುವನೊಮ್ಮೆ
ಬಿಡಿಸದೆಯೆ ಬಿಡುತಲಿಹನು;
ಎದೆಯ ಬೀದಿಯ ಬಳಸಿ, ಮನದ ಮಾರ್‍ಗವ ತುಳಿದು,
ಹಳೆ ಹಾದಿ ಹಿಡಿಯುತಿಹನು.
ಮುಳ್ಳಹಾಸಿಗೆ ಮಂಚ, ಹೊದೆಯೆ ಚಿಂತೆಯ ಕಂತೆ,
ಮೇಲೆ ಮಳೆಗರೆವ ಮುಗಿಲು;
ದಳ್ಳುರಿಯನಿಟ್ಟುಸಿರು ಬೀಸುವದು ಒಳಗೆಲ್ಲ,
ಉಸಿರಿಲ್ಲ ಒಮ್ಮೆ ನಗಲು.
* * * *

ಕರ್‍ಮಲೇಪವು ಇಲ್ಲ, ಬಗೆಯ ತಾಪವು ಇಲ್ಲ,
ಅಂದು ಒಂದು ನೀರ ಹೂವು;
ಮರ್‍ಮಭಿನ್ನರು ಮತ್ತೆ ಹೃದಯಭಿನ್ನರು ನಾವು
ಬುಡದೊಳಿಹ ಕೆಸರಠಾವು.
ಆಗಿ ಹುಣ್ಣಿಮೆಯ ಹಗಲು, ಗೌರಿಹುಣ್ಣಿಮೆ ಇರುಳು,
ಹೀಗಿಹುದು ಅದರ ದಿನವು;
ಚಿಗರಿಯಂದದಲಿಹುದು ದಿಂಕಿಡುವ ಅದರ ಮನ
ಕಿರಿಗರಿಯ ಹಾಗೆ ತನವು.
ಇಲ್ಲ ದುಃಖದ ಮಳೆಯು, ಇಲ್ಲ ಭೀತಿಯ ಚಳಿಯು
ಚಿಂತೆ ಸಂತಾಪವಿಲ್ಲ;
ಎಲ್ಲ ಸೊಗಸಿನ ಬೆಳೆಯು, ಎಲ್ಲ ಸೊಬಗಿನ ಕಳೆಯು,
ನಲಿವೊಲವು ಚೆಲವು ಎಲ್ಲ.
*****

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...