Home / ಲೇಖನ / ವಿಜ್ಞಾನ / ‘ಕುಂಭಕರ್ಣ’ ಹಮ್ಮಿಂಗ್ ಬರ್ಡ್

‘ಕುಂಭಕರ್ಣ’ ಹಮ್ಮಿಂಗ್ ಬರ್ಡ್

ಚಿತ್ರ: ಮಿಕೆ ಎಸ್ಟೆಸ್

ಜಗತ್ತಿನಲ್ಲಿ ಅತಿ ಬಲಾಢ್ಯವಾದ ಜೀವಗಳ ಮಾತು ಬಂದಾಗ ನಮ್ಮ ಕಣ್ಮುಂದೆ ಆನೆ ಸಿಂಹಗಳ ಚಿತ್ರ ಮೂಡುತ್ತದೆ. ಆದರೆ ಹಕ್ಕಿಗಳಲ್ಲಿ ಅತಿ ಬಲಾಢ್ಯ ‘ಹಮ್ಮಿಂಗ್ ಬರ್ಡ್’. ಮಧ್ಯ ಅಮೇರಿಕದಲ್ಲಿ ಮಾತ್ರ ವಾಸಿಸುವ ಈ ಹಕ್ಕಿಗಳಲ್ಲಿ ಸುಮಾರು ೭೫೦ ಜಾತಿಗಳಿವೆ.

ಹಮ್ಮಿಂಗ್ ಬರ್ಡ್ ನಿತ್ಯ ತನ್ನ ತೂಕದ ಮೂರುಪಟ್ಟು ಆಹಾರವನ್ನು ಸೇವಿಸುತ್ತದೆ! ಇದರ ನಾಲಿಗೆ ಇಡೀ ದೇಹದಷ್ಟೇ ಉದ್ದವಾಗಿದೆ! ಈ ನಾಲಿಗೆಯೆಂದರೆ ಪೊಳ್ಳಾದ ಎರಡು ಕೊಳವೆಗಳೇ ಎನ್ನಬಹುದು. ಈ ಕೊಳವೆಗಳ ಮೂಲಕ ಇದು ತನ್ನ ಮುಖ್ಯ ಆಹಾರವಾದ ಹೂಗಳ ಮಕರಂಧ ಮತ್ತು ಕ್ರಿಮೀಕೀಟಗಳನ್ನು ಎಳೆದುಕೊಳ್ಳುತ್ತದೆ. ಇದು ಸಕ್ಕರೆಯಿಂದ ಅಪರಿಮಿತ ಶಕ್ತಿಯನ್ನು ಪಡೆಯುತ್ತದೆ. ನಿದ್ರೆಯ ಮಟ್ಟಿಗೆ ಇದು ಕುಂಭಕರ್ಣನಂತೆ. ರಾತ್ರಿಯಿಡೀ ನಿದ್ದೆಯಲ್ಲಿ ಕಳೆಯುತ್ತದೆ. ನಿದ್ದೆಯಲ್ಲಿದ್ದಾಗ ಹೆಚ್ಚು ಕಡಿಮೆ ಸತ್ತಂತೆಯೇ ಇರುವ ಈ ಹಕ್ಕಿಯನ್ನು ಕೈಹಾಕಿ ಸುಲಭವಾಗಿ ಎತ್ತಿಕೊಂಡು ಬರಬಹುದು. ಮನುಷ್ಯನ ಸ್ಪರ್ಶದ ಅರಿವು ಕೂಡ ಆಗ ಇದಕ್ಕಾಗುವುದಿಲ್ಲ!

ಅಗಾಧ ಶಕ್ತಿ
ಇದು ಆಕಾಶದಲ್ಲಿ ಒಂದೆಡೆ ಸ್ಥಿರವಾಗಿ ನಿಲ್ಲಬಲ್ಲದು. ಮುಂದೆ ಸಾಗಿದಂತೆ ಹಿಂದಕ್ಕೂ ಸಾಗಬಲ್ಲದು. ಅಡ್ಡವಾಗಿ ಹಾರಬಲ್ಲದು. ನೇರವಾಗಿ ಮೇಲಕ್ಕೂ ಏರಬಲ್ಲದು. ಇದರ ರೆಕ್ಕೆಗಳು ಪ್ರತಿ ಸೆಕೆಂಡಿಗೆ ೫೫ ಸಲ ಬಡಿಯುತ್ತಿರುತ್ತವೆ. ಇದು ತಾಸಿಗೆ ೬೦ ಮೈಲು ವೇಗದಲ್ಲಿ ಹಾರಬಲ್ಲದು. ಈ ವೇಗದಲ್ಲಿ ಹಾರುತ್ತಿರುವಾಗ ಇದರ ರೆಕ್ಕೆಗಳು ಸೆಕೆಂಡಿಗೆ ೨೦೦ ಸಲ ಚಲಿಸುತ್ತವೆ! ಚಳಿಗಾಲವನ್ನು ಪನಾಮಾದಲ್ಲಿ ಕಳೆಯಲು ಇದು ೫೦೦ ಮೈಲು ಹಾರಿ ಮೆಕ್ಸಿಕೊ ದಾಟಿ ಪನಾಮವನ್ನು ತಲಪುತ್ತದೆ. ೧೨ ತಾಸುಗಳ ಈ ಪ್ರವಾಸದಲ್ಲಿ ಅದು ಮಧ್ಯದಲ್ಲೆಲ್ಲಿಯೂ ನಿಲ್ಲದು. ಇದು ಶೇಖರಿಸಿಕೊಳ್ಳುವ ಕೊಬ್ಬು ೬೦೦ ಮೈಲು ದೂರದವರೆಗೆ ಹಾರಲು ಅದಕ್ಕೆ ಸಾಲುವಷ್ಟಿರುತ್ತದೆ.

ಈ ಹಕ್ಕಿಗೆ ಭಯವೆಂಬ ಶಬ್ಧವೇ ಗೊತ್ತಿಲ್ಲ. ೬೦ ಮೈಲು ವೇಗದಲ್ಲಿ ಹಾರುವ ಅದರ ಚುಂಚು ಬಲು ಭೀಕರವಾದ ಅಸ್ತ್ರವಾಗಿರುವುದರಿಂದ ಅದು ಯಾವ ಹಕ್ಕಿಯನ್ನೂ ಕಾಗೆ-ಗಿಡುಗ-ಹದ್ದುಗಳನ್ನು ಕೂಡ ನಿರ್ಭಯದಿಂದ ಎದುರಿಸುವುದು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...