Home / ಕವನ / ಕವಿತೆ / ಕಾರ್‍ಗಿಲ್ ಹಾಡು

ಕಾರ್‍ಗಿಲ್ ಹಾಡು

ಕಾರ್‍ಗಿಲ್ ನಾಡಿನ ಈ ಹಾಡು
ಬಾನಂಗಳದ ಬೆಂಕಿ ಚೆಂಡು

ಎತ್ತರೆತ್ತರ ಮರಗಿಡಗಳ ಕಾಡಿನಲಿ
ಕಣಿವೆ ಕೊತ್ತಲಗಳಲಿ ಹರಿವ ನೀರಿನಲಿ
ಗುಂಡಿನ ಮೊರೆತದ ಹಾಡು

ಮೈ ಕೊರೆವ ಛಳಿಯಲಿ
ಬೆಂಬಿಡದೇ ಪತ್ತೆ ಹಚ್ಚಿಹರು ಶತ್ರುಗಳ ಜಾಡು
ನಮ್ಮ ಯೋಧರು ಬೀಡು ಬಿಟ್ಟಿಹರಡವಿಯಲಿ

ನುಗ್ಗಿಹರು ದಂಡು ದಂಡು ರೊಚ್ಚಿನಲಿ
ಶತೃಗಳ ಮೆಟ್ಟುತ ಶೌರ್‍ಯದಲಿ
ಕಣಿವೆಗಳ ಸೀಳುತ ಘರ್ಜಿಸಿದವು ಸಿಂಹಗಳು

ಮೊಳಗಿದವು ರಣಕಹಳೆ
ಬಾಂಬುಗಳ ದಾಳಿಯಿಡತಲಿ
ಆಗಸದೆತ್ತರ ಸಿಡಿದವು ಶೆಲ್ಲುಗಳು

ಗುಂಡಿಗೆ ಎದೆಯೊಡ್ಡಿದವು ಕಾರ್‍ಗಿಲ್ ಕೆನ್ನಾಲಿಗೆಯಲಿ
ಕಂಪು ಸೂಸುವ ಮೊದಲೇ ತಾಯ್ನೆಲವನಪ್ಪಿದವು
ಮೈಚಾಚಿ ಮುನ್ನುಗಿದ್ದ ಮೊಗ್ಗು ಅರಳಲಿಲ್ಲ

ಬುಗಿಲೆದ್ದ ಉರಿವ ಬೆಂಕಿಯ ಚಂಡಿನಲಿ
ಯೋಧರ ರಕುತದೋಕುಳಿಯಲಿ ಹಾರಿತು
ತ್ರಿವರ್ಣ ಧ್ವಜ ಕಾರ್‍ಗಿಲ್ ಗುಡ್ಡದ ಮೇಲೆ

ಉಳಿಯಿತು ಭಾರತಾಂಬೆಯ ಮಾನ
ಕ್ಷಣ ಕ್ಷಣಕ್ಕೂ ಕಾರ್‍ಗಿಲ್
ವಿಜಯವು ನಮ್ಮದಾಯಿತು

ಕಾರ್‍ಗಿಲ್ ಕಲಿಗಳಿಗೆ
ಇರಲಿ ನಮ್ಮ ನಮನ
ಇರಲಿ ನಮ್ಮ ಸ್ಮರಣೆ
*****
೬-೯-೨೦೦೯ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ
೧-೮-೨೦೦೯ರ ನಮ್ಮ ನಾಡು ಪತ್ರಿಕೆಯ ಚಿಣ್ಣರ ನಾಡು ವಿಭಾಗದಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...