ದಾಹ

ಕಸಿಯುತ್ತಾರೆ ಅನ್ನ
ಕಾಣುತ್ತಾರೆ ಜೀತದಾಳಿನಂತೆ
ಚಿಗುರುವ ಮುನ್ನ
ಹಿಸುಕುತ್ತಾರೆ ಮೊಳಕೆಯಲಿ
ತೊಗಲು ಸುಲಿವಂಗೆ
ಎಲ್ಲುಂಟು ಮಾನವೀಯತೆ
ರೆಕ್ಕೆ ಕತ್ತರಿಸಲು
ಹಾತೊರೆಯುವ ಅಮಲಿನ ಜನ
ನಡೆಸುತ್ತಾರೆ ಕಬಳಿಕೆ ದಬ್ಬಾಳಿಕೆ
ಪೂಜಾರಿ ಮುಂದೆ
ದೇವನಾಟವೇ?
ವಿಜೃಂಭಿಸುತಿದೆ
ಸಂಚು ಹೊಂಚು
ಅತ್ಯಾಚಾರ ಅನಾಚಾರ
ಗಣಿ ಧನ ದಾಹ
ದೇಶದಲಿ ಏನುಂಟು ಏನಿಲ್ಲ
ತಣಿಯದ ಅಧಿಕಾರ ದಾಹ
ಕುರ್‍ಚಿ ಅಲುಗಾಡುತಿದೆ
ಬಿಡಲುಂಟೆ ಕುರ್‍ಚಿ ವ್ಯಾಮೋಹ
ಮೆರೆಯುವುದು
ಕ್ರೌರ್‍ಯ ಸ್ವಾರ್‍ಥ ಬ್ರಷ್ಟಾಚಾರ
ಅಭಿವೃದ್ಧಿ ನೆಪದಲಿ
ಬಡ ರೈತರ ಜೀವಕೆ ಸಂಚಕಾರ
ಜಾತಿ ಅಂಧಕಾರದಲಿ
ಮಾತು ಗೋಸುಂಬೆ
ಅತೃಪ್ತರೇ ತುಂಬಿ
ತುಳುಕುತ್ತಿರುವ
ಜಗತ್ತಿನಲಿ
ಎಲ್ಲಾ ಮುಳ್ಳು ಮುಳ್ಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆನಪು
Next post ಸಂದರ್ಶನ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…