Home / ಕವನ / ಕವಿತೆ / ನನ್ನ ಕನ್ನಡ

ನನ್ನ ಕನ್ನಡ

ನನ್ನ ಕನ್ನಡವೆಂತು ಬಾಳಿ ಬದುಕೀತು!
ಉನ್ನತದ ಶಿಖರವನ್ನೇರಿ ಮೆರೆದೀತು!

ನುಡಿಯೊಂದೆ ನಾಡೊಂದೆ ಜನವೆಲ್ಲ ಒಂದೆ
ನಡೆಯೊ೦ದೆ ಗುಡಿಯೊಂದೆ ಮನದಾಳ ಒಂದೆ
ಗುರಿಯೊಂದೆ ಸಿರಿಯೊಂದೆ ಸೌಭಾಗ್ಯ ಒಂದೆ
ಅರಿವೊಂದೆ ಇರುವೊಂದೆ ಜೀವಿತವದೊಂದೆ
ನೆಲವೊಂದೆ ಕುಲವೊಂದೆ ದೈವತವದೊಂದೆ
ಛಲವೊಂದೆ ಬಲವೊಂದೆ ಭವಿತವ್ಯವೊಂದೆ

ಈ ಕನಸು ಮೈಗೊಂಡು ಬರುವ ದಿನವೆಂದು!
ಈ ನನಸು ಫಲಿಸಿ ಬಹ ಮಾಗಿ ದಿನವೆಂದು!

ಕನ್ನಡವ ಎತ್ತಿ ಹದಗೊಳಿಪ ಜನ ಬೇಕು
ಕನ್ನಡವ ಬಿತ್ತಿ ಬೆಳೆ ತರುವ ಜನ ಬೇಕು
ಕನ್ನಡದ ಮಕ್ಕಳಿಗೆ ಕನ್ನಡವೆ ಊಟ
ಕನ್ನಡವೆ ಆಟ, ಕನ್ನಡವೆ ಸಿರಿನೋಟ

ಹೊಲದಿ ದುಡಿವವನಿರಲಿ ಕೂಲಿ ಆಳಾಗಿರಲಿ
ಜಲದ ಒಡಲನು ಅಗಿವ ಅಂಬಿಗನು ಇರಲಿ
ಸೌದೆ ಸೀಳುವನಿರಲಿ ಸೌದೆ ಮಾರುವನಿರಲಿ
ಕೌದೆ ಹೊಲಿಯುವನಿರಲಿ-ಹೊದೆವನಿರಲಿ

ಕಲ್ಲು ಕಡಿವವನಿರಲಿ ಹುಲ್ಲು ಕೊಯ್ವವನಿರಲಿ
ಬೆಲ್ಲ ಕಡಲೆಯ ಮಾರಿ ಜೀವಿಸುವನಿರಲಿ
ಬಲ್ಲ ಪ೦ಡಿತನಿರಲಿ ಮತ್ತೆ ಪಾಮರನಿರಲಿ
ಎಲ್ಲರಲಿ ಕನ್ನಡವೆ ಚಿಮ್ಮುತಿರಲಿ

ನಮಗಿರುವ ಭವಿತವ್ಯ ಕನ್ನಡಕೆ ಇಹುದು
ಸಮವದುವೆ ಅಷ್ಟಾ೦ಗ ಸಿದ್ಧಿಯಹುದು
ತಮತಮಗೆ ಕಂದಿರುವ ಪೌರುಷವು ಬಹುದು
ಅಮರತೆಯ ಬೀರಿ ಚಿರಕಾಲ ಬಾಳುವುದು

ವ್ಯವಹಾರ ವಾಣಿಜ್ಯವಿದರ ಅಡಿಗಲ್ಲು
ವ್ಯವಸಾಯದಾಕಳಿಗೆ ಹಾಕಿರುವ ಹುಲ್ಲು
ವ್ಯವಧಾನ ಕನ್ನಡದ ಅವಧಾನಿಗಳ ಸೊಲ್ಲು
ವ್ಯವಹರಿಸಿ ಉಲಿಯುವದು ನಮ್ಮ ಕಿವಿಯಲ್ಲು

ಕೊರತೆ ಎಂಬುದು ಇಲ್ಲ ನಮ್ಮ ಕನ್ನಡಕೆ
ಒರತೆಯಾಗಿಹುದದುವೆ ನಮ್ಮ ಜೀವಿತಕೆ
ಅರಿತಷ್ಟು ಆಳವಿಹ ಇಂಗಿತವು ಜಗಕೆ
ಸುರಿಸಿ ಸುಜ್ಞಾನವನು ತರುವ ಬೆಳಕೆ
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...