Home / ಕವನ / ಕವಿತೆ / ಬೆರಳ ಕೇಳಿದರೆ ಕೈಯ ಕೊಡುವವನು

ಬೆರಳ ಕೇಳಿದರೆ ಕೈಯ ಕೊಡುವವನು

ಬೆರಳ ಕೇಳಿದರೆ ಕೈಯ ಕೊಡುವವನು
ಕೈಯ ಕೇಳಿದರೆ ಕೊರಳನೆ ಕೊಡುವವನು
ನಮ್ಮ ಏಕಲವ್ಯ
ಕೊರಳ ಕೇಳಿದರೆ ಒಡಲನ ಕೊಡನೆ
ತನ್ನ ಪ್ರಾಣವ ತೆರನೆ
ಹೇ ಗುರು ದ್ರೋಣ

ಆ ಶಿಷ್ಯನಿರುವಂಥ ಗುರುಗಳೆ ಗುರುಗಳು
ಆ ಕತೆಯಿರುವಂಥ ಭಾರತವೆ ಭಾರತ
ಆವತ್ತಿಗಾ ಕತೆ ಈವತ್ತಿಗೇನೋ
ಹೇ ಗುರು ದ್ರೋಣ

ಕಾಲ ಬದಲಾಗುವುದು ಕತೆ ಬದಲಾಗುವುದು
ಗುರು ಬದಲಾಗುವರು ಶಿಷ್ಯರು ಬದಲಾಗುವರು
ಗುರುಭಕ್ತಿಯೆನ್ನುವುದು ನಗೆಪಾಟಲಾಗುವುದು
ಏಕಲವ್ಯ ಬರೆ ಭಿಲ್ಲನಾಗುವನು
ಹೇ ಗುರು ದ್ರೋಣ

ಭಿಲ್ಲನೇ ಅವನು ಭಿಲ್ಲನೆನ್ನುವುದು ಸರಿ
ಬಿಲ್ಲುವಿದ್ಯೆಯಲಿ ಪರಿಣತನು ಅಹುದು
ಅವನಿಗೇತಕೆ ಒಂದು ಮೂರುತಿಯ ಭಯಭಕುತಿ
ಅದು ಎಂಥ ಗುರುವೊ ಅದು ಎಂಥ ಋಣವೊ
ಹೇ ಗುರು ದ್ರೋಣ

ಕತೆ ಯಾಕಿಲ್ಲಿ ತಡೆಯುತ ಹೋಯಿತೊ
ಸಾಮ್ರಾಜ್ಯಗಳ ತಲೆ ಮುಗಿಯಿಸಿತೊ
ಕಲಿಸಿದ ಗುರು ಕಲ್ಪಿಸಿದ ಗುರು ಮನದೊಳು ಸಂಕಲ್ಪಿಸಿದ ಗುರು
ಕನಸಲಿ ಕಾಣಿಸಿದ ಗುರು
ಎಲ್ಲ ಗುರುಗಳು ಜಗದಾದಿ ಗುರುವೆಂದು
ಶರಣಾಯಿತೊ
ಹೇ ಗುರು ದ್ರೋಣ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ