Home / ಕವನ / ಅನುವಾದ / ಗ್ರೀಕ್ ಹನಿಗವಿತೆಗಳು

ಗ್ರೀಕ್ ಹನಿಗವಿತೆಗಳು

ಈ ಹೆಣ್ಣು ಕೈಕೊಟ್ಟದ್ದು ಒಬ್ಬನಿಗೆ ಮಾತ್ರ
ಆದ್ದರಿಂದಲೇ
ಸತ್ತಮೇಲೂ ಇವಳ ಪಾತಿವ್ರತ್ಯ ಪ್ರಸಿದ್ದಿಗೆ ಪಾತ್ರ.
– ಅಜ್ಞಾತ

ಬದುಕಿದ್ದಾಗ ಸರ್ವಾಧಿಕಾರಿಗೆ
ಕಟ್ಟಿದ್ದೇ ದೇವಾಲಯ ಎಲ್ಲೆಲ್ಲೂ
ಸತ್ತಾಗ ಅವನ ಗೋರಿ ನಿಲ್ಲಿಸಲು ಸಹ
ಇರಲಿಲ್ಲ ಒಂದು ಕಲ್ಲು
– ಅಜ್ಞಾತ

ಕದ್ದೋಡಿ ಬಂದ ಡೆಮಿಟ್ರಿಯಸ್
ಕಾಳಗದಿಂದ
ಎಸೆದು ಭಲ್ಲೆ ಗುರಾಣಿ ನಿರ್ಲಜ್ಜೆಯಿಂದ.
ಬಾಗಿಲು ತೆರೆದ ತಾಯಿ
ಇರಿದು ಕೂಗಿದಳು “ನಾಯಿ!
ನಿನ್ನ ಧೈರ್ಯಕ್ಕೆ ಊರು ನಾಚೀತು, ಸಾಯಿ!’
– ಇರೀಸಿಯಸ್. ಕ್ರಿ.ಪೂ. ಒಂದನೆಯ ಶತಮಾನ

ಕೇಶ ದಂತ ಬಣ್ಣ ಸುಣ್ಣ
ಏನೆಲ್ಲ ಕೊಂಡೆ ಚೆನ್ನೆ
ಕೊಳ್ಳಬಹುದಿತ್ತಲ್ಲೆ ಅದರ ಬದಲು
ಭರ್ಜರಿ ಮುಖವನ್ನೆ!
– ಲ್ಯುಸಿಲಿಯಸ್, ಕ್ರಿ.ಪೂ. ಒಂದನೆಯ ಶತಮಾನ

ನಾನು ಮುತ್ತಿಟ್ಟಿದ್ದು ತಪ್ಪು, ಪಾಪ ಎನ್ನಿಸಿದರೆ ನಿನಗೆ
ಶಿಕ್ಷಿಸಿಬಿಡು ಕೂಡಲೆ
ಅದನ್ನು ಹಿಂತಿರುಗಿಸಿ ನನಗೆ
– ಸ್ಟ್ರ್ಯಾಟೊ. ಕ್ರಿ.ಪೂ. ಎರಡನೆಯ ಶತಮಾನ

ಪರಿಚಯ ಕೊಲ್ಲುತ್ತದೆ ಪ್ರೀತಿಯನ್ನ
ಇಲ್ಲ, ಕಾಲ ಮೆಲ್ಲುತ್ತದೆ ನಿಧಾನ
ಎರಡಕ್ಕೂ ತಗ್ಗದಿದ್ದರೆ ಬೆಂಕಿ
ಸ್ವಾಗತಿಸುತ್ತಾನೆ ಪ್ರೇಮಿ ನೇಣನ್ನ
– ಕ್ರೇಟ್ಸ್, ಕ್ರಿ.ಪೂ. ಎರಡನೆಯ ಶತಮಾನ

ವಾಗ್ಮಿಗಳೇ ಬನ್ನಿ ಈಗ
ಬೇಕಾದಷ್ಟು ವಾಕ್ಚಾತುರ್ಯ ತೋರಿ
ಮಹಾವಾಗ್ಮಿ ಆಂಫಿಲೋಕಸನ
ತುಟಿಯನ್ನು ಹೊಲಿದಿದ ಈ ಗೋರಿ
– ಸೇಂಟ್ ಗ್ರಿಗರಿ, ಕ್ರಿ.ಶ. ನಾಲ್ಕನೆಯ ಶತಮಾನ

ಬಡವನಿಗೆ ಸಾವೇ ಇಲ್ಲ.
ಏಕೆಂದರೆ ಅವನು ಬದುಕಿರಲೇ ಇಲ್ಲ;
ಉಸಿರಾಡಲಿಲ್ಲವೆ ಎಂದರೆ
ಅದು ಒಡಲೆನ್ನುವ ಗೋರಿಯಲ್ಲಿ
ಹಣವಿಲ್ಲದೆ ಸಾವು ಸಹ ಸಿಕ್ಕೀತು ಎಲ್ಲಿ?
– ಪಾಲಡಾಸ್, ಕ್ರಿ.ಶ. ಐದನೆಯ ಶತಮಾನ

ನಾಲಿಗೆ ಇಲ್ಲದ ಛಾವಣಿ
ಮಿದುಳಿಲ್ಲದ ಬೋಗುಣಿ
ಆಲಿಯಿರದ ಖಾಲಿಚಿಪ್ಪು
ತಳವಿಲ್ಲದ ಭರಣಿ
ಮೊನ್ನೆ ಹಾಗೆ ಉರಿದ ಬದುಕು
ಈಗ ಬರೀ ಬುರುಡ
ನಾಯಿ ಹೊಯ್ದು ಹೋದರು ಸಹ
ಕಚ್ಚಲಿಲ್ಲ ದವಡೆ!
– ಅಜ್ಞಾತ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...