Home / ಕವನ / ಕವಿತೆ / ಕರ್‍ಣಾಟಕ ಸೀಮೆಯಾಗೆ…

ಕರ್‍ಣಾಟಕ ಸೀಮೆಯಾಗೆ…

ಮುಂಗೋಳಿ ಕೂಗಿತ್ತು ಕನ್ನಡದ ಪದ ಹಾಡಿ
ರಥವೇರಿ ಬರುತ್ತಿದ್ದ ನೇಸರಗೆ
ಬೆಳ್ಳಕ್ಕಿ ಹಿಂಡಾಗ ಬರೆದಿತ್ತು ಸ್ವಾಗತವ
ಹಾರಾಡಿ ನೀಲಿ ಆಗಸದಾಗೆ
ಮೊಗ್ಗಾದ ಹೂವುಗಳು ಅರಳ್ಯಾವೊ ದಳ ತೆರೆದು
ಚೆಲ್ಲುತ್ತ ಕನ್ನಡದ ಕಸ್ತೂರಿಯ
ಉಣಿಸುತ್ತ ಕಂಪನ್ನು ಬಗೆಬಗೆಯ ಜೀವಕ್ಕೆ
ಸಾರೈತೊ ಈ ಮಣ್ಣಿನ ಮಹಿಮೆಯ
ಗಿರಿ ನವಿಲು ಕುಣಿದಿತ್ತು ಹಸಿರಾದ ಗರಿಬಿಚ್ಚಿ
ಕಾವೇರಿ ಹೊಳೆಯ ಅಂಚಿನಾಗ
ಕಂಡ ಕಣ್ ಸೆಳೆದಿತ್ತು; ಸೆರೆ ಹಿಡಿದು ಬಿಡದಿತ್ತು
ಕರ್ಣಾಟ ಸೀಮೆಯ ಗತ್ತಿನಾಗ
ಅಂಬಾ ಎನ್ನುರ ಗೋವು ಕಚ್ಚೆ ರುಮಾಲ ರೈತ
ಹೊಂಟಾರು ಚಿನ್ನದ ಮಣ್ಣ ಮ್ಯಾಗ
ಬೆವರ್‍ಹನಿ ಇಳಿಸುತ್ತ ಕೈಲಾಸ ತೋರ್‍ಯಾರೊ
ಸ್ವರ್ಗಾವೆ ಇಳಿದಂತ ಭೂಮ್ಯಾಗ
ಕಪ್ಪಾದ ತೆರೆ ಸರಿಸಿ ಬಂದ ಬೆಳಕಿನ ರಾಯ
ಕರುನಾಡ ಸೀಮೆಯ ಸಿರಿ ತೋರಿದ
ಇದ ಕಂಡು ಮನಸೋತು ಮೈದುಂಬಿದ ನನ್ನ
ಈ ಮಣ್ಣ ಹಾಡಿಂದ ಕವಿ ಮಾಡಿದ
*****
Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...