Home / ಕಥೆ / ಕಾದಂಬರಿ / ಮಲ್ಲಿ – ೪೯

ಮಲ್ಲಿ – ೪೯

ಬರೆದವರು: Thomas Hardy / Tess of the d’Urbervilles

ನಾಯಕನು ಮಹಾರಾಜರನ್ನು ನೋಡುವುದಕ್ಕೆಂದು ಮೈಸೂರಿಗೆ ಹೋಗಿದ್ದಾನೆ. ಮಜ್ಜಿಗೆ ಹಳ್ಳಿಯ ಅರಮನೆಯಲ್ಲಿ ಗದ್ದಲವೋ ಗದ್ದಲ, ಆ ರಾತ್ರಿ ಮಲ್ಲಿಯು ಮಂಚದ ಮೇಲೆ ಮಲಗಬೇಕು ಎಂದು ರಾಣಿಯ ಆಸೆ. ಬುದ್ದಿಯವರಿಲ್ಲದೆ ತಾನು ಮಂಚದ ಮೇಲೆ ಮಲಗು ವುದಿಲ್ಲವೆಂದು ಅವಳ ಹಟ.

“ಹಾಗಾದರೆ ಎಲ್ಲಿ ಮಲಗುತ್ತೀಯೇ?”

“ಇಲ್ಲೇ ಒಂದು ಚಾಪೆಯ ಮೇಲೆ!”

“ಕೂಡದು. ನಾನೂ ನಿನ್ನ ಜೊತೆಗೇ ಬರುತ್ತೇನೆ.”

ಉಂಟಾ ಬುದ್ಧಿ, ತಮ್ಮ ಮೈ ಒತ್ತುತ್ತದೆ. ಕೂಡದು.”

“ನಿನಗೆ ಒತ್ತೋಕಿಲ್ಲವಾ?”

“ಬಾಳೇಹಣ್ಣಿನ ಗುಡಾಣದಲ್ಲಿ ಬೆಳೆದದ್ದು ಅಲ್ವಾ!”

“ಅಲ್ಲಾ, ಮಲ್ಲಮ್ಮಣ್ಕಿ ನೀನು ಹಿಂಗನ್ನೋದು ನ್ಯಾಯವಾ? ಜೊತೆ ಜೊತೆ ಎತ್ತುಗಳ ಹಂಗಲ್ಲವಾ ನಾವು. ನಿನಗೆ ಬೇಡವಾದ್ದು ನನಗೆ ಬೇಕಾದೀತಾ? ಬುಡು.?

“ಬುದ್ಧಿ, ತಾವು ಹಂಗನ್ನಬಾರದು. ತಾವು ಮಹಾಲಕ್ಷ್ಮಿ ಹಂಗೆ ದೊಡ್ಡ ಮನೆಯಲ್ಲಿ ಹುಟ್ಟಿ ಅರಮನೆ ಸೇರಿದವರು. ತಮ್ಮ ಮನಸ್ಸಿಗೆ ನೋವಾಗೋ ಹಂಗಿದ್ದರೆ, ಆಗಲಿ. ತಮ್ಮ ಪಾದದಲ್ಲಿ ಉರುಟು ಕೋತೀನಿ. ಆದರೂ ಬುದ್ದಿ, ಅಭ್ಯಾಸ ಆಗಲಿ, ಬಿಡಬಾರದಾ?”

ಅವಳ ಪ್ರಾರ್ಥನೆಯಲ್ಲಿ ಏನೋ ಗುರುತಿಸುವುದಕ್ಕೂ ಕಷ್ಟವಾದ ಭಾವವಿತ್ತು. ರಾಣಿಯು ಅದನ್ನು ಸಹಿಸಲಾರದೆ ಅವಳನ್ನು ಬಿಟ್ಟು ಎರಡು ಹೆಜ್ಜೆ ಹೋಗಿದ್ದವಳು ಒಂದಿರುಗಿ ಬಂದು ಮಾತೇ ಆಡದೆ ಅವಳ ನಡುವಿಗೆ ಕೈಹಾಕಿ ಕೆರೆದುಕೊಂಡು ಹೋಗಿ ಹಾಸುಗೆಯ ಮೇಲೆ ಮಲಗಿಸಿ ಕೊಂಡಳು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...