Home / ಕವನ / ಅನುವಾದ / ಪ್ರೇಮ

ಪ್ರೇಮ

ಪ್ರೇಮ! ವಿಚಿತ್ರ ವಸ್ತುವಾಗಿದೆ ಜಗದಿ! ಅದ್ಬುತ ಶಕ್ತಿ ನಿಧಾನ.
ನಿದ್ರೆಯಲದು ಜಾಗೃತಿ! ಜಾಗೃತಿಯಲ್ಲಿ ಅಪ್ಪುದು ನಿದ್ರೆ ಸಮಾನ.
ಪ್ರೇಮದಮಲು ಮುಸುಕುವುದಾರಿಗೆ ಅಕ್ಷಿಗಳಲಿ ಉನ್ಮತ್ತ
ಎಚ್ಚರ ನಿದ್ರಾ ಎರಡೂ ಅವರಿಗೆ ಆಗಿ ಹೋಗುವುದೈ ದೂರ!

ಗಂಧವಿಲ್ಲದ ಹೂವಿನಂತೆಯೆ ಚಂದ್ರ ಚಂದ್ರಿಕಾಹೀನ!
ಹಾಗೇ ನೀರಸ ಮಾನವ ಜೀವನವಿದ್ದರೆ ಪ್ರೇಮ ವಿಹೀನ
ಪ್ರೇಮ ಸ್ವರ್ಗವು! ಸ್ವರ್ಗ ಪ್ರೇಮವು! ಪ್ರೇಮ ಅಶಂಕ ಅಶೋಕ.
ಈಶ್ವರಪ್ರತಿಬಿಂಬ ಪ್ರೇಮವು! ಪ್ರೇಮ ಹೃದಯದಾಲೋಕ.

ಜಗದಲಿ ಬಂದರೆ ಪೀಡೆ ಸರ್ವವೂ ಅಪ್ಪುದು ಹೃದಯ ಅಧೀರ!
ಆದರೆ ಸಿಹಿಸಿಹಿ ಸೊಗಸುವುದೈ ಎದೆಯಲ್ಲಿ ಪ್ರೇಮದಾ ಪೀಡಾ.
ವ್ಯಾಕುಲವೆನಿಸದು ಪ್ರೇಮ ಪೀಡೆಯಿಂ ಯಾರದದೆಂದೂ ಪ್ರಾಣ
ಭಾಗ್ಯಹೀನ ನವ ನಿಷ್ಟುರನೈ ನಿಜ ಎದೆಯವನದು ಪಾಷಾಣ.

ಯಾರ ಮೇಲೆ ದಯಾದೃಷ್ಟಿ ಬೀರ್‍ವನೋ ಮಂಗಳ ಮಯ ಭಗವಾನ!
ಪೂರ್ಣ ಪ್ರೇಮ ಪೀಡೆಯಲಿ ಹಿಂಡುವನವನು ಆತನ ಪ್ರಾಣ!
ಯಾರಿಗೆ ಅನುಭವವಾಗಿದೆ ಪ್ರೇಮದ ಪೀಡೆಯ ಬಹು ಆನಂದ
ಆತನಿಗಿಂತ ದೊಡ್ಡವನಾರು ಸುಖಿ! ಇಹದಲಿ ಸ್ವಚ್ಛಂದ.

ಪ್ರೇಮೋನ್ಮತ್ತ ಹೃದಯದಿ ಇರದೈ! ಹೀನ ವಿರೋಧ ಕ್ರೋಧ!
ದುರ್ಗುಣಕಾಗದು ಪ್ರೇಮದ ಪಥದಲಿ ಮಾಡುವುದು ಅವರೋಧ!
ಪ್ರೇಮ ವೇದನಾಮುಗ್ಧ ಜನ (ಇಹರೈ) ಸುಖನಿದ್ರಾಮಯಮತ್ತ
ಪ್ರೇಮದ ಬೆಳಕನು ಕಣ್ಣಲ್ಲಿ ತುಂಬಿ ನೋಳ್ಪರು ಜಗವ ಸಮಸ್ತ!

ಹೂವಿನ ಮಂಜರಿ ಪಲ್ಲವದಲ್ಲಿ ಪ್ರಿಯತಮ ರೂಪ ವಿಲೋಕೀ!
ತುಂಬಿ ಹರಿವುದೈ ಮಹಾಮೋದದಿಂ ಪ್ರೇಮಿಯ ಎದೆತುಳಿಕೀ!
ನೋಡಿ ಮೊಗ್ಗನು ಮಾಡುವ ನಾತನು ಉಸ್ಮತ್ತ ಪ್ರಲಾಪ
ಎಷ್ಟರ ತನಕ ಅಡಗುವೆ ನೀನೀ ದಳಗಳ ನಡುವೆ ಗೋಪ!

ಪ್ರೇಮ ತುಂಬಿಹ ಅರ್ಧ ತೆರೆದಿಹ ಕಣ್ಣಲಿ ಶಶಿಯ ಸಹಾಸ
ಪ್ರೇಮಿಯು ಕಂಡು ಭ್ರಮಿಸುವನಾಗ ಪ್ರಿಯತಮ ಹಾಸ ವಿಕಾಸ.
ಸರ್ವವು ಆತಗೆ ಪ್ರೇಮದ ಮಾಯೆಯು ಸಚರಾಚರ ಸಂಸಾರ
ಪ್ರೇಮ ಮಗ್ನನು ನಿತ್ಯ ನಾನು ಮಾಳ್ಪನು ಪ್ರೇಮೋದ್ಯಾನ ವಿಹಾರ!

ಪ್ರೇಮವೇದನಾ ವ್ಯಥಿತ ಹೃದಯದಿಂ ಮಧಿತ ಪ್ರಮೋದ್ಗಾರ
ಉಕ್ಕಿ ಭೂಮಿಯ ತುಂಬಿಬಿಡುವುದೈ! ನವಜೀವನ ಉತ್ಸಾಹ!
ಕರುಣಾಭರದೀ ಪ್ರೇಮ ಕಂಬನಿ ಸುರಿವುದು ಸುಧೆಯ ಸಮಾನ
ನೆನೆಸುತ ದಯೆಯ ಬೇರನು ಕೊಡುವುದು ಜಗಕಾಶ್ರಯದಾನ!

ಜನಜನದಲ್ಲಿ ಪ್ರೇಮೀಕಾಂಬನು ಪ್ರಿಯತಮನಾಕಾಂತಿ
ಅದರಿಂದಾತಗೆ ಲೋಕಸೇವೆಯೋಳ್ ದೊರಕುವದು ಅತಿಶಾಂತಿ.
ಪೀಡಿತನಾಪೀಡೇ-ಕ್ಷುದಿತನ ಹಸಿವೇ-ತೃಷಿತನ ದಾಹ-
ಕಳೆದು ನಿರಾಶ್ರಯ-ಆಶಾರಹಿತಗೆ ಕೊಡುವನು ಉತ್ಸಾಹಾ!

ಕೃಶಿತ ಜಾತಿಯ ಉನ್ನತಿಗೈಸಿ ನಿವಾರಿಸಿ ಕಂಟಕ ದೂರ
ಪ್ರೇಮೀ ಪರಮ ತೃಪ್ತನಪ್ಪನು ಆಹ್ಲಾದಿತ ಭರಪೂರ.
ದಯೆ! ಕರ್ತವ್ಯ! ಎಂಬುದಿಲ್ಲ-ಅಲ್ಲ! ಆತನದಾರಿಗು ದಾಸ!
ಆಶಿಪನಾತನು ಸದಾ ನೋಡಲು ಪ್ರಿಯತಮ ರೂಪ ವಿಕಾಸ.
ರೂಪವೆಲ್ಲಿದೆ? ಆರ್ತಮುಖದಲಿ- ಪ್ರಕೃತಹರ್ಷದ ಹಾಸ
ಆಗುವುದೆಂದು! ಉದಿತವಾಗಲೇ ಪ್ರಿಯತಮ ರೂಪವಿಕಾಸ

[ಶ್ರೀ ಕವಿವರ ರಾಮನರೇಶಜೀ ತ್ರಿಪಾಠಿಯವರ ಹಿಂದೀ ‘ಮಿಲನ’ ದಿಂದ].
*****
ಅನುವಾದ

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...