Home / ಕವನ / ಕವಿತೆ / ಅವರು ಮತ್ತು ನಾವು

ಅವರು ಮತ್ತು ನಾವು

ನಾವು ತಿನ್ನುವುದಕ್ಕೆ
ಅನ್ನ ಕೇಳಿದೆವು
ಅವರು ಹುಳ ಬಿದ್ದ
ಅಕ್ಕಿ ಕೊಟ್ಟರು
ನಾವು ಹುಳ ದೇವರಿಗೆ ಕೊಟ್ಟು
ಅಕ್ಕಿಯನ್ನು ಕಣ್ಣಿಗೊತ್ತಿಕೊಂಡು
ಅನ್ನ ಮಾಡಿ ಉಂಡೆವು!

ಈಗ
ಅವರು ತಿನ್ನುವ ಅನ್ನಕ್ಕೇ
ಹುಳ ಬಿದ್ದಿದೆ
ಅವರು ಹುಳುಗಳನ್ನು
ನಿಷ್ಕಾರುಣ್ಯವಾಗಿ ಕೊಂದುಬಿಟ್ಟು
ಅನ್ನಕ್ಕಾಗಿ ದೇವರಿಗೇ
ಕೈ ಚಾಚುತ್ತಿದ್ದಾರೆ!

ಸಾಯುವಾಗ
ನಾವು ಕುಡಿಯುವುದಕ್ಕೆ
ನೀರು ಕೇಳಿದೆವು
ಅವರು ಆಕಾಶದಲ್ಲಿ ನಿಂತು
ಪಾತಾಳಕ್ಕೆ ನೀರು ಸುರಿದರು
ಸುರಿದ ನೀರಲ್ಲಿ
ನಾವು ದಣಿವಾರಿಸಿಕೊಂಡು
ಉಳಿದ ನೀರಲ್ಲಿ
ಕಣ್ಣೀರ ತೊಳೆದುಕೊಂಡೆವು

ಈಗ
ಅವರಿಗೆ ಸಾಯುವಾಗ
ಬಾಯಲ್ಲಿ ನೀರು ಬಿಡುವವರಿಲ್ಲ
ಅವರು ಸಾಕಿ ಸಲಹಿದ ಮಕ್ಕಳು
ಆಕಾಶದಲ್ಲಿ ಹಾರಿ
ದೂರ ದೇಶ ಸೇರಿದ್ದಾರೆ
ಅವರ ನೆನಪಿನಲ್ಲಿಯೇ ಇವರು
ಕಣ್ಣೀರು ಸುರಿಸುತ್ತಾ
ಪಾತಾಳಕ್ಕೆ ಇಳಿದು ಹೋಗಿದ್ದಾರೆ!

ನಮಗೇನಾದರೂ ಕೊಡುತ್ತಲೇ
ನಮ್ಮಗಳ
ಜೀವ, ಮಾನ, ಪ್ರಾಣಗಳ
ಉಳಿಸಿದ ಅವರ
ನಾವು ಶಪಿಸುವುದೂ ತರವಲ್ಲ!
ಮಾನವನೆದೆ ಬರಡೇನಲ್ಲ
ಪ್ರೀತಿ ಪ್ರೇಮಗಳ
ದವಸ ತುಂಬಿದ ಕಣಜ
ಹಂಚಿ ಉಟ್ಟುಣ್ಣುವ
ಸುಖದ ನಿಜ
ತಿಳಿಯಬೇಕಿದೆ ಮನುಜ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...