Home / ಕವನ / ಕವಿತೆ / ಬೆಳವಡಿಯ ಬೆಳಕು (ಬೆಳವಡಿ ಮಲ್ಲಮ್ಮ)

ಬೆಳವಡಿಯ ಬೆಳಕು (ಬೆಳವಡಿ ಮಲ್ಲಮ್ಮ)

ಹಸುಗಳ ಕದ್ದ ನೆಪಕೆ
ಬೆಂಕಿಹೊತ್ತಿಕೊಂಡಿತು ಬೆಳವಡಿಗೆ
ಧಗಧಗಿಸಿದ್ದು ಶಿವಾಜಿಡೇರೆಯೊಳಗೆ
ಈಶ ಪ್ರಭುವಿನ ಮರಣ ನಕ್ಷತ್ರ ಜಾರಿದ ಹೊತ್ತು
ಉಕ್ಕಿ ಉಕ್ಕಿ ಹರಿಯಿತು ಮಲ್ಲಮ್ಮಳ ಮಲಪ್ರಭೆ

ಆಕಾಶ ತುಂಬೆಲ್ಲ ಧೂಳಿಪಟಗಳ ಅಬ್ಬರ
ಕಾಲಡಿಯಲ್ಲಿ ಬೆಳವಡಿಯ ವೀರರರಕ್ತ
ಹರಿದು ಹೆಪ್ಪುಗಟ್ಟಿ ಕೆಂಪು ಕಪ್ಪು ನೀಲಿಯಾಗಲು
ಸೋದರಿಯರ ನೋವು ಮಡುಗಟ್ಟಿತು
ಅಸಹನೆ ತಳಮಳಗಳ ಒಡ್ಡು ಒಡೆದದ್ದೇ ಕ್ಷಣ
ಪಣತೊಟ್ಟು ನಿಂತಿತು ನಾಡರಕ್ಷಣೆಗೆ
ಮಹಿಳಾಮಣಿಗಳ ಆವೇಶ ಕೆಚ್ಚೆದೆಯ ಶಕ್ತಿ

‘ಆಯುಷ್ಯ ರಾಜ್ಯ ಬೇಕೇನೋ ಶಿವರಾಮ
ನಿನ್ನ ಕನಸಿನ ಸುಳ್ಳಿನ ಚೀಲ ತುಂಬಲು
ದೇವಿಭಕ್ತ ನೀನು ಭವಾನಿಯೇ ನಾನಾಗಿ….
ರುಂಡಚೆಂಡಾಡಿ ರಕ್ತ ಹೀರುವೆ’
ಏನೋ ಕ್ಷುಲ್ಲಕ ಘಟನೆ ಅರಿಯದ ತಪ್ಪು
ಎಂಥದೋ ಸಿಡಿಲು ಯಾಕೋ ಗುಡುಗು
‘ಕ್ಷಮಿಸು ತಾಯೆ ಕ್ಷಮಿಸು’ – ಶಿರಬಾಗಿ
ಬೊನಿನೊಳಗೆ ಬಿದ್ದ ಹುಲಿಯ ಮಾತುಗಳು

ಸಂಧಾನ ಸಂಧಾನ ಸಂಧಾನ
ತಪ್ಪೊಪ್ಪಿಗೆಗೆ ಸೋದರಿಭಾವನೆ ಸ್ವೀಕಾರ
ನಾಡ ರಕ್ಷಣೆಗೆ ಪ್ರಾಣವೇ ಪಣಕ್ಕಿಟ್ಟು ಹೋರಾಡಿದ
ತಾಯಿದೇವಿ ಕನ್ನಡದ ಮುಕುಟ ಮಣಿಯೇ
ನಿನ್ನ ಸೇವೆಗೆ ಸದಾಸಿದ್ಧ, ಸದಾಕಾವಲು
ಶಿವಾಜಿ, ಬೆಳವಡಿಯ ಬಾಂಧವ್ಯ ಅಜರಾಮರ
ಧರ್ಮರಕ್ಷಕರ ಕೊಂಡಿ ಅನಂತ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...