Home / ಕವನ / ಕೋಲಾಟ / ಸುಗ್ಗಿ ಪದ – ಜಾಗಡಿ ಪದ

ಸುಗ್ಗಿ ಪದ – ಜಾಗಡಿ ಪದ

ಅತಾಳ ಪಾತಾಳ ಸಾತಾಳ ರಸತಾಳ
ಭೂತಾಳದೊಳಗೊಂದು ಶಶಿ ಹುಟ್ಟಿ ಕೋಲೇ || ೧ ||

ಭೂತಾಳದೊಳಗೊಂದು ಶಶಿ ಹುಟ್ಟಿ
ಪಾತಾಳಕೆ ಬೇರೂ ಜಿಗಿದಾವೂ ಕೋಲೇ || ೨ ||

ಪಾತಾಳಕೆ ಬೇರೂ ಜಿಗಿದಾವಾ ಶಶಿಯಲ್ಲಿ
ಆಕಾಶಕೆ ಸೈವಾಗಿ ನೆಗುದಾವೇ ಕೋಲೇ || ೩ ||

ಆಕಾಶಕೆ ಸೈವಾಗಿ ನೆಗುದೀತಾ ಶಶೀ
ವೃಕ್ಷವೆಂಬ ಹೆಸರೂ ಬಂದೀತು ಕೋಲೇ || ೪ ||

ವೃಕ್ಷವೆಂಬ ಹೆಸರೂ ಬಂದೀತಾ ಶಶೀಗೇ
ಕಾಯಿ ಹಣ್ಣಾಗಿ ಬೆಳುಗೀತು ಕೋಲೇ || ೫ ||

ಕಾಯಿ ಹಣ್ಣಾಗಿ ಬೆಳುಗಿತಾ ವೃಕ್ಷಕ್ಕೆ
ನೂರ್ವೊಂದು ಕಪಿಗಳು ಯೆರುಗಾವೆ ಕೋಲೇ || ೬ ||

ನೂರ್ವೊಂದು ಕಪಿಗಳು ಯೆರುಗಾವಾ ವೃಕ್ಷಕ್ಕೆ
ಭೂಮೀಗ್ವೊಂದು ಹೆಗಲೂ ಯೆರುಗಾವೆ ಕೋಲೇ || ೭ ||

ಭೂಮೀಗ್ವೊಂದು ಹೆಗಲೂ ಯೆರುಗಾವಾ ವೃಕ್ಷಕ್ಕೆ
ಆಚೇರಿ ತಿಮ್ಮಣ್ಣ ಕಡುತಂದಾ ಕೋಲೇ || ೮ ||

ಆಚೇರಿ ತಿಮ್ಮಣ್ಣ ಕಡುತಂದಾ ಹೆಗಲಾ
ಗುಡುಗಾರ ಬೊಮ್ಮಣ್ಣ ಪಡತಿಕೆತ್ತಿದ ಕೋಲೇ || ೯ ||

ಪಡತಿಕೆತ್ತಿ ಬೆಳಗಿಟ್ಟ ಕೋಲಿಗೆ
ಹೊನೆ ಮಾಣ ದೇವ್ರ ಮುಂದೆ ಮಡುಗಿದರು ಕೋಲೇ || ೧೦ ||

ಹೊನೆ ಮಾಣ ದೇವ್ರ ಮುಂದೆ ಮಡಗೀದಾ ಕೋಲಿಗೆ
ಗಂದಾ ಹೂವನ್ನೆ ಪೂಸಿದರು ಕೋಲೇ || ೧೧ ||

ಗಂದಾ ಹೂವನ್ನೆ ಪೂಸಿದಾ ಕೋಲಿಗೆ
ಹಣ್ಣುವೀಳ್ಯಾವಾ ಇಟ್ಟಿದರು ಕೋಲೇ || ೧೨ ||

ಹಣ್ಣುವೀಳ್ಯಾವಾ ಇಟ್ಟಿದಾ ಕೋಲಿಗೆ
ಕಾಯೊಡದಿ ಕಯ್ಯಾ ಮುಗಿದಾರೂ ಕೋಲೇ || ೧೩ ||

ಕಾಯೊಡದಿ ಕಯ್ಯಾ ಮುಗಿದಾರಾ ಕೋಲಿಗೆ
ಮಂಗಳಾರತಿಯಾ ಬೆಳಗಿದರು ಕೋಲೇ || ೧೪ ||

ಮಲವಯ್ಯನೆಂಬವ ಮಾದೊಡ್ ಶೂರ
ಮಲವಯ್ಯನೆಂಬವ ಮಾದೊಡ್ ಶೂರನು ಕೋಲೇ || ೧೫ ||

ಉಟ್ಟಾ ಮೈಲಿಗೆಯಾ ತೆಗೆಯನು ತೊಳೆಯಾನು ಮಲವಯ್ಯ
ಉಂಡಾ ಯಂಳ್ಳಕೆ ಅಂಜನು ಕೋಲೇ || ೧೬ ||

ಮಲವಯ್ಯಾ ನೆಂಬವ ಮರಕೆ ಹಬ್ಬಿದ ಬಳ್ಳೀ
ಎಂದೀಗೂ ಬಳ್ಳಿ ಹರಿಯಾವು ಕೋಲೇ || ೧೭ ||

ಇಂದೀಗಾ ಬಳ್ಳಿ ಹರಿಯಾವು ಹುಸಿಯಾವು
ಇಂದೀಗಾ ಮರನಾ ಬಿಡಲಾರೆ ಕೋಲೇ || ೧೮ ||

ಮಲವಯ್ಯ ಮಲಗೂವ ಮಂಚಾದ ಕೋಲಿಗೆ
ಜಂತಾದವೆಂಬೂ ಬೊಂಬೇಗಳು ಕೋಲೇ || ೧೯ ||

ಜಂತಾದವೆಂಬೂ ಬೊಂಬೇಗಳು ಮಂಚಕ್ಕೆ
ಇಂದಿಗಾ ಮರನಾ ಬಿಡಲಾರೆ ಕೋಲೇ || ೨೦ ||

ಕೋಲಣ್ಣ ಗಂಗೀಗೂ ಕೋಲಣ್ಣ ಗೌರಿಗೂ
ಕೋಲು ಕೋಲೇನಾ ಕೋಲೆನ್ನ ಕೋಲೇ || ೨೧ ||

ಕಾಲೂ ಬಾಲಾ ಚಂದಾ ಮೇಲೇ ಹೆಗಲೂ ಚಂದಾ
ಬಾಲದಲ್ಲೀ ಚಂದಾ ಬಸುವಯ್ಯಾ ಕೋಲೇ || ೨೨ ||

ಬಾಲದಲ್ಲಿ ಚಂದಾ ಬಸವಯ್ಯಾನಾ ಪಾದಕ್ಕೆ
ಹಣ್ಣುವೀಳ್ಯಾ ಇಟ್ಟು ಶರಣೆಂಬೆ ಕೋಲೇ || ೨೩ ||

ಹಣ್ಣುವೀಳ್ಯಾ ಇಟ್ಟು ಏನಂದಿ ಶರಣಂಬೇ
ನಾವ ಮಾಡುವಾ ಕಾರ್ಯ ಜೀಯ ಎಂದು ಕೋಲೇ || ೨೪ ||

ಕಾಲು ಬಾಲಾ ಚಂದಾ ಮೇಲೆ ಪಾವ್ಡಾ ಚಂದಾ
ಬಾಲಾದಲ್ಲಿ ಚಂದಾ ಬಸುವಯ್ಯನ ಕೋಲೇ || ೨೫ ||

ಹಾಲಗಾಯೀ ವಡೂದೂ ಬಸವಯ್ಯನ ಪಾದಕ್ಕೆ
ಹಾಲಗಾಯೀ ವಡುದೂ ಶರಣಂಬೆ ಕೋಲೇ || ೨೬ ||

ಹಾಲಗಾಯೀ ವಡುದೂ ಏನಂದಿ ಶರಣಂಬೇ?
ನಾವ ಮಾಡೂವಾ ಕಾಯಕ ಜಂಬುವೆಂದೂ ಕೋಲೇ || ೨೭ ||

ಕಾಲೂ ಬಾಲಾ ಚಂದಾ ಮೇಲೇ ಶೊಂಬೂ ಚಂದಾ
ಬಾಲಾದಲ್ಲಿ ಚಂದಾ ಬಸುವಯ್ನ ಕೋಲೇ || ೨೮ ||

ಬಾಲಾದಲ್ಲಿ ಚಂದಾ ಬಸುವಯ್ನ ಪಾದಕ್ಕೆ
ಮಂಗಲಾರತಿಯಾ ಬೆಳಗಿರೇ ಕೋಲೇ || ೨೯ ||

ಮಂಗಲಾರತಿಯಾ ಬೆಳಗಿರೇ ಬಸುವಯ್ಯಗೇ
ನಾವು ಮಾಡುವಾ ಕಾರ್ಯಾ ಜಯವೆಂದೂ ಕೋಲೇ || ೩೦ ||
*****
ಹೇಳಿದವರು: ಶ್ರೀ ಮಂಜು ಬಡವ ನಾಯ್ಕ, ಹೊನ್ನಾಕುಳಿ, ೨೪/೧೦/೭೨

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...