Home / ಕವನ / ಕವಿತೆ / ನನ್ನನ್ನು ನಾ ಕೊಂದು…

ನನ್ನನ್ನು ನಾ ಕೊಂದು…

ಚಿತ್ರ: ಉಲ್ರಿಕೆ ಮಾಯ್
ಚಿತ್ರ: ಉಲ್ರಿಕೆ ಮಾಯ್

ಬಿದಿದ್ದೇನೆ: ‘ಬಕ್ಬಾರ್‍ಲು’
ಹೇಗೋ ಉಸಿರು, ಬಿಗಿ ಹಿಡಿದಿದ್ದೇನೆ.
ಹೇಗಾದರೂ ಮಾಡಿ, ಬದುಕಬೇಕೆಂಬಾ ಆಸೆಯಲಿ, ‘ಅಂಗಾತ…’!
ವಿಲ ವಿಲ ಒದ್ದಾಡಿ, ಕಣ್ಣು, ಕಾಲು, ಕೈಗಳ ಬಡಿತ್ತಿದ್ದೇನೆ!
ಮೇಲೆ ಆಕಾಶ, ಕೆಳಗೆ ನೆಲ ನೋಡುತ್ತಿದ್ದೇನೆ…
ಮೈ ಹೆಪ್ಪುಗಟ್ಟುವ ತನಕ…! ಗಿರಗಿರನೇ ಬುಗುರಿಯಾದೆ.
ಐದೂವರೆ ಅಡಿ ಎತ್ತರದಾ ನಾನೊಬ್ಬ!
ಇಲ್ಲಿ… ಮನುಶ್ಯನೆಂದೇ ನನ್ನ ತಿಳಿದಿಲ್ಲರೊಬ್ಬ!
ಅಬ್ಬಾ! ಏಳು ಮಿಂಡ್ರಿಗಳಪ್ಪ!
*  *  *

ಕೋಟಿ, ಕೋಟಿ ಜನರ ಮಧ್ಯೆ…
ಯಾರಿಗೂ ಕಾಣುತ್ತಿಲ್ಲ! ನೆತ್ತಿ ಮೇಲೆ ಜನರ ಕಣ್ಣು!
ಯಾರಾದರೂ ಬಂದಾರು…
ಕೈಹಿಡಿದೆತ್ತಿ, ಗುಕ್ಕು ನೀರು, ಬಾಯಿಗೆ ಬಿಟ್ಟು,
ಗಾಳಿ ಬೀಸಿ, ಕೈಹಿಡಿದು,
ಎಬ್ಬಿಸುವರೆಂದು, ಜೀವ ಬಿಗಿ ಹಿಡಿದು, ಕಾದಿದ್ದೇನೆ!
*  *  *

ಅಕ್ಕ ಪಕ್ಕದಲಿ, ತುಳಿದು ಎಡವಿ ಹೋದವರ…
ಬಿಂಬ, ಪ್ರತಿಬಿಂಬವಾ ಕಂಡು, ಪುಲಕಿತಗೊಂಡಿದ್ದೇನೆ!
ಕಣ್ಣುಗಳಲಿ, ಕೂಗಿಕೂಗಿ… ಕರೆದಿದ್ದೇನೆ.
ಓಡುವವನ ಇಶ್ಟು ಸುಲಭದೀ, ಎಡವಿ ಕೆಡಿವಿದವರು…
ಈಗ ಮೈದಡವಿ, ಮೇಲೆತ್ತುವರೇನು?!
ಥೂ! ಘನ್ನು ಘಾತುಕರು!
ಅಸಲು ತಾಯ್ಗಿಂಡ್ರು…
ಏಳ್ಗೆ… ಸಹಿಸದ ಜನರ ನಡುವೆ,
ಬಲು ಅವಸರದಿ, ಎಡವಿ ಬಿದ್ದಿದ್ದು,
ತುಪ್ಪ ಜಾರಿ, ಕೊಚ್ಚೆಗೆ ಬಿದ್ದಂತಾತು!
*  *  *

ಈಗ ಜೀವ ಹೋಗುವ ಭಯವಿದೆ!
ಅಪ್ಪನ ಜೀತದ ‘ರಕ್ಕ’ದಲಿ,
ಕಲಿತದ್ದು ಸೊನ್ನೆಯೆಂಬುದೀಗ ತಿಳಿದು,
ಅಮ್ಮನ ಕೈ ತುತ್ತು, ‘ಬಲಹೀನ’ವೆಂದು ಅರಿತು,
ಹಾದಿ ಬೀದಿಯ ತುಂಬಾ, ಜನರ ‘ಆಡಂಬೋಲ’ ಕಂಡು,
ನರನಾಡಿಗಳೇ ಹುದುಗಿದವಲ್ಲ….?!
*  *  *

ತ್ವಗ್ಲು ಹದಾ ಮಾಡುವ ಚಮ್ಮಾರನ,
‘ಕಶ್ಟ’ ಮಾಡಿ, ಹೊಟ್ಟೆ ಹೊರೆವ ಶಿಷ್ಠರನ,
ಬಾಳ ಹಡುಗು, ಮಾಡುವ ಬಡಿಗನ,
ಮಡಿ ಮಾಡಿ, ದುಡಿದುಣ್ಣುವ ಮಡಿವಾಳರನ,
ಕರೆದಾಗ, ಕೆರಬಿಟ್ಟು, ಸರಸರ ಬರುವ ಕೂಲಿಕಾರನ,
ಹಳೆಕಾಲ್ಮಾರಿಗೆ, ಹೊಸ ಮೊಳೆ ಹೊಡೆವ, ಮಣೆಗಾರನ,
ಕಾಳು, ಕಡಿ, ತೂರಿ, ತುರಿಕೆಯೆಬ್ಬಿಸುವ, ಗರತಿಯರನ,
ಸಿಗಿದು, ‘ಆರ್‍ಬಾಡ್ಸಿ’ ಒಣಗಲಿಟ್ಟಿದ್ದಾರೆ!
ಬಳ್ಳಾರಿ ಜೈಲುಗೋಡೆಗಳ ಮಧ್ಯೆ…. ವೃಥಾ…ಽಽ
ಹಟ್ಟವರನ್ನು ಬಿಟ್ಟು,
ಇಣುಕಿ ನೋಡಿದವರಿಗೆ, ನೇಣು ಶಿಕ್ಷೆಯೆಂದರೇನು?!
ಈ ಹಲ್ಕಾ ವ್ಯವಸ್ಥೆ ಮಧ್ಯೆ…
ಇಂಥಾ ತಾಯಿಗಂಡರ ನಡುವೆ,
ನಾ ನ್ಯಾಯ, ನೀತಿಗಾಗಿ…
ಬಾಯಿ, ಬಾಯಿ, ಹಂಬಲಿಸಿ,
ಬಿದ್ದ ಸ್ಥಿತಿಯಲ್ಲೇ, ಹಗಲುಗನಸು ಕಾಣುತ್ತಿದ್ದೇನೆ!
ವಿಲವಿಲ ಒದ್ದಾಡಿ, ಒದ್ದಾಡಿ… ರಪ್ಪೆ ಬಡಿಯುತ್ತಿದ್ದೇನೆ!
*  *  *

ಈಗೀಗ ಮೊಂಡಾಗಿವೆ!
ಮೂಗು, ಮುಷಿಣಿ, ಈ ನನ್ನ ಹಲ್ಲೂಗಳೂ…
ಜೋತು ಬಿದ್ದ, ಎದೆ ಗುಂಡುಗಳೂ…
ತುಕ್ಕಿಡಿದ ರಂಪಿಗೆ, ಉಳಿ, ಕೊಡ್ತಿ, ಕ್ವಂಬು, ಇಕ್ಕಳಗಳೂ…
ಮೂಗರ್ಧ ಜನರ ನಡುವೆ, ಕಳೆಯುತ್ತಿದ್ದೇನೆ…
ನಾ ಕಳೆದು ಅಳಿದು, ಹೋಗುವಾ ಮುನ್ನ…
ಹುಡುಕಿ ಕೊಡುವ, ಹೃದಯ ಶ್ರೀಮಂತರಿದ್ದರೆ…
ಬನ್ನಿ! ನನ್ನ ಎದ್ದು ಕೊಡ್ರಿಸಿ, ಗುಕ್ಕು ನೀರು ಬಿಟ್ಟು,
ಬೆನ್ನು ಚೆಪ್ಪರಿಸಿ, ‘ನಾಲಿಗೆ ಪ್ರೀತಿ’ ತೋರಿ ಸಾಕು!!
*  *  *

ಈ ಕಪ್ಪು ನೆಲ ಕೆಂಪಾಯಿತಲ್ಲಾ?!
ಕೂಲಿಗಾಗಿ ಸಾಲು ಸಾಲು ಜನರಿಲ್ಲಿ…
ಕಲ್ಲಿಗೆ, ಮಣ್ಣಿಗೆ, ಮರಕ್ಕೆ, ಕೆರಕ್ಕೆ…
ಕರಮುಗಿದು, ಶಿರಬಾಗಿ, ಶರಣೆಂಬಾ… ಮೂರ್ಖರಿರುವಾಗ,
ತನ್ನಂತಿರುವಾ… ಮನುಜನ, ಕಣ್ಣೆತ್ತಿ ನೋಡದವರ, ಮಧ್ಯೆ-
ದನಗಳೆಶ್ಟೋ ವಾಸಿಯೆಂಬಾ ಘಾಸಿಲಿ,
ಮನದಲಿ, ಕೋಪ ಉಕ್ಕಿ- ಉಕ್ಕಿ- ಕೊನೆಗೆ ತಣ್ಣಗಾಗಿದ್ದೇನೆ!
ಬೆಟ್ಟದಲಿ… ಹುಲ್ಲಾಗಿ, ಮಲ್ಲಿಗೆಯಾಗಿ, ಮರವಾಗಿ, ಹಣ್ಣಾಗಿ,
ಹಳ್ಳದಾ ಚಿಲುಮೆಯಾಗಿ, ಹಸುವಾಗಿ, ಎತ್ತಾಗಿ,
ಕತ್ತೆ, ಕುದುರೆ, ಹಂದಿ, ನಾಯಿ, ಕಾಗೆ, ಕಲ್ಲಾಗಿ,
ಕೊನೆಗೆ… ಪರ್‍ಕೆ, ತಿರುಬೋಕಿಯಾದರೆಶ್ಟೋ ಚೆನ್ನ… ಚಿನ್ನ!!
ಎಂಬ… ಜಿಗುಪ್ಸೆಯಲಿ,
ಮನನೊಂದು, ನೊಂದು… ಬೆಂದು…
ನನ್ನನ್ನು ನಾ ಕೊಂದು… ಕೊಂದು…
ಇಂದು…
ಕಣ್ಣು ಮುಚ್ಚಿದೆ!!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...