Home / ಲೇಖನ / ವಿಜ್ಞಾನ / ಅಂಗೈಯಲ್ಲಿ ಕಂಪ್ಯೂಟರ್ ಮೊಬೈಲ್

ಅಂಗೈಯಲ್ಲಿ ಕಂಪ್ಯೂಟರ್ ಮೊಬೈಲ್

ವೈಫೈ ಉಪಯೋಗಗಳು : ಮನೆಯಲ್ಲಿಯ ಹಿರಿಯರ ಆರೋಗ್ಯವನ್ನು ಆಗಿಂದಾಗ್ಗೆ ಎಲ್ಲಿದ್ದರೂ ವಿಚಾರಿಸಿ ಕೊಳ್ಳಬಹುದು. ಇಂಟೆಲ್‌ ಮೂಲಕ ಅವರ ಸ್ವಭಾವಗಳನ್ನು ಅಧ್ಯಯನ ಮಾಡಬಹುದು. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಈ ವೈಪೈ ಸಂಕೇತಗಳನ್ನು ನೀಡುತ್ತದೆ. ರೇಡಿಯೋ ತರಂಗಗಳನ್ನು ಪತ್ತೆ ಹಚ್ಚುವ ಚಿಪ್‌ನಲ್ಲಿ ನಿಮ್ಮ ವೈದ್ಯಕೀಯ ಇತಿಹಾಸವನ್ನು ಸಂಗ್ರಹಿಸಬಹುದು. ಅದನ್ನು ನಿಮ್ಮಗಡಿಯಾರದೊಳಗೋ, ಆಭರಣ ದೊಳಗೋ ಬಚ್ಚಿಟ್ಟು ಕೊಳ್ಳಬಹುದು. ಮಕ್ಕಳ ವಿಚಾರದಲ್ಲಿ ಇದು ತುಂಬ ಅನುಕೂಲ. ಶಾಲೆಯಲ್ಲಿರುವ ಆಯಾಕೂಡ ಇವನ್ನು ಕಂಪ್ಯೂಟರನಲ್ಲಿಹಾಕಿ ನೋಡಬಹುದು. ಮನೆಯಾಚೆ ಹೋದ ಮಕ್ಕಳು ಹೇಗಿದ್ದಾರಪ್ಪ ಎಂದು ತಲೆಕೆಡಿಸಿಕೊಳ್ಳುವ ಅಮ್ಮಂದಿರರಿಗೆ ವೈಪೈ ಇದ್ದರೆ ನಿಶ್ಚಿಂತೆ. ರೇಡಿಯೋ ತರಂಗ ಪತ್ತೆ ಹಚ್ಚುವ ಚಿಪ್‌ನಲ್ಲಿ ಮಕ್ಕಳ ಹೆಸರನ್ನು ಸಂಗ್ರಹಿಸಿಟ್ಟುಕೊಂಡರೆ ಸಾಕು. ಆ ಮೂಲಕ ಅವರೆಲ್ಲಿದ್ದರೂ ಅವರ ಜತೆ ಸಂಪರ್ಕ ಸಾಧಿಸಬಹುದು. ಕಾರು ಓಡಿಸುತ್ತಿರುವ ಮಗನನ್ನು ಹದ್ದುಬಸ್ತಿನಲ್ಲಿಡಬಹುದು. ವೈಫೈಯಲ್ಲಿ ಟಿ.ವಿ ಕಾರ್ಯಕ್ರಮಗಳನ್ನು ನೋಡಬಹುದು. ನಿಮಗಿಷ್ಟವಿರುವ ಕಾರ್ಯಕ್ರಮಗಳನ್ನು ರೆಕಾರ್ಡ್‌ ಮಾಡಿಕೊಳ್ಳಬಹುದು. ಅಷ್ಟೇಕೆ ನಿಮ್ಮ ಮನೆಯಲ್ಲೇನಾದರೂ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದರೆ, ಅದರ ನೇರ ಪ್ರಸಾರವನ್ನು ಸಂಬಂಧಿಕರಿಗೆ ತಲುಪಿಸಬಹುದು. ಅವರ ಹೆಸರಲ್ಲೊಂದು ವೆಬ್‌ಸೈಟ್ ಇದ್ದರೆ ಸಾಕಷ್ಟೆ. ನಿಮ್ಮಲ್ಲಿರುವ ಬೆಲೆಬಾಳುವ ವಸ್ತುಗಳ ಬಗ್ಗೆ ಪಕ್ಕದ ಅಂಗಡಿಗೆ ಮಾಹಿತಿ ಕೊಟ್ಟರೆ ಸಾಕು. ಅದಕ್ಕೆ ಯಾರಾದರೂ ಬೇಡಿಕೆ ಸಲ್ಲಿಸಿದರೆ ತಕ್ಷಣ ಅಂಗಡಿಯಾತ ನಿಮಗೆ ಮಾಹಿತಿ ತಲುಪಿಸಬಹುದು. ಹಾದು ಹೋಗುವ ದಾರಿಯಲ್ಲಿ ಟ್ರಾಫಿಕ್‌ಜಾಮ್ ಆಗಿದ್ದರೆ ತಕ್ಷಣ ಈ ಕಂಪ್ಯೂಟರ್‌ ನಿಮ್ಮನ್ನು ಎಚ್ಚರಿಸುತ್ತದೆ. ನೀವು ಪ್ರಯಾಣ ಮಾಡುತ್ತಿದ್ದರೆ ವಿಡಿಯೋ ಕಾನ್ಫರೇನ್ಸ್ ಮೂಲಕ ಮನೆಯವರ ಯೋಗ ಕ್ಷೇಮ ವಿಚಾರಿಸಬಹುದು. ಬೆನ್ನು ಮುರಿಯುವಂತಹ ಪುಸ್ತಕಗಳನ್ನು ಹೊತ್ತುತಿರುಗುವ ಮಕ್ಕಳಿಗೂ ಇದು ಅನುಕೂಲ. ನಮ್ಮೆಲ ಪಠ್ಯಗಳನು ಕಂಪ್ಯೂಟರ್ ಒಳಗೆ ಹಾಕಿ ಆರಾಮವಾಗಿ ಓಡಾಡಬಹುದು.

ಅಮೇರಿಕಾ ದೇಶದಲ್ಲಿ ಇನ್ನೊಂದು ವಿಶಿಷ್ಟವಾದ ಕಂಪ್ಯೂಟರ್ ಮೊಬೈಲ್ Phone ನನ್ನು ಕಂಡು ಹಿಡಿಯಲಾಗಿದೆ. ಇಲ್ಲಿಯ ಹಾಕಿನ್ಸ್ ಕಂಪನಿ ಹೊರತಂದಿರುವ ಹೊಸ ಮೊಬೈಲ್‌ಗೊಂದು ಕಂಪ್ಯೂಟರ್‌ ಕೀ ಬೋರ್‍ಡ್‌ ಕೂಡ ಅಟ್ಯಾಚ್ ಆಗಿದೆ. ಮತ್ತೊಂದು Phone ಮುಚ್ಚಿಕೊಂಡಿದ್ದರೆ ಸೆಲ್ Phone ಬಿಚ್ಚಿದರೆ ಕಂಪ್ಯುಟರ್ ಕಾಣುತ್ತದೆ. ಇನ್ನು ಕೆಲವು ವರ್ಷಗಳ ನಂತರ ಯಾರೂ ಕಂಪ್ಯೂಟರನ್ನೇ ಕೊಂಡುವಂತಿಲ್ಲ. ಏಕೆಂದರೆ ಈ ಪ್ರತಿ ಮೊಬೈಲ್ Phone ರಲ್ಲಿಯೇ ಎಲವೂ ಇದೆ; ಎಂದು ನಿರ್ಮಾಪಕರು ಹೇಳುತ್ತಾರೆ. ಈ ಫೋನ್‌ನಲಿ ಮಾತಾಡಿದ್ದು ಸೊಗಸಾದ ಭಾಷೆಯಲ್ಲಿ ರೀಕಾರ್ಡ್‌ ಆಗುತ್ತದೆ. ಅದನ್ನೇ ದಾಖಲೆಯಾಗಿ ಸೆವ್ ಮಾಡಿಕೊಳ್ಳಬಹುದು. ಬಾಯಿಮಾತು ಎಂದು ತಳ್ಳಿಹಾಕುವಂತಿಲ್ಲ ಮಾತಾಡಿದ್ದೆಲ್ಲ ಅಲ್ಲಿ ಸಂಗ್ರಹವಾಗಿ ಬಿಡುತ್ತದೆ. ಆಗ ಮಾತಿಗೆ ನಿಜಕ್ಕೂ ಬೆಲೆ ಬರುತ್ತದೆ. ಹತ್ತು ವಾರಗಳ ಹಿಂದೆ ಹೇಳಿದ್ದನ್ನು ಈವೊತ್ತು ಆಡಿದ ಮಾತಿಗೆ ತಾಳೆ ಹಾಕಬಹುದು. ಸ್ಯಾಮ್ಸಂಗ್ ಸಂಸ್ಥೆ ಉಪಗ್ರಹ ಚಾನಲ್‌ಗಳ ಸಂಕೇತಗಳನ್ನು ಸ್ವೀಕರಿಸುವಂತಹ ಫೋನನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇಡೀ ಜಗತ್ತು ನಿಮ್ಮ ಮುಷ್ಟಿಯಲ್ಲಿರುತ್ತದೆ. ನೀವು ಎಲ್ಲಿಗೆ ಹೋಗುತ್ತೀರಿ? ಏನು ಮಾಡುತ್ತೀರಿ? ಅನ್ನುವುದನ್ನು ನಿಮ್ಮ ಪೋಲಿಸರಿಂದ ಹಿಡಿದು ನಿಮ್ಮ ಹೆಂಡತಿಯ ತನಕ ಯಾರಿಗೆ ಬೇಕಾದರೂ ತಿಳಿಸಬಹುದು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...