Home / ಲೇಖನ / ವಿಜ್ಞಾನ / ಅಪಾಯದ ಕರೆ ಗಂಟೆ ಹೊಡೆಯುವ ಸೇಪ್ಟಿಸೂಟ್

ಅಪಾಯದ ಕರೆ ಗಂಟೆ ಹೊಡೆಯುವ ಸೇಪ್ಟಿಸೂಟ್

ಅಪಾಯದ ಕಾರ್ಖಾನೆ, ಅಣು ವಿದ್ಯುತ್ ಕೇಂದ್ರ ಮತ್ತು ಅನಿಲಯುಕ್ತ ಕೇಂದ್ರಗಳಲ್ಲಿ ಕೆಲಸ ಮಾಡುವುದು ಮೈತುಂಬ ಎಚ್ಚರಿಕೆಯನ್ನಿಟ್ಟುಕೊಂಡೇ ಮಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಬೆಂಕಿ ತಗಲುವುದು. ಕೈ ಕಾಲುಗಳಿಗೆ ಜಖಂ ಆಗುವುದು. ಇತ್ಯಾದಿ ಅಪಾಯಗಳಾಗುತ್ತಲೇ ಇರುತ್ತದೆ. ಇಂಥಹ ಸ್ಥಳಗಳಲ್ಲಿ ಕೆಲಸ ಮಾಡುವ ಜನರಿಗಾಗಿ ಅಪಾಯ ರಹಿತ ಮತ್ತು ಅಪಾಯದ ಎಚ್ಚರಿಕೆಯನ್ನು ನೀಡುವ ಸೇಷ್ಟಿಸೂಟ್‌ಗಳು ರಚನೆಯಾಗಿವೆ.

ಇಂಥಹ ವಸ್ತ್ರಗಳನ್ನು ಅಮೇರಿಕಾದ ನ್ಯೂಮೆಕ್ಸಿಕೋದಲ್ಲಿರುವ ‘ಲಾಸ್ ಆಲಾಮೋಸ್’ ರಾಷ್ಟ್ರೀಯ ಪ್ರಯೋಗಶಾಲೆ ತಯಾರಿಸುತ್ತದೆ. ಮತ್ತು ಈ ಸೂಟ್‌ಗೆ ಪೆಟೆಂಟ್ ಸಹ ದೂರೆತಿದೆ. ಅಪಾಯಕಾರಿ ಪರಿಸ್ಥಿತಿಯಲ್ಲಿ ಈ ವಸ್ತ್ರದಲ್ಲಿರುವ ವಿಶೇಷ ವಿದ್ಯುತ್ ವಾಹಕಗಳು ತಕ್ಷಣ ಪ್ರೇರಿತವಾಗಿ ಅಪಾಯದ ಕರೆಗಂಟೆಯನ್ನು ಬಾರಿಸುತ್ತವೆ. ವಿವಿಧ ವಿಕಿರಣಗಳು, ವಿಷಾನಿಲಗಳು, ಜೈವಿಕ ಅನಿಲಗಳು ಇತ್ಯಾದಿಗಳನ್ನು ಇದು ತಡೆದು ಹಿಡಿಯುತ್ತವೆ. ಈ ಕಾರಣವಾಗಿ ಇಲ್ಲಿಯ ಕೆಲಸಗಾರರು ಭಯವಿಲ್ಲದೇ ಉತ್ಪಾದನೆಯನ್ನು ಮಾಡಬಹುದು. ಈ ಕಡೆ ಮನೆಯಲ್ಲಿ ಹೆಂಗಸರಿಗೂ ನೆಮ್ಮದಿ ಕೂಡ.

ಮೊದಲು ಪಾಲಿವಿನೈಲ ಆಲ್ಕೋಹಾಲ್ ಮತ್ತು ಉಪ್ಪುಗಳನ್ನು ಗ್ಲಿಸರಾಲ್‌ನಲ್ಲಿ ಕರಗಿಸಿ ಅರೆವಾಹಕ ಘನ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಇದಕ್ಕೆ ವಿದ್ಯುತ್ ವಾಹಕ ಪಾಲಿಮರ್ ಪದಾರ್ಥದ ಪದರವನ್ನು ಕೊಡಲಾಗುತ್ತದೆ. ಹೀಗೆ ತಯಾರಾದ ಬಟ್ಟೆಯಿಂದ ಸೂಟ್‌ಗಳನ್ನು ಹೊಲೆಯಲಾಗುತ್ತದೆ. ವಾಹಕ ಪದರನಲ್ಲಿ ವಿದ್ಯುತ್ ತಂತಿಯ ಸಂಪರ್ಕವಿರುತ್ತದೆ. ಅಪಾಯಕಾರಿ ಪರಿಸರವಿದ್ದಾಗ ವಿದ್ಯುತ್ ಮಂಡಲ ಪೂರ್ಣವಾಗಿ ಅಪಾಯದ ಗಂಟೆಯನ್ನು ಬಾರಿಸುತ್ತದೆ. ಈ ದಿಸೆಯಲ್ಲಿ ಅಲ್ಲಿಯ ಕಾರ್ಖಾನೆಗಳ ಕೆಲಸಗಾರರಿಗೆ ನೆಮ್ಮದಿ ಇದೆ. ಪರಿಸರ ಮಾಲಿನ್ಯದ ತೊಂದರೆ ಇರದೇ ಈ ಕೆಲಸಗಳಿಗೆ ಬಹಳೇ ‘ಡಿಮ್ಯಾಂಡ’ ಕೂಡ ಇದೆ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...