Home / ಬಾಲ ಚಿಲುಮೆ / ಕವಿತೆ / ಬಣ್ಣದ ಬುಗುರಿ

ಬಣ್ಣದ ಬುಗುರಿ

ಬುಗುರಿಯ ಆಡಿಸೊ ಕಾಲ
ಬರುವದು ತಪ್ಪದೆ ಆ ಜಾಲ
ರಂಗನು ಅಪ್ಪಗೆ ದುಂಬಾಲು
ಬುಗುರಿ ನನಗೆ ಬೇಕೆನಲು

ಅಪ್ಪನು ಹೋದನು ಪೇಟೆಗೆ
ಬಣ್ಣದ ಬುಗುರಿಯ ರಂಗನಿಗೆ
ತಂದುಕೊಟ್ಟನು ಚಾಟಿ ಸಹಿತ
ದಿನದೂಡಿದ ಕನಸು ಕಾಣುತ

ಚಾಟಿಯ ಭರ ಭರ ಸುತ್ತುತ್ತ
ರಂಗನು ನಡೆದ ಮಿತ್ರರತ್ತ
ತನ್ನಯ ಬುಗುರಿ ತೋರಿಸಿದ
ತನ್ನದೇ ಮಿಗಿಲೆಂದು ವಾದಿಸಿದ

ಗಿರಿ ಗಿರಿ ತಿರುಗುವ ಬಣ್ಣದ ಬುಗುರಿ
ತಿರುಗಿದಂತೆ ಕುಂಬಾರರ ತಿಗರಿ
ಗುಂಯಿಗುಡುತಲೆ ನೆಲವನು ಕೊರೆದು
ಆಡುತಲಿತ್ತು ಭೋರ್ಗರೆದು

ತಿಮ್ಮನೂ ತನ್ನಯ ಬುಗುರಿ ತಂದು
ಬಾರೋ ‘ಗಿಚ್ಚೆ’ ಆಡಲು ಬಂದ
ಆಟದಿ ತಿಮ್ಮನ ಬುಗುರಿ ಸೀಳಿತ್ತು
ರಂಗನ ಬುಗುರಿಯೂ ಹೋಳಾಯ್ತು

ಮನೆಗೆ ಮರಳಿದ ರಂಗನು ಅಳುತ
ಬುಗುರಿಯನು ತಂದೆಗೆ ತೋರಿಸುತ
ರಂಗನ ಅಪ್ಪನು ರಮಿಸಿದನು
ಮತ್ತೊಂದ ಕೊಡಿಸಲು ಒಪ್ಪಿದನು

ಮರುದಿನ ರಂಗನ ಅಪ್ಪನು
ತಂದನು ಮರದ ತುಂಡನ್ನು
ಕೊಡಲಿಯಿಂದಲೆ ಕೆತ್ತಿದನು
ಹೊಡೆದನು ಚೂಪಿದ್ದ ಮೊಳೆಯನು

ಗಟ್ಟಿ ಮರದ ಬುಗುರಿ ಹಿಡಿದು
ತಿಮ್ಮನ ರಂಗ ಕೂಗಿ ಕರೆದಿದ್ದ
ಆಟದಿ ತಿಮ್ಮನ ಪೇಟೆ ಬುಗುರಿ
ಹೋಳಾಗಿ ಬಿತ್ತು ಮೇಲೆಗರಿ

ಮನೆಗೆ ಬಂದಾ ರಂಗನು
ಬೀಗುತ ವಿಷಯ ಹೇಳಿದನು
ಗೆಲುವಿನ ಸಂತೋಷದಿ ಅವನು
ಮಲಗಿ ಗೊರಕೆಯ ಹೊಡೆದನು
*****

Tagged:

Leave a Reply

Your email address will not be published. Required fields are marked *

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...