Home / ಕವನ / ಕವಿತೆ / ಗಿಳಿ ಮತ್ತು ಸೀತೆ

ಗಿಳಿ ಮತ್ತು ಸೀತೆ

ಹೇಳು ಗಿಳಿಯೆ ಹೇಳು ಇಂದೇಕೆ ನೀ ಮೌನ
ಕಣ್ಣೀರ ಸುರಿಸುತ್ತಾ ಕೊರಗುವೇಕೆ!
ಇಷ್ಟು ವರ್ಷಗಳಿಂದ ಜೊತೆ ಗೆಳತಿಯಾಗಿದ್ದ
ಸೀತೆ ಮಿಥಿಲೆ ತೊರೆದು ಹೋಗುವಳೆಂದೆ!

ಸೀತೆ ಮನ ತುಂಬಿದವ ಶ್ರೀರಾಮ
ಶ್ರೀರಾಮ ವರಿಸಿದ ಹೆಣ್ಣು ಸೀತೆ
ಇಬ್ಬರಾಸೆಗಳಿಂದು ಕೈಗೂಡಿ ಅವರಿಂದು
ಸತಿಪತಿಗಳಾಗಿಹುದು ದೈವಲೀಲೆ |

ಇಂದು ಮಿಥಿಲಾಪುರವೂ ವೈಭವದಿ ಮಿಂಚಿಹುದು
ಅರಮನೆಯ ತುಂಬೆಲ್ಲಾ ಜನಸಾಗರ
ಜನಕರಾಜನ ಕಣ್ಣು ತುಂಬಿ ನಿಂತಿದೆ ಇಂದು
ಸಂತೋಷದಲಿ ದುಃಖ ಕೂಡಿಕೊಂಡು |

ನೋಡು ಗಿಳಿಯೆ ನಿನ್ನ ಆ ಗೆಳತಿ ಸೀತೆಯನು
ಹಿರಿಯ ಸಂತಸದಲ್ಲು ದುಃಖಭಾವ
ಚಿಗುರು ಬೆರಳುಗಳಿಂದ ತಂದೆ ಕಣ್ಣೀರನ್ನು
ಒರೆಸಿ ನಗಿಸುತಲಿಹುದು ಕಾಣದೇನು!

ಸಲಹಿದಪ್ಪನ ಹೊರತು ಆತ್ಮೀಯರಾರಿಹರು!
ನೀನಲ್ಲವೇ ಅವಳ ಪ್ರೀತಿ ಗೆಳತಿ!
ನಿನ್ನ ಮರೆಯುವಳೇನೇ, ನಿನ್ನ ಬಿಟ್ಹೋಗುವಳೆ!
ತವರು ನೆನಪಿನ ಒಡವೆ ನೀನೆ ತಾನೆ!

ನೋಡು ಅರಮನೆ ಮುಂದೆ ಕನಕರಥ ನಿಂತಿಹುದು
ಶ್ರೀರಾಮ ಅದರಲ್ಲಿ ಕುಳಿತಿಹನು
ಕಣ್ಣ ಕುಡಿ ನೋಟದಲೆ ರಾಮ, ಸೀತೆಯ ಕರೆವ
ನಿನಗೆ ಆಯಿತೆ ಲಜ್ಜೆ! ಘಾಟಿ ನೀನು|
ನಿನ್ನ ಇನಿದನಿ ನಿನ್ನ ಇಂಪಾದ ಸವಿನುಡಿಯ
ಎಲ್ಲೂ ಕೇಳದೆ ಸೀತೆ ಹುಡುಕುತಿಹಳು
ಬಾ ನನ್ನ ತೊಡೆವೇರು ಎನುತ ಕರೆಯುತಿಹಳು
ಪಿಸುಮಾತು ಮೆಲು ದನಿಯ ದಾಟಿಯಲ್ಲಿ|

ನವ ದಂಪತಿಗಳ ನಡುವೆ ನನ್ನ ಇರುವಿಕೆ ಸರಿಯೇ
ಎಂದೇಕೆ ಬೇಸರ ಪಡುತಲಿರುವೆ ||
ಸೀತೆ ಪ್ರತಿರೂಪದಲಿ ಆ ರಥದ ಕೆಳೆಯು ನೀನು
ಪಯಣಿಸಮ್ಮ ಗಿಳಿಯೆ ಮುಂದೆ ನೀನು !
ಬಾ ಗಿಳಿಯೆ ರಥವೇರು ಸೀತೆ ಕರೆಯುತಲಿಹಳು
ಹೊತ್ತಾಯ್ತು ಇನ್ನೇಕೆ ಚಿಂತೆ ನಿನಗೆ!
ಮೌನ ಬಿಡು ಸುತ್ತೆಲ್ಲ ಚೈತ್ರ ಚೆಲುವಿದೆ ನೋಡು
ಹಾಡುತ್ತ ನೀ ಸಾಗು ಹೆಮ್ಮೆಯಿಂದ |
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...