Home / ಕಥೆ / ಕಿರು ಕಥೆ / ಕಲ್ಲು – ಮುಳ್ಳು

ಕಲ್ಲು – ಮುಳ್ಳು

ಕಲ್ಲು ಮುಳ್ಳಿನ ನಡುವೆ ಒಮ್ಮೆ ಹೀಗೆ ಮಾತುಕತೆ ನಡೆದಿತ್ತು. ಕಲ್ಲು ಬಂಡೆಗೆ ಆತು ಬೆಳದಿದ್ದ ಮುಳ್ಳಿನ ಪೊದೆ ಹೇಳಿತು-

“ಏಕೆ ನನ್ನ ಬಗಲಲ್ಲಿ ಇರುವೆ? ನಾನು ನಿನ್ನ ಸನಿಹಕ್ಕೆ ಕರೆಯಲಿಲ್ಲ.”

“ನಿನ್ನ ಚೂಪು ಮುಳ್ಳಿನ ಮೂಗು ಯಾರಿಗೂ ಬೇಡ. ನನ್ನ ಹತ್ತಿರ ಬರುವ ಮನುಷ್ಯರು ನೀನಿದ್ದರೆ, ಹೆದರುತ್ತಾರೆ. ನನ್ನ ಸಂಗ ಮಾಡದೆ ದೂರ ಹೋಗುತ್ತಾರೆ. ಅದಕ್ಕೆ ನೀನು ಎಲ್ಲಿಗಾದರೂ ಹೋಗಿ ನಿನ್ನ ದಾರಿ ನೋಡಿಕೊ” ಎಂದಿತು ಕಲ್ಲು ಬಂಡೆ. ಮುಳ್ಳು ಮುನಿಸಿ ಓಡಿ ಬಂದು ದಾರಿಯಲ್ಲಿ ತನ್ನ ನೆಲೆ ನಿಲ್ಲಿಸಿತು. ಹೋಗಿ ಬರುವ ಪಥಿಕರೆಲ್ಲರೂ ಬೈಗಳ ಸುರಿಮಳೆ ಸುರಿದು ಕಾಲಿಗೆ ಚುಚ್ಚಿದ ಮುಳ್ಳನ್ನು ಕಿತ್ತೆಸೆಯುತ್ತಿದ್ದರು. ಮುಳ್ಳಿನ ಮನಕೆ ಬಹಳ ನೋವಾಯಿತು.

“ದೇವರೇ! ನಾನು ಯಾರಿಗೂ ಬೇಡದವನನ್ನಾಗಿ ಏಕೆ ಸೃಷ್ಟಿಸಿದೆ? ಎಲ್ಲರಿಂದಲೂ ನನಗೆ ಬೈಗಳು ನನ್ನ ಮೆಚ್ಚಿಕೊಳ್ಳುವವರಾರು ಇಲ್ಲ. ನಾನು ಏನು ಮಾಡಲಿ? ನನ್ನ ಜೀವನ ಸಾರ್ಥಕವಾಗಲಿಲ್ಲ. ನಾನು ಬದುಕಿದ್ದರೇನು ಫಲ?” ಎಂದು ಪರಿತಪಿಸಿತು. ಮುಳ್ಳಿನ ಆರ್ತಾಲಾಪವನ್ನು ಕೇಳಿದ ಮಹಾದೇವ ಹೇಳಿದ-

“ಅಳಬೇಡ ಮುಳ್ಳೆ! ನಿನ್ನ ಬಾಳ ಸಾರ್ಥಕತೆಗೆ ಒಂದು ದಾರಿ ಇದೆ” ಎಂದು.

ಮುಳ್ಳು ಮುಸಿ ಮುಸಿ ನಕ್ಕು ಹಲ್ಲುಕಿರಿಯಿತು. ಧನ್ಯತೆಯನ್ನು ಸೂಚಿಸಿತು. ತನ್ನ ಬಾಳಿಗೆ ದಾರಿ ತೋರಲು ಕೇಳಿತು.

“ನಾನು ಸೃಷ್ಟಿಸಿದ ಎಲ್ಲದರಲ್ಲೂ ಜೀವ ಚೇತನವಿದೆ. ಯಾವುದೂ ಸಾರ್ಥಕ, ನಿರರ್ಥಕ ಎಂದು ಪರಿಗಣಿಸಲಾಗುವುದಿಲ್ಲ. ಜಗದ ಮುಳ್ಳು, ಕಲ್ಲು, ಹುಲ್ಲು, ಗಿಡ, ಮರ, ಹೂವು ಇನ್ನು ಎಲ್ಲಾ ಸರ್ವಸ್ಯವೂ ದೈವ ಸೃಷ್ಟಿಯೇ. ನೀನು ಇನ್ನು ಮೇಲೆ ಮರುಗಬೇಡ.

ನಿನ್ನನ್ನು ನಾನು ಅಂಗರಕ್ಷಕನಾಗಿ ನೇಮಿಸುವೆ”- ಎಂದ ಮಹಾದೇವ.

“ಬೇರೆಯವರನ್ನು ಚುಚ್ಚಿವಿನೆಂಬ ಕಳಂಕ ಹೊತ್ತ ನಾನು, ಅಂಗರಕ್ಷಕನಾಗಲು ಸಾಧ್ಯವೇ? ಅದು ಯಾರಿಗೆ, ಹೇಗೆ ಎಂದು ಕೇಳಿತು? -ಮುಳ್ಳು

“ಸುಂದರ ಗುಲಾಬಿ ಹೂವಿಗೆ ಇನ್ನು ಮೇಲೆ ನೀನು ಅಂಗರಕ್ಷಕ, ಗುಲಾಬಿ ಸೌಂದರ್ಯ ಭಕ್ಷಕರಿಗೆ ನೀನು ಮುಳ್ಳು ಚುಚ್ಚಿ ರಕ್ಷಣೆ ಮಾಡು” ಎಂದ ಮಹದೇವ.

ಮುಳ್ಳಿನ ಮನಸ್ಸು ಹರ್ಷೋಲ್ಲಾಸಿತವಾಯಿತು. ಗುಲಾಬಿ ಸುಮನದ ಬಳಿ ಸ್ಥಾನ ಕೊಟ್ಟ ದೈವಕ್ಕೆ ಚಿರ ಋಣಿಯಾಗಿ ನಮಿಸಿತು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...