Home / ಕವನ / ಕವಿತೆ / ಈ ಪೇಟೆಗೊಂದು ಒಳಚರಂಡಿ

ಈ ಪೇಟೆಗೊಂದು ಒಳಚರಂಡಿ

ಈ ಪೇಟೆಗೊಂದು ಒಳಚರಂಡಿ
ವ್ಯವಸ್ಥೆ ಬೇಕೆ ಬೇಡವೆ ಹೇಳಿ, ಹೋಟೆಲು
ಕಸಾಯಿಖಾನೆಗಳಿಂದ ಹರಿಯುವ ಕೊಚ್ಚೆ
ರೋಡಿನ ಮೇಲೆ ಹಪ್ಪುಗಟ್ಟುತ್ತದೆ.
ಜರಿಯಬೇಕೆ ಇಲ್ಲಿ, ಸಂಜೆಗೆ ಹಾಯಾಗಿ
ವಾಯು ಸೇವನೆಗೆ ಅಡ್ಡಾಡುವ ನಮ್ಮ ಮಂಡಿ?

ಹಾಗೇನೆ ಒಂದು ಸಾರ್ವಜನಿಕ ಮೂತ್ರ ದೊಡ್ಡಿ
ಇಲ್ಲದೆ ಬರುವ ಕಷ್ಟ ಎಲ್ಲರಿಗೂ ಗೊತ್ತು
ಈಗಿರುವ ಮರಗಿಡಗಳೆಷ್ಟು ಜನಕ್ಕೆ ಸಾಕು?
ಮುರಿದ ಗೋಡೆಗಳು ಬರುತ್ತವೆಷ್ಟು ದಿನಕ್ಕೆ?
ಒದ್ದೆಯಾಗಬೇಕೆ ಹೀಗೆ ಕ್ಷಣವೂ ಪುರುಸೊತ್ತಿಲ್ಲದ
ಆಧುನಿಕ ಮನುಷ್ಯನ ಚಡ್ಡಿ?

ಬೇಕು ಮುಂದರಿದ ಮಹಿಳೆಯರಿಗೊಂದು ಕ್ಲಬ್ಬು
ಒಂದು ಬ್ಯೂಟಿ ಸೆಲೂನು ಎಲ್ಲರಿಗೂ
ಒಂದು ಈಜುಕೊಳ.  ಹೊಸ ಆಶಯಗಳನ್ನು
ಒಳಗೊಳ್ಳುವುದಕ್ಕೆ, ಈ ಪೇಟೆಯ
ಸೌಂದರ್ಯಗಳನ್ನು ಹೆಚ್ಚಿಸುವುದಕ್ಕೆ, ಇದ್ದವರಿಗೆ
ಕರಗಿಸುವುದಕ್ಕೆ ತೊಡೆಗಳ ಕೊಬ್ಬು

ಬೇಡವೇ ಚಿಕ್ಕ ದೊಡ್ಡ ಪಾರ್ಕುಗಳು ಅಲ್ಲಲ್ಲಿ?
ಉದಾ: ಮುನಿಸಿಪಾಲಿಟಿ, ತಾಲೂಕಾಫೀಸು,
ತಲೆತಲಾಂತರಗಳ ಕುಟುಂಬಸ್ಥರ ಮನೆ
ಮುಂದೆ, ಎಲ್ಲರಿಗೂ ಕಾಣಿಸುವಂತೆ.  ಇಲ್ಲದಿದ್ದರೆ
ಈ ಸ್ಥಳೀಯ ಶ್ರೇಷ್ಠರ ಪ್ರತಿಮೆಗಳನ್ನು
ನಿಲ್ಲಿಸಬೇಕು ಯಾರು ಎಲ್ಲಿ?

ಕೊಡಬೇಕು ದೊಡ್ಡವರಿಗೆ ದೊಡ್ಡವರ ಸ್ಥಾನ
ಮುಂದಾಳುಗಳನ್ನು, ಮನೆತನ ಉಳ್ಳವರನ್ನು
ಗೌರವಿಸಬೇಕು, ಈ ನೆಲದ ದರಿದ್ರ ಧೂಳು
ಸೋಂಕದಂತೆ.  ಬರಿಗಾಲಲ್ಲಿ ನಡೆಯದವರನ್ನು
ಎಲ್ಲರೊಂದಿಗೆ ಮಲಗಿಸುವುದೆಂದರೇನು!
ಬೇಕು ಈ ಪೇಟೆಗೊಂದು ಸ್ಪೆಶಲ್ ಶ್ಮಶಾನ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...