Home / ಕವನ / ಕವಿತೆ / ಮಿಥಿಲೆಯ ಸೀತೆಯರು

ಮಿಥಿಲೆಯ ಸೀತೆಯರು

ಭಾಗ ೧

ಕೂಗಬೇಕೆಂದರೆ ಹಾಳಾದ್ದು
ಧ್ವನಿಯೇ ಹೊರಡುತ್ತಲಿಲ್ಲ
ಧ್ವನಿಪೆಟ್ಟಿಗೆ ಸ್ಟ್ರಕ್ ಆಯಿತೇ?
ಒಡಲಾಳದಲ್ಲಿ ಹುಗಿದಿಟ್ಟ
ಅದೆಷ್ಟೋ ಇತಿಹಾಸದ ಪುಟಗಳು
ತೊಟ್ಟ ದಾಗೀನ ಆಭರಣ ಸಹಿತ
ಸಂಸ್ಕೃತಿಯ ಗೋರಿಯೊಳಕ್ಕೆ
ತನ್ನ ತಾನೇ ಹುಗಿದುಕೊಂಡು
ಮುಳ್ಳುಬೇಲಿಯ ಬಿಗಿದುಕೊಂಡು
ಆಳಕ್ಕಿಳಿದು ಬೇರುಬಿಟ್ಟ ಆಲ
ಹರಡಬಹುದೆ ಒಂದೊಂದೆ ಬಿಳಲುಗಳ?
ಮಿಥಿಲೆಯ ಸೀತೆಯರಿಗೆ
ಹಸಿರು ಹಂದರದ ಬಿಳಲು
ನೇಣಿಗೇರಲು ಕುಣಿಕೆಯಾದೀತೆ?
ನೂರು ಕನಸಿನ ಕೌದಿ ಹೊದ್ದು
ಒಳಗೆ ಮಿಡುಕಿದ ಸಂಕಟ,
ಚಿತ್ಕಾರಗಳಿಗೆ ಧ್ವನಿಯಾದೀತೇ?
ಬೊಡ್ಡೆ ಗಂಟು ಚಿಗುರೋಡೆದು
ಹೊಸಕಿದ ಕನಸಿನ ಹಂದರದಲ್ಲಿ
ವಸಂತ ಮರುಕಳಿಸೀತೇ?

ಭಾಗ ೨

ಕೊರಳಿಗೆ ಉರುಳಾದ ಬಿಳಲುಗಳ
ಒಂದೊಂದೇ ಸಿಕ್ಕು ಬಿಡಿಸಿ
ದುಃಶ್ಯಾಸನರ ಕೈಗೆ ಸಿಕ್ಕರೂ
ಬೆತ್ತಲಾಗದ ದ್ರೌಪದಿಯರು.
ಹೆಬ್ಬೆರಳಿನಿಂದ ನಡುನೆತ್ತಿಯವರೆಗೆ
ಶಕ್ತಿ ಕ್ರೂಢೀಕರಿಸಿ, ಮುಷ್ಟಿಬಿಗಿಮಾಡಿ
ಅಡ್ಡಲಾದ ಗೋಡೆಗಳ ಪುಡಿಮಾಡಿ
ಸಮುದ್ರದಲ್ಲಿ ಮುಳುಗಿ
ಆತ್ಮಹತ್ಯೆಗೆ ಯತ್ನಿಸಿದ ಸೂರ್‍ಯನ
ಮತ್ತೆ ಮತ್ತೆ ಹುಟ್ಟಿ ಬರುವಂತೆ ಮಾಡಿದ
ಮಿಥಿಲೆಯ ಸೀತೆಯರ ದಂಡು
ಬೀಳಲುಗಳ ಜೋಕಾಲಿ ಹೊಸೆದು
ಆ ದಿಗಂತದಿಂದ ಈ ದಿಗಂತದವರೆಗೆ
ಆಕಾಶ ಭೂಮಿ ಒಂದಾಗುವಂತೆ
ಜೀಕುತ್ತಿದ್ದಾರೆ ಜೋಕಾಲಿ,
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...