Home / ಕವನ / ಕವಿತೆ / ಅವರು ಮತ್ತು ನಾವು

ಅವರು ಮತ್ತು ನಾವು

ನಾವು ತಿನ್ನುವುದಕ್ಕೆ
ಅನ್ನ ಕೇಳಿದೆವು
ಅವರು ಹುಳ ಬಿದ್ದ
ಅಕ್ಕಿ ಕೊಟ್ಟರು
ನಾವು ಹುಳ ದೇವರಿಗೆ ಕೊಟ್ಟು
ಅಕ್ಕಿಯನ್ನು ಕಣ್ಣಿಗೊತ್ತಿಕೊಂಡು
ಅನ್ನ ಮಾಡಿ ಉಂಡೆವು!

ಈಗ
ಅವರು ತಿನ್ನುವ ಅನ್ನಕ್ಕೇ
ಹುಳ ಬಿದ್ದಿದೆ
ಅವರು ಹುಳುಗಳನ್ನು
ನಿಷ್ಕಾರುಣ್ಯವಾಗಿ ಕೊಂದುಬಿಟ್ಟು
ಅನ್ನಕ್ಕಾಗಿ ದೇವರಿಗೇ
ಕೈ ಚಾಚುತ್ತಿದ್ದಾರೆ!

ಸಾಯುವಾಗ
ನಾವು ಕುಡಿಯುವುದಕ್ಕೆ
ನೀರು ಕೇಳಿದೆವು
ಅವರು ಆಕಾಶದಲ್ಲಿ ನಿಂತು
ಪಾತಾಳಕ್ಕೆ ನೀರು ಸುರಿದರು
ಸುರಿದ ನೀರಲ್ಲಿ
ನಾವು ದಣಿವಾರಿಸಿಕೊಂಡು
ಉಳಿದ ನೀರಲ್ಲಿ
ಕಣ್ಣೀರ ತೊಳೆದುಕೊಂಡೆವು

ಈಗ
ಅವರಿಗೆ ಸಾಯುವಾಗ
ಬಾಯಲ್ಲಿ ನೀರು ಬಿಡುವವರಿಲ್ಲ
ಅವರು ಸಾಕಿ ಸಲಹಿದ ಮಕ್ಕಳು
ಆಕಾಶದಲ್ಲಿ ಹಾರಿ
ದೂರ ದೇಶ ಸೇರಿದ್ದಾರೆ
ಅವರ ನೆನಪಿನಲ್ಲಿಯೇ ಇವರು
ಕಣ್ಣೀರು ಸುರಿಸುತ್ತಾ
ಪಾತಾಳಕ್ಕೆ ಇಳಿದು ಹೋಗಿದ್ದಾರೆ!

ನಮಗೇನಾದರೂ ಕೊಡುತ್ತಲೇ
ನಮ್ಮಗಳ
ಜೀವ, ಮಾನ, ಪ್ರಾಣಗಳ
ಉಳಿಸಿದ ಅವರ
ನಾವು ಶಪಿಸುವುದೂ ತರವಲ್ಲ!
ಮಾನವನೆದೆ ಬರಡೇನಲ್ಲ
ಪ್ರೀತಿ ಪ್ರೇಮಗಳ
ದವಸ ತುಂಬಿದ ಕಣಜ
ಹಂಚಿ ಉಟ್ಟುಣ್ಣುವ
ಸುಖದ ನಿಜ
ತಿಳಿಯಬೇಕಿದೆ ಮನುಜ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...