Home / ಕಥೆ / ಕಾದಂಬರಿ / ಮಲ್ಲಿ – ೪೦

ಮಲ್ಲಿ – ೪೦

ಬರೆದವರು: Thomas Hardy / Tess of the d’Urbervilles

ತಿಲಕರ ಜಯಂತಿಯದಿನ ಹುಡುಗರು ತಿಲಕರ ಪಟ ಮೆರ ವಣಿಗೆ ಮಾಡಬೇಕೆಂದಿದ್ದಾರೆ. ಅದಕ್ಕೆ ಎಲ್ಲಾ ಸಿದ್ಧತೆಗಳೂ ನಡೆದಿದೆ.

“ತಿಲಕರ ಪಟವೊಂದೇ ಸಾಕೇನೋ ? ” ಒಬ್ಬ ಕೇಳಿದ.

“ಉಂಟೇ? ಇಲ್ಲಿಂದ ಹತ್ತು ಹೆಜ್ಜೆ ಹೋಗುವುದರೊಳಗಾಗಿ ಪೋಲೀಸಿನವರು ಬಂದು ನಮ್ಮನ್ನು ರಾಜದ್ರೋಹಿಗಳು ಎಂದು ಹಿಡಿದುಹಾಕಿಬಿಡುತ್ತಾರೆ.”

“ಓ ಬಿಟ್ಟೆ! “ಹಾಗೇನಾದರೂ ಆದರೆ ನಮಗೆ ಎರಡು ಮದ್ದಾ ನೆಗಳಿವೆ ಹೋರಾಡುವುದಕ್ಕೆ.”

“ಯಾರಪ್ಪಾ ! ಕಾಂಗ್ರೆಸ್ ಅನ್ನುವುದಕ್ಕೆ ಮೈಸೂರಿನಲ್ಲಿ ಇನ್ನು ಕಾಂಗ್ರೆಸ್ ಬಂದಿಲ್ಲ. ಬೆಂಗಳೂರಿನಲ್ಲಿ ಹುಟ್ಟಿದ ಕಾಂಗ್ರೆಸ್ ಕೆಂಪಾಂ ಬುಧಿಯಲ್ಲಿ ಹತ್ತು ಸಾವಿರ ಜನದ ಕೈಲಿ ತಿಲಕರಿಗೆ “ಧರ್ಮೋದಕ ಕೊಡಿಸಿತು. ತಾನೂ ಧರ್ಮೋದಕ ತೆಗೆದುಕೊಂಡಿತು. ಇನ್ನು ಯಾವುದು ?”

“ಅಲ್ಲಯ್ಯಾ, ನಮ್ಮಲ್ಲಿ ಹೆತ್ತು ಜನಕ್ಕಾಗಿ ಹೋರಾಡುವ ಸಂಘ ಗಳು ಯಾವವೂ ಇಲ್ಲ. ಆದಕ್ಕೆ. ಅದೃಷ್ಟ ಇಬ್ಬರು ಗಂಡುಗಳು ಇದ್ದಾರೆ.”

“ಒಂದು ತಾತಯ್ಯ ಇನ್ನೊಂದು ರಾವ್‌ಬಹದ್ದೂರ್ರೋ ?”

“ಮತ್ತೆಯಾರು? ಹೌದು. ಇನ್ನೊಂದು ಗೊತ್ತೇನು ? ಮಿಲ್ಲರ್ ಕಮಿಟಿ ರಿಪೋರ್ಟ್ ಬಂತಲ್ಲಾ! ಆಗಲೂ ಆತ ಇದು ಬೇಡ ಅಂದನಂತೆ. ಚಾಕರಿ ಅಂದರೆ ಕೂಲಿ. ಕೂಲಿ ಮಾಡೋಕೆ ಜಾತಿ ಏನು ಎಂದನಂತೆ. ಆದರೆ ಆತನಮಾತು ನಡೆಯಲಿಲ್ಲವಂತೆ. ಆಗಿ ನಿಂದ ಆತ ಹಿಂದೆ ಹಿಂದೆ ಇದ್ದಾನೆ ಅಂತಾರೆ”

“ಡಯಾರ್ಕಿ ಬಂತು ಸಜ್ಜನರೆಲ್ಲ ಹಿಂದೆ ಬಿದ್ದರು. ನೋಡು. ಕಾಂಗ್ರೆಸ್ಸಿನವರಂತೂ ಸರಕಾರಕ್ಕೆ ವಿರುದ್ಧ. ಲಿಬರಲ್ಸ್‌ನಾದರೂ ಮಾಡರೇಟ್ಸನಾದರೂ ಮಂತ್ರಿಗಳನ್ನು ಮಾಡಬಾರದಾಗಿತ್ತೇ ? ಎಲ್ಲಾ ಬಿಟ್ಟು, ಔಟ್ ಅಂಡ್ ಔಟ್ ಕಮ್ಯೂನಲಿಸ್ಟನೇ ಮಂತ್ರಿ ಗಳನ್ನು ಮಾಡಬೇಕಾಗಿತ್ತೇ ?”

“ಬಿಡೋ ಹುಚ್ಚ. ಇವೆಲ್ಲ ಡಿವೈಡ್ ಎಂಡ್ ರೂಲ್ ಪಾಲಿ ಸಿಯ ಪ್ರಭಾವ.”

“ಅದೆಲ್ಲ ಇರಲಿ. ಸಧ್ಯದ ಕೆಲಸ ಹೇಳಯ್ಯ ! ?

“ನಾವು ಬರಿಯ ತಿಲಕರ ಫೋಟೋ ತೆಗೆದುಕೊಂಡು ಹೋದರೆ ಆಗುವುದಿಲ್ಲ… ಮಹಾರಾಜರ ಫೋಟೋನೂ ತೆಗೆದುಕೊಂಡು ಹೋಗ ಬೇಕು.?

“ಅಷ್ಟೇ ಅಲ್ಲ ಸಾರ್. ಬೆಂಗಳೂರು ಹುಡುಗರು ಗಾಂಧಿಯವರ ಫೋಟೋನೂ ತೆಗೆದುಕೊಂಡು ಹೋಗುವರಂತೆ. ನಾವೂ ಹಾಗೇ ಮಾಡೋಣ.”

“ಸರಿ ಸರಿ. ಒಂದು ಸತ್ತವರಿಗೆ ಭಕ್ತಿ. ಇನ್ನೊಂದು ಮೈಸೂರಿನ ರಾಜಭಕ್ತ : ಮತ್ತೊಂದು ಮುಂದಿನ ಇಂಡಿಯದ ಭಕ್ತಿ.”

“ಆಯಿತು ಒಂದು ಫೋಟೋಗೆ ನಮ್ಮಲ್ಲಿ ದುಡ್ಡಿಲ್ಲ. ಇನ್ನು ಮೂರು ಫೋಟೋ ಎಲ್ಲಿಂದ ತರುವುದು? ”

“ಒಂದು ಜಾಗಾ ಇದೆ. ಚ

“ನಾಯಕರ ಚಿಕ್ಕ ಹೆಂಡತಿ ಮ್ಲಮ್ಮಣ್ಣಿ ಇದ್ದಾರಲ್ಲ. ಅವರು ಈಚೆಗೆ ಸಾರ್ವಜನಿಕ ಚಳುವಳಿಯೆಂದು ಯಾರು ಹೋದರೂ ಇಲ್ಲ ವೆನ್ನುವುದಿಲ್ಲ. ಅದರಲ್ಲೂ ತಾತಯ್ಯನವರು ಹೇಳಿದರೆ ಎಂದರೆ ಕೈ ತುಂಬಾ ಕೊಡುತ್ತಾರೆ.”

“ತಾತಯ್ಯ ಊರಲ್ಲಿಯೇ ಇಲ್ಲವಲ್ಲ?”

“ಅದಕ್ಕೇನು? ತಾತಯ್ಯನವರು ಬರುತ್ತಾರೆಂದು ಇದುವರೆಗೂ ಕಾದೆವು. ಅವರು ಬರಲಿಲ್ಲ. ನಾವೇ ಬಂದಿದ್ದೇವೆ. ಅನ್ನೋಣ. ಅದೃಷ್ಟವಿದ್ದಂತೆ ಆಗಲಿ.”

“ಅದೀಗ ಸೈ”
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...