ವೇಣುವಿನ ನಾದ ಹೊಮ್ಮಿತು
ನಾಭಿಯೊಳಗಿಂದ ಮೂಡಿದ್ದು
ಅದೆಂಥಾ ಮೋಹನ್ಮೋಹ
ಮಾರ್ದವದ ಕನಸುಗಳು
ಕಾಡ ನೀರವತೆಯಲ್ಲೂ
ಮುಗಿಲ ಮುಟ್ಟಿಬಂದವು
ಬೆಂದ ನೆಲ ಪ್ರಫುಲ್ಲಿಸಿತು
ಪರಿಮಳ ಪೂಸಿತು
ಇಬ್ಬನಿಯೂ ತಂಪೆರೆಯಿತು
ಮೌನದ್ವಾರ ತೆರೆದುಕೊಳ್ಳಲು
ಧೀರ್ಘದಾಹದ ಗಂಟಲು
ಬಿರಿಯಿತು
ತುಟಿಯಂಚ ಕೊನೆರಾಗ
ಉಲಿಯಿತು.
ಅರೇ ಅವ ನಿಲ್ಲಲೇ ಇಲ್ಲ
ಮೋಹದ ಪರದೆಗೆ ನವಿಲುಗರಿ ಸಿಕ್ಕಿಸಿ.
ಸುಳಿಗಾಳಿಯಂತೆ ಸರ್ರನೇ
ಹೊರಟೇ ಹೋದ.
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.