Home / ಕಥೆ / ಕಾದಂಬರಿ / ಅವಳ ಕತೆ – ೧೨

ಅವಳ ಕತೆ – ೧೨

ಅಧ್ಯಾಯ ಹನ್ನೆರಡು

ಮಧ್ಯಾಹ್ನ ಸುಮಾರು ಮೂರನೆಯ ಝಾವದ ಕೊನೆಯಿರಬಹುದು. ದರ್ಬಾರು ಭಕ್ಷಿಯವರು ಆಚಾರ್ಯರನ್ನು ಕಾಣಲು ಬಂದಿದ್ದಾರೆ. ಆಚಾರ್ಯರಿಗೆ ಆದಿನ ಉಸವಾಸ. ಸಾಮಾನ್ಯವಾಗಿ ಆವರ ಶಿಷ್ಯರಲ್ಲದೆ ಇನ್ನು ಯಾರೂ ಆದಿನ ಅವರನ್ನು ನೋಡುವಂತಿಲ್ಲ. ಆದರಿಂದ ಅವರು ಒಳಗೆ ಏಕಾಂತದಲ್ಲಿ ಕುಳಿತಿರುವರು.

ಏಕಾಂತದಲ್ಲಿ ಕುಳಿತಿದ್ದವರಿಗೆ ಭಕ್ಷಿಯವರು ಬಂದಿರುವ ಸಮಾಚಾರ ತಿಳಿಯಿತು. ಆಚಾರ್ಯರ ಪ್ರತಿನಿಧಿಯಾಗಿ ಗೋಪಾಲರಾಯರು ಬಂದು ಅವರನ್ನು ಕರೆದುಕೊಂಡುಹೋಗಿ ಒಳಗೆ ಸುಖಾಸನದಲ್ಲಿ ಕುಳ್ಳಿರಿಸಿದರು. “ಈದಿನ ಆಚಾರ್ಯರಿಗೆ ಉಪವಾಸದ ದಿನ. ಅದರಿಂದ ದರ್ಬಾರಿಗಳ ದಿರಸ್ಸು ಹಾಕಿಕೊಳ್ಳುವುದಿಲ್ಲ. ಹಾಗೆ ಬಂದು ನೋಡಿದರೆ ತಪ್ಪಿಲ್ಲವಲ್ಲ?”ಎಂದು ಕೇಳಿದರು. ಭಕ್ಷಿಯವರು, “ನಾವು ತುರುಕರು. ಈದಿನ ಆಚಾರ್ಯರು ನಮ್ಮನ್ನು ನೋಡುವುದಿಲ್ಲ ಎಂದರೂ ನಾವು ಅದಕ್ಕೆ ಸಿದ್ಧ. ಇದೋ ಇವರು ನಮ್ಮ ಗವಾಯ್‌ ಸಾಹೇಬರು. ಇವರು ದಿಲ್ಲಿಯಲ್ಲಿದ್ದವರು. ಈಗ ಬೀದರ್‌ ನಲ್ಲಿ ಇದ್ದಾರೆ. ಇವರು ಆಚಾರ್ಯರನ್ನು ಕಂಡು ಸಲಾಂ ಮಾಡಿ ಹೋಗ ಬೇಕು ಎಂದು ಬಂದಿದ್ದಾರೆ. ಅವರಿಗೆ ತೊಂದರೆ ಇಲ್ಲವಾದರೆ ನಮಗೆ ದರ್ಶನ ಆಗಲಿ”ಎಂದರು.

ಆಚಾರ್ಯರು ಒಂದು ಉತ್ತರೀಯವನ್ನು ಹೊದೆದಿದ್ದಾರೆ. ಗರಿಮುರಿ ಯಾಗಿ ಉಟ್ಟಿರುವ ಪಂಚೆ ಅಚ್ಚುಕಟ್ಟಾಗಿದ್ದು ಅವರ ವೈದಿಕನಿಷ್ಠೆಯನ್ನು ತೋರಿಸುತ್ತಿದೆ. ಆ ಎರಡರ ಕಲಾಪತ್ತಿನ ಅಂಚುಗಳೂ, ತೆಳುವೂ, ನಯವೂ ಅವರ ಆಧ್ಯತೆಯನ್ನು ತೋರಿಸುತ್ತಿವೆ. ಅವರ ದೇಹವು ಚಿನ್ನದ ಬಣ್ಣ ವಾಗಿದ್ದು ತಾನೆಷ್ಟು ಸುಖವಾಗಿದ್ದೇನೆ ಎಂಬುದನ್ನು ಬಾಯಿಬಿಟ್ಟು ಹೇಳಿ ಕೊಳ್ಳುತ್ತಿದೆ. ಕಂಠದಲ್ಲಿರುವ ತುಲಸೀಮಣಿಗಳ ಸರವು ಅವರ ದೈವಭಕ್ತಿ ಯನ್ನು ಹೇಳುತ್ತಿದ್ದರೆ ಕೈಗಳಲ್ಲಿರುವ ಥೋಡಾಗಳೂ, ಬೆರಳುಗಳಲ್ಲಿರುವ ಉಂಗುರಗಳೂ ಅವರಿಗೆ ದೊರಕಿರುವ ರಾಜಾನುಗ್ರಹವನ್ನು ಪ್ರಕಟಸುತ್ತಿವೆ. ಆಚಾರ್ಯರು ಬಂದು ದೂರದಲ್ಲಿ ಹಾಕದ್ದ ಒಂದು ಕೃಷ್ಣಾಜಿನದ ಮೇಲೆ ಕುಳಿತರು. ಆಗಂತುಕರಿಗೆ ತಾವು ವಂದಿಸಿ, ಅವರ ಪ್ರತಿವಂದನೆಗಳನ್ನು ಸ್ವೀಕರಿಸಿ, ಕುಶಲಪ್ರಶ್ನೆ ಪ್ರಥಮೋಪಚಾರವನ್ನು ಸಲ್ಲಿಸಿದರು. ದರ್ಬಾರ್‌ ಭಕ್ಷಿಯವರು ಆಚಾರ್‍ಯರಿಗೆ ಗವಾಯ್‌ ಸಾಹೇಬರ ಪರಿಚಯವನ್ನು ಮಾಡಿ ಕೊಟ್ಟರು.

ಹಾಗೆಯೇ ಒಂದು ಅಷ್ಟುಹೊತ್ತ ಸುಖಸಲ್ಲಾಪಗಳು ನಡೆದಮೇಲೆ ಆಚಾರ್ಯರು ಹೇಳಿದರು. “ಇವೊತ್ತಿನ ದಿವಸ ತಾವು ದಯಮಾಡಿಸಿದ್ದೀರಿ. ನಾನು ಇವೊತ್ತಿನ ದಿವಸ ಏನೂ ತೆಗೆದುಕೊಳ್ಳುವುದಿಲ್ಲ. ಅದರಿಂದ ತಾವು ಕೋಪಗೊಳ್ಳಬಾರದು. ಭಕ್ಷಿಿಯವರು ದೊಡ್ಡ ಮನಸ್ಸುಮಾಡಿ ಇಲ್ಲಿಗೆ ಇನ್ನೊಂದು ದಿವಸ ದಯಮಾಡಿಸಬೇಕು. ಇವೊತ್ತಿನ ಹಾಗೆಯೇ ಗವಾಯ್‌ ಸಾಹೇಬರನ್ನೂ ಜೊತೆಯಲ್ಲಿ ಕರೆದುಕೊಂಡು ಬರಬೇಕು. ನಮ್ಮ ಆತಿಥ್ಯ ವನ್ನು ಸ್ವೀಕರಿಸಿ ನಮ್ಮನ್ನು ಕೃತಾರ್ಥರನ್ನು ಮಾಡಬೇಕು” ಎಂದು ನಗು ನಗುತ್ತ ಮಾತಿನ ಅರ್ಥವನ್ನು ಪ್ರಕಟಸುವ ಹಾವ, ಭಾವ, ಮುದ್ರೆಗಳನ್ನು ಪ್ರದರ್ಶಿಸುತ್ತ ಹೇಳಿದರು.

ಭಕ್ಷಿಯವರು ಗವಾಯ್‌ ಸಾಹೇಬರ ಮುಖವನ್ನು ನೋಡಿದರು. ಆವರು ಹೃದಯದಲ್ಲಿ ತುಂಬಿರುವ ಸಂತೋಷವನ್ನು ತಮ್ಮ ಅರಳಿದ ಮುಖವೇ ಹೇಳುತ್ತಿರಲು, “ಗವಾಯ್‌ ಸಾಹೆಬ್‌, ತಾವು ನಮ್ಮನ್ನು ಇವೊತ್ತು ಬಂದು ನೋಡಿದ್ದೇ ನಮ್ಮ ನಸೀಬ್‌. ಇಲ್ಲಿಗೆ ಬಂದಮೇಲೆ ತಮ್ಮದು ಉಪವಾಸ ಅಂತ ಕೇಳಿ ಮನಸ್ಸು ಷಿಕ್ಕಾ ಆಗಿಹೋಗಿತ್ತು. ಈಗ ಮೂರು ದಿನದಿಂದ ತಮ್ಮ ಗಾನಾ ಕೇಳಿದಾಗ ಜಿನ್ನತ್‌ಗೆ ಹೋಗಿದ್ಚೆವು. ಇವೊತ್ತು ತಮಗೆ ಅದನ್ನು ಸುಲಾವಣೆ ಮಾಡಬೇಕು ಎಂತಲೇ ಬಂದೆವು. ಆಗಲಿ. ಇವೊತ್ತು ತಮ್ಮದು ನಜರ್‌ ನಮ್ಮ ಮೇಲೆ ಬಿತ್ತು. ತಾವು ಈ ದಿನ ಖುದಾನ ಜೊತೆಯಲ್ಲಿ ಇರಿ. ಇನ್ನು ಮೂರು ನಾಲ್ಕು ದಿನ ಬಿಟ್ಟು ತಮ್ಮ ಶಿಷ್ಯರದು ಗಾನಾನೂ ಕೇಳಿ ಆಮೇಲೆ ಬಂದು ದರ್ಶನ ಪಡೆಕೊಳ್ಳುತ್ತೇನೆ. ಗರೀಬನ ಮೇಲೆ ಕೃಪಾ ಇರಬೇಕು.” ಎಂದು ಬಹು ವಿನಯ ವಿಶ್ವಾಸಗಳಿಂದ ಹೇಳಿ ಕೊಂಡರು.

ಆಚಾರ್ಯರೂ ಸಂತೋಷಸಟ್ಟರು. “ಗವಾಯ್‌ ಸಾಹೆಬ್‌, ಸಂಗೀತ ಕಲಿತು, ಅದನ್ನು ದೇವರನ್ನು ಒಲಿಸಿಕೊಳ್ಳು ವುದಕ್ಕೆ ಉಪಯೋಗಿಸುವವರು ಎಂದೂ ಗರೀಬರಲ್ಲ. ತಮ್ಮ ಹಾಗೆ ವಿದ್ಯಾವಂತರೂ, ಭಕ್ತರೂ ಆದವರು ಲೋಕದ ಬೆನ್ನುಮೂಳೆಗಳ ಹಾಗೆ. ತಾವು ಯಾವಾಗ ಬೇಕಾದರೂ ಬರಬಹುದು. ಇದು ತಮ್ಮ ಮನೆ. ತಮ್ಮಂಥವರು ನಮಗೆ ದರ್ಶನಕೊಟ್ಟರೆ ನಮ್ಮ ವಿದ್ಯೆಯ ಅಧಿದೇವತೆ ಶಾರದಾದೇವಿಯೇ ನಮಗೆ ದರ್ಶನಕೊಟ್ಟಂತೆ. ಇವೊತ್ತು ಏಕಾದಶಿ. ಹದಿನೈದು ದಿನಕ್ಕೆ ಒಂದು ಸಲ ಬರುತ್ತದೆ. ಆ ಒಂದು ದಿನ ತಾವು ತಮ್ಮ ರಂರ್ಜಾ ಹಬ್ಬ ಮಾಡುವ ಹಾಗೆ ಉಪವಾಸಮಾಡಿ ರಾತ್ರಿ ಯಲ್ಲಿ ಒಂದು ಸಲ ಪೂಜೆಮಾಡಿ, ಉಳಿದ ಹೊತ್ತನ್ನೆಲ್ಲ ಭಜನೆಯಲ್ಲಿ ಕಳೆಯು ವುದು ಸಂಪ್ರದಾಯ. ಅದನ್ನು ಬಿಡುವುದಕ್ಕೆ ಸಾಧ್ಯವಿಲ್ಲ. ನಮ್ಮವರು ಇದನ್ನು ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಅದರಿಂದ ಇವೊತ್ತು ಬಹಳಹೊತ್ತು ಕುಳಿತುಕೊಳ್ಳಲಿಲ್ಲ ಎಂದು ತಮ್ಮ ಮನಸ್ಸಿಗೆ ಆಯಾಸ ವಾಗದಿರಲಿ. ತಾವು ಅಗತ್ಯವಾಗಿ ಇನ್ನೊಂದು ದಿವಸ ದಯಮಾಡಿ. ಸಂತೋಷವಾಗಿ ಒಂದು ಝಾವ ಹೊತ್ತು ಕುಳಿತುಕೊಳ್ಳೋಣ” ಎಂದರು. ಹೀಗೆಯೇ ಇನ್ನೂ ಆ ಅಷ್ಟು ಹೊತ್ತು ಮಾತನಾಡುತ್ತಿದ್ದು ಭಕ್ಷಿಯವರೂ, ಗವಾಯ್‌ ಸಾಹೇಬರೂ ಆಚಾರ್‍ಯರನ್ನು ಬೀಳ್ಕೊಂಡು ಹೊರಟರು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...