Home / ಕವನ / ಕವಿತೆ / ನಾವು ದೇವರಲ್ಲ

ನಾವು ದೇವರಲ್ಲ

ನಾನು ರಾಜ್ಯವನ್ನಾಳಿದೆ, ರಾಜನಾಗಿ ಮೆರೆದೆ
ಜನತೆಯ ಹಿತಕೆ ನನ್ನಯ ತನಕ್ಕೆ

ನಾನು ದಾರ್ಶನಿಕನಾಗಿ ಜಗದಲಿ ಬೆಳೆದೆ
ಜನರ ದಾರಿದ್ರ್ಯವ ಕಳೆಯಲು ಯತ್ನಿಸಿದೆ

ನಾನು ಸಾಧೂ ಸಂತನಾಗಿ ಭೂಮಿಯಲ್ಲಿ ನಿಂತೆ
ಸಮಾಜಕ್ಕೆಲ್ಲ ಸಾಂತ್ವನ ಹೇಳಿದೆ

ನಾನು ಮಹಾತ್ಮನಾಗಿ ಮುನ್ನುಗ್ಗಿದೆ
ಮಹಾ ಜನತೆಯ ಸೇವೆಯನ್ನು ಗೈದೆ

ನಾನು ಧರ್ಮ ಸಂಸ್ಥಾಪಕನಾಗಿ ನಿಂತೆ
ಜಗ ಜೀವನದ ದಾರಿಯ ತೋರಿದೆ

ನಾವೆಲ್ಲಾ ಕೂಡಿ ಹೇಳಿದೆವು ಜಗದ ಜನರೇ
ನೀವೆಲ್ಲರೂ ಕೂಡಿ ಬಾಳಿರಿ ಎಂದು

ಆದರೆ… ನಾವೆಲ್ಲೂ ಹೇಳಲಿಲ್ಲ ನಮ್ಮನು
ದೇವರಂತೆ ಇಟ್ಟು ಪೂಜೆ ಮಾಡಿರೆಂದು

ನಾವೆಲ್ಲೂ ಹೇಳಲಿಲ್ಲ ನಮಗಾಗಿ ನೀವು
ಗುಡಿ ಗುಂಡಾರ ಮಸೀದಿ ಚರ್ಚ್ ಬಸದಿ ಕಟ್ಟಿರೆಂದು

ನಾವೆಲ್ಲೂ ಹೇಳಲಿಲ್ಲ ಆರಾಧಿಸುವ ಭರದಲಿ
ನೀವು ನೀವೇ ಕಿತ್ತಾಡಿ ಸಾಯಿರಿ ಎಂದು

ಅದೇಕೋ…. ಜನರೆ ನೀವು ಈ ರೀತಿಯಲ್ಲಿ
ಬದುಕು ನಡೆಸುತ್ತಿರುವಿರಿ ನಮಗೇನೂ ತಿಳಿಯದು

ನಾವೆಲ್ಲರೂ ದೇವರಲ್ಲ ನಿಮ್ಮಂತೆ ಮಾನವರು
ನಮಗಾಗಿ ನೀವು ಜೀವ ಕೊಡ ಬೇಕು ಏಕೆ?

ಜಗದ ಸೃಷ್ಟಿಗೆ ಕಾರಣನಾದ ದೇವರು ಯಾರೆಂದು
ನಮಗೇ ಇನ್ನೂ ತಿಳಿದಿಲ್ಲ

ನಮ್ಮನ್ನು ದೇವರಂತೆ ಮೂರ್ತಿ ಮಾಡಿ ಪೂಜೆ
ಮಾಡುವುದು ನಮಗೆ ಬೇಕಿಲ್ಲ

ನಮ್ಮೆಲ್ಲರ ಆಸೆ ಒಂದೇ ಮಾನವತೆಯ ಅರಿತು ಬಾಳಿರಿ
ಸುಖ ಸಮೃದ್ಧಿಯ ಬಾಳು ನಿಮ್ಮದಾಗಿರಲಿ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...