Home / ಲೇಖನ / ವ್ಯಕ್ತಿ / ಶ್ರೀ ಎಚ್. ಡಿ. ದೇವೇಗೌಡ ಭಾರತದ ಪ್ರಪ್ರಥಮ ಕನ್ನಡಿಗ ಪ್ರಧಾನಿ

ಶ್ರೀ ಎಚ್. ಡಿ. ದೇವೇಗೌಡ ಭಾರತದ ಪ್ರಪ್ರಥಮ ಕನ್ನಡಿಗ ಪ್ರಧಾನಿ

ಚಿತ್ರ: ವಿಕಿಮೀಡಿಯ ಕಾಮನ್ಸ್

೧.೬.೧೯೯೬ರಂದು ಬೆಳಗ್ಗೆ ೧೧ ಘಂಟೆಗೆ ಭಾರತದ ಪ್ರಪ್ರಥಮ ಕನ್ನಡಿಗ ಪ್ರಧಾನಮಂತ್ರಿಯಾಗಿ ಶ್ರೀ ದೇವೇಗೌಡರು ಅಧಿಕಾರವಹಿಸಿಕೊಂಡ ಎಲ್ಲ ಕನ್ನಡಿಗರಿಗೂ ಮಹತ್ತ್ವದ ಕ್ಷಣ. ಕೇಂದ್ರದಲ್ಲಿ ಹಿರಿಯ ಕನ್ನಡಿಗ ಮಂತ್ರಿಗಳ ಅಭಾವವು ದೀರ್ಘಕಾಲ ಇದ್ದದ್ದರಿಂದ ಕರ್ನಾಟಕವು ಕೇಂದ್ರದ ಔದಾಸೀನ್ಯಕ್ಕೆ ಈಡಾಗಿತ್ತು. ಆದ್ದರಿಂದ ಯಾವಾಗ ಒಬ್ಬ ಬಲಶಾಲಿ ಕನ್ನಡಿಗ ಪ್ರಧಾನ ಮಂತ್ರಿಯಾದರೋ ಆಗ ಕನ್ನಡ ಜನರಿಗೆ ೨೦ನೇ ಶತಮಾನದ ಒಂದು ಉತ್ತಮ ಸಾಧನೆಯಾಯಿತು. ೨೧ನೇ ಶತಮಾನದಲ್ಲಿ ಮತ್ತೆ ಕನ್ನಡಿಗ ಪ್ರಧಾನಿಯನ್ನು ಪಡೆಯುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಕೇಂದ್ರದಲ್ಲಿ ಅಧಿಕಾರ ಪಡೆದುಕೊಂಡ ಪಕ್ಷಕ್ಕೆ ಸೇರಿದ ಕರ್ನಾಟಕದ ಸಂಸತ್ ಸದಸ್ಯರ ಸಂಖ್ಯೆ ಕಡಿಮೆಯಾದ ಕಾರಣ ಕನ್ನಡಿಗ ರಾಜಕಾರಣಿಗಳಿಗೆ ಸಂಪುಟದರ್ಜೆಯ ಸಚಿವ ಸ್ಥಾನಗಳು ಸಿಗುವುದೂ ಕೂಡ ಬಹಳ ಕಷ್ಪವಾಗಿದೆ.

ಶ್ರೀ. ದೇವೇಗೌಡರು ಅವರು ಪ್ರಧಾನಿಯಾಗಿ ಕರ್ನಾಟಕಕ್ಕೆ ಹಲವಾರು ಅಭಿವೃದ್ಧಿಯ ಯೋಜನೆಗಳನ್ನು ಮಂಜೂರು ಮಾಡಿದ್ದಾರೆ.

ಪ್ರಧಾನಿಗಳ ಪರೀಕ್ಷೆ ಮತ್ತು ಅನುಮೋದನೆಗಳ ಅಗತ್ಯವಿದ್ದ ದೊಡ್ಡ ಯೋಜನೆಗಳು ಅವು. ಅವರ ಆತ್ಮಚರಿತೆಯ ಪುಸ್ತಕ ಬಿಡುಗಡೆಯಾದಾಗ ಅದು ಸರಿಯಾಗಿಯೂ ಪೂರ್ಣವಾಗಿಯೂ ವಿದಿತವಾಗುತ್ತದೆ. ಇದೊಂದು ಒಳ್ಳೆಯ ಪುಸ್ತಕವಾಗುತ್ತದೆ ಮತ್ತು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಯಿಂದ ಇಟ್ಟುಕೊಳ್ಳುವಂತಹದಾಗುತ್ತದೆ. ಆದರೆ ಉತ್ತರ ಭಾರತದ ರಾಜಕೀಯ ಒಳಸಂಚಿನ ಕಾರಣ ಶ್ರೀ ಎಚ್. ಡಿ. ದೇವೇಗೌಡರು ೫ ವರ್ಷದ ಪೂರ್ಣಾವಧಿಗೆ ಮುಂದುವರಿಯಲಾಗಲಿಲ್ಲ. ಕರ್ನಾಟಕ ಮತ್ತು ಕನ್ನಡಿಗರು ತುಂಬ ಅದೃಷ್ಟಹೀನರು. ಅವರು ೫ ವರ್ಷದ ಪೂರ್ಣಾವಧಿಗೆ ಮುಂದುವರಿದಿದ್ದರೆ ಶ್ರೀ ದೇವೇಗೌಡರು ಕರ್ನಾಟಕ ರಾಜ್ಯಕ್ಕೆ ಭವ್ಯ ಸ್ವರ್ಣಯುಗವನ್ನು ಸೃಷ್ಟಿಸುತ್ತಿದ್ದರು. ಕರ್ನಾಟಕರಾಜ್ಯವು ಕೃಷಿಕ್ಷೇತ್ರದಲ್ಲಿ, ಔದ್ಯೋಗಿಕ ಕ್ಷೇತ್ರದಲ್ಲಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರದ ಪ್ರಥಮ ರಾಜ್ಯವಾಗುತ್ತಿತ್ತು. ಶ್ರೀ ದೇವೇಗೌಡರು ಮಂಜೂರು ಮಾಡಿದ ಬೆಂಗಳೂರು- ಹಾಸನ ಸೂಪರ್‌ಫಾಸ್ಟ್‌ ರೈಲ್ವೇ ಮಾರ್ಗವು ಅವರು ಪೂರ್ಣಾವಧಿಗೆ ಅಂದರೆ ೧.೬.೨೦೦೧ರ ವರೆಗೆ ಮುಂದುವರಿದಿದ್ದರೆ ೧.೧.೨೦೦೧ರ ಹೊತ್ತಿಗೆ ಉಪಯೋಗಕ್ಕೆ ಸಿದ್ದವಾಗುತ್ತಿತ್ತು. ಆದರೆ ದುರದೃಷ್ಟವಶಾತ್ ೧೨ ವರ್ಷಗಳಾದ ಮೇಲೂ ಅತಿ ನಿಧಾನಗತಿಯಲ್ಲಿದೆ. ಅವರ ಪ್ರಧಾನಿ ಸ್ಥಾನದ ಅಲ್ಪಾವಧಿಯ ನಿಮಿತ್ತ ಕರ್ನಾಟಕವು ಹಲವಾರು ಮುಖ್ಯ ಯೋಜನೆಗಳನ್ನು ಕಳೆದುಕೊಂಡಿತು.

ಶ್ರೀ ದೇವೇಗೌಡರು ದೈವಭಕ್ತರು. ಅವರಿಗೆ ಭಾರತದ ಎಲ್ಲ ಮಹಾದೇವಾಲಯಗಳ ಎಲ್ಲ ದೇವತೆಗಳ ಕೃಪೆಯೂ ಇದೆ. ಅವರು ದೇವರಿಗೆ ಹತ್ತಿರವಿರುವ ಕಾರಣ ಅವರಿಗೆ ಹಲವಾರು ವರಗಳಿವೆ. ಆದರೆ ಆ ವರಗಳು ಅವರಿಗೆ ಹಳ್ಳಿಗಳಿಗೆ ಸಂಬಂಧಪಟ್ಟಂತೆ ಇವೆ. ಈ ಸಂದರ್ಭದಲ್ಲಿ ಅವರು ಬೆಂಗಳೂರು ನಿರ್ಗಮನ ನಿರ್ಧರಿಸಿದರು. ರಾಜಕೀಯಕ್ಕೆ ಅಷ್ಟೆ. (ಗ್ರಾಮಕ್ಕೆ ಆದ್ಯತೆ ಕೊಡುವ ಹೊಸ ರಾಜಕೀಯ ಸಿದ್ಧಾಂತಕ್ಕೆ ಇದು ಹೊಸಪದವಾಗಿರುವುದು. ರಾಜಕೀಯಕ್ಕೆ ಅಷ್ಟೆ. ಅದರಲ್ಲಿ ಯಾವ ನಿರ್ಗಮನವೂ ಇಲ್ಲ.) ನಾನು ಕರ್ನಾಟಕದ ಹಲವು ಹಳ್ಳಿಗಳನ್ನು ನೋಡಿದ್ದೇನೆ. ಅವುಗಳು ಬಹಳ ಅವ್ಯವಸ್ಥಿತವಾಗಿ ಯೋಜಿಸಲ್ಪಟ್ಟಿವೆ. ಅವುಗಳನ್ನು ಶೀಘ್ರವಾಗಿ ಸುಧಾರಿಸಬೇಕಾಗಿದೆ. ಹಳ್ಳಿಗಳಲ್ಲಿ ಈಗಿನ ಕೆಟ್ಟಪರಿಸ್ಥಿತಿಯಲ್ಲೂ ಒಳ್ಳೆಯ ಬದಲಾವಣೆಯಾಗುವುದೇ ಎಂದು ನಮಗೆ ತಿಳಿಯದು. ‘ಮಣ್ಣಿನ ಮಗ’ನಾಗಿ ಶ್ರೀ ದೇವೇಗೌಡರಿಗೆ ಮಾತ್ರ ಉತ್ತಮ ಗ್ರಾಮ ಹೇಗಿರಬೇಕೆಂದು ಗೊತ್ತಿರುವುದರ ನಿಮಿತ್ತ ಅವರು ಬದಲಾವಣೆಯನ್ನು ತರುತ್ತಾರೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...