ಬಾನ್ಸುರಿಯ ನಾದ

ಅದೆಷ್ಟು ದಿನಗಳಾದವು ಕಸುವು
ಹದಗೊಳ್ಳಲು ಕಾದು,
ಬರುವ ನಿರೀಕ್ಷೆಗಳಲ್ಲಿಯೇ ನೆಟ್ಟ ಕಣ್ಣು
ಬಿದಿರುಕೋಲಿನ ನಾದ ಕರ್‍ಣಕ್ಕಿಳಿಯದೇ
ಕದಿರು ಕತ್ತರಿಸಿದ ಪೈರು ಆಕೆ

ಆ ನೀಲಾಂಗನನ ಸುತ್ತ ನೆರೆದ
ಗೋಪಿಕೆಯರ ಕಮಲದಳ ಕಣ್ಣುಗಳ
ದಂತ ಕದಳಿ ಮೈ ನುಣುಪು
ತೋಳುಗಳ ನಡುವೆಯೂ
ಅದೆಂಥಹ ಸೆಳೆತ ಶ್ಯಾಮಗೆ ರಾಧೆಯೆಡೆಗೆ.

ರುಕ್ಮಿಣಿಯ ಬಾಹುಬಂಧ, ಭಾವಬಂಧದಲ್ಲಿ
ತಲ್ಲೀನ ಚುಂಬನ ಸೆಳೆತ, ಬಳೆಗಳ ಕಿಣಿಕಿಣಿ,
ಮಥುರೆಯ ಹಾದಿ ಬೀದಿಗಳೆಲ್ಲ ಅವರದೇ
ಗೆಜ್ಜೆಯುಲಿತ, ಹೆಜ್ಜೆ ಕುಣಿತ.
ಬಿದಿರಕೋಲಿಗೆ ಲೋಕ ಮೆಚ್ಚಿತು.
ಹಾಡಿಹೊಗಳಿತು

ಕಾಲ ನಿಲ್ಲದು
ಓಡು ಕುದುರೆಯ ಗೊರಸು ಸದ್ದು
ಬಿದಿರಕೋಲಿನ ನಾದ
ನೆನಕೆಯ ಹೊತ್ತ ಹೆಣ್ಣು ಆಕೆ
ಬತ್ತಿದ ಎದೆಯೊಳಗೆ ನಿಷ್ಪಂದ ಉಸಿರಾಗಿ
ಎದೆಯೊಳಗೆ ಸುರಿದುಕೊಂಡದ್ದು
ಅದೇ ರೂಪು,
ಪುಷ್ಪಗಂಧಕ್ಕೆ ಸಡಿಲಾಗದ ಮನಕ್ಕೆ
ಕಡು ಪರಿತಾಪ,

ಕನ್ನಡಿಯಲ್ಲಿ ಮೂಡಿದ ಪಾತ್ರಗಳೆಲ್ಲ
ಕರಗಿಹೋದವು
ಕೃಷ್ಣ ಅವಳೆಡೆಗೇ ನಡೆದು ಬಂದ
ಬಾನ್ಸುರಿಯ ರಂಧ್ರಗಳೆಲ್ಲ
ತಾನೆ ತಾನೆ ರಿಂಗುಣಿಸಿದವು
ಅವನ ಕನಸಿನ ತುಂಬಾ ಮುತ್ತಾಗುವುದು
ಮಣಿ ಪೋಣಿಸುವುದು ಆಕೆ ಮಾತ್ರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೪
Next post ಮುಸ್ಸಂಜೆಯ ಮಿಂಚು – ೨೧

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…