ಸನ್ನಿದ್ಧಿ

ಬದುಕು ಎಲ್ಲರದು ಬೆಳಕಾಗಲಿ
ಅವರ ಅಂತಃಕರಣ ಶುದ್ಧವಾಗಲಿ
ಹೃದಯ ಮಲೀನತೆ ಹೋಮ ಗೈಯಲಿ
ಸದಾ ನಾಲಿಗೆ ಮೇಲೆ ರಾಮ ನಾಮವಿರಲಿ

ಕ್ಷಣದ ಬಾಳಿದು ನಶ್ವರ ಜೀವನ
ಈ ಜೀವನವೊಂದೇ ಸುವರ್‍ಣಾವಕಾಶ
ನರ ಜನುಮದಲಿ ನಾಮ ಸಂಕೀರ್‍ತನ ಗೈಯಲಿ
ಈ ಬಾಳಿನಲ್ಲೆ ಪಡೆಯಲಿ ಮುಕ್ತಿ ವಿಶೇಷ

ನಮ್ಮ ಲಕ್ಷವು ಹರಿದಿದೆ ಆನಂದದಲಿ
ಆದರೆ ಆನಂದದ ಅರಿವು ನಮಗಿಲ್ಲ
ಸುಣ್ಣದ ನೀರೆಲ್ಲ ಹಾಲೆಂದು ನಂಬಿದಂತೆ
ಅಲ್ಪ ಸುಖದನುಭೂತಿ ಆನಂದವಲ್ಲ

ಜನಿಸಿ ಬಂದಾಗ ಸುದೈವಕ್ಕೆ ಲಭಿಸಿತ್ತು ದೇಹ
ಮತ್ತೆ ತಿಳಿಯಿತು ನನ್ನವರೆಂಬುವ ಮೋಹ
ನಾನು ನನ್ನದೆಂಬ ಬರೀ ಅಹಂಕಾರ ದಾಹ
ಎಸುಗುತ್ತಿದ್ದೇವೆ ಆ ಪರಮಾತ್ಮನಿಗೆ ದ್ರೋಹ

ನಮ್ಮ ಜ್ಞಾನವೆಲ್ಲ ಕೇವಲ ಉಳಿದಿದೆ ಸ್ವಾರ್‍ಥಕ್ಕೆ
ಮತ್ತೆ ಆಸ್ತಿ ಅಂತಸ್ತುಗಳ ಗಳಿಕೆಯಲಿ
ಹೋಗುವಾಗ ಬಾರದು ಈ ಮಾನವ ದೇಹ
ಭಜಿಸು ಮಾಣಿಕ್ಯ ವಿಠಲನ ಸನ್ನಿದ್ಧಿಯಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೨೯
Next post ಮಲ್ಲಿ – ೭

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…