ಅಣು ಒಪ್ಪಂದದ ಹಿಂದಿನ ಪುರುಷ ಮತ್ತು ಮಹಿಳೆ

ಸಾರಾ ಆರ್. ರೈಡ್‌ಮಾನ್ ಅವರು ಬರೆದ ‘ಅಣುವಿನ ಹಿಂದಿನ ಪುರುಷರು ಮತ್ತು ಮಹಿಳೆಯರು’ ಎಂಬ ಪುಸ್ತಕವನ್ನು ನಾನು ಕೊಂಡ ಮೇಲೆ ೫೦ ವರ್ಷಗಳು ಕಳೆದಿವೆ. ಇಂದಿಗೂ ಈ ಪುಸ್ತಕವು ನನ್ನ ಕೊಠಡಿಯ ಮೇಜಿನ ಮೇಲೆ ಪ್ರಮುಖ ಸ್ಥಾನದಲ್ಲಿ ಕಂಗೊಳಿಸುತ್ತಿದೆ. (ಲೇಖಕಿ ಆಕೆಯ ಪುಸ್ತಕವನ್ನು ನಾನು ಓದಬೇಕೆಂದು, ಮತ್ತೆ ಮತ್ತೆ ಓದಬೇಕೆಂದು ಇಚ್ಛಿಸಿರಬಹುದು.)

ಅದು ಸುಮಾರು ೧,೦೦೦ ಪ್ಯಾರಾಗಳನ್ನು ಹೊಂದಿದೆ. ಎಲ್ಲ ಪ್ಯಾರಾಗಳೂ ಭವ್ಯ ಪ್ಯಾರಾಗಳು (ಪ್ಯಾರ್ ಕಾ ಪ್ಯಾರಾ). ಮೊದಲನೇ ಪ್ಯಾರಾವು ೧೯೫೬ ಅಕ್ಟೋಬರ್ ೧೭ ರಂದು ಆದ ಪ್ರಪಂಚದ ಮೊಟ್ಟ ಮೊದಲನೇ ಪೂರ್ಣ ಪ್ರಮಾಣದ ಅಣುಶಕ್ತಿ ಕೇಂದ್ರದ ಉದ್ಘಾಟನೆಯ ಬಗ್ಗೆ ತಿಳಿಸುತ್ತದೆ.

ಆ ಪುಸ್ತಕವು ಭಾರತದಲ್ಲಿ ಔದ್ಯೋಗಿಕ ವಿಕಾಸದಲ್ಲಿ ಅಣುಶಕ್ತಿ ಸ್ಥಾವರಗಳ ಪಾತ್ರವನ್ನು ನಮಗೆ ತಿಳಿಸುತ್ತದೆ.

ಈ ಸಂದರ್ಭದಲ್ಲಿ ನಾವು, ನಮ್ಮರಾಷ್ಪ್ರವು ನಾಗರಿಕ ಪ್ರಯೋಜನಕ್ಕಾಗಿ ಅಣುಶಕ್ತಿ ಒಪ್ಪಂದಕ್ಕೆ ರುಜು ಹಾಕಿ ಖಾತರಿಪಡಿಸುವುದರಲ್ಲಿ ಶ್ರಮಿಸಿದ ಪುರುಷ ಮತ್ತು ಮಹಿಳೆಗೆ ಕೃತಜ್ಞರಾಗಿರಬೇಕು. ಆ ಇಬ್ಬರು ಮಹಾವ್ಯಕ್ತಿಗಳು ಯಾರು ? ಅಣು ಒಪ್ಪಂದದ ಹಿಂದಿನ ಪುರುಷ ನಮ್ಮ ಪ್ರಿಯ ಡಾ|| ಮನಮೋಹನ್ ಸಿಂಗ್, ಪ್ರಧಾನ ಮಂತ್ರಿಗಳು ಮತ್ತು ಅಣು ಒಪ್ಪಂದದ ಹಿಂದಿನ ಮಹಿಳೆ ನಮ್ಮ ಜನಪ್ರಿಯ ಶ್ರೀಮತಿ ಸೋನಿಯಾ ಗಾಂಧಿ, ಯುಪಿ‌ಎದ ಮಾನ್ಯ ಅಧ್ಯಕ್ಷೆ.

ಈ ಅಣುಶಕ್ತಿ ಒಪ್ಪಂದದ ಫಲವನ್ನು ಉಪಯೋಗಿಸಿಕೊಳ್ಳುವ ಪ್ರಯತ್ನದಲ್ಲಿ ಮೊದಲ ಮುಖ್ಯಮಂತ್ರಿ ನಮ್ಮ ಪ್ರೀತಿಯ ಡಾ || ಬಿ. ಎಸ್. ಯಡಿಯೂರಪ್ಪ ಅವರು ಈಗಾಗಲೇ ಕೇಂದ್ರಕ್ಕೆ ಬರೆದು ಪ್ರಸ್ತಾಪಿಸಲ್ಪಟ್ಟ ೨೧೦ ಎಂ. ಡಬ್ಲೂ. ಘಟಕಗಳ ಬದಲಾಗಿ ಎರಡು ೭೦೦ ಎಂ. ಡಬ್ಲೂ. ಅಣುಶಕ್ತಿ ಘಟಕಗಳನ್ನು ವಿಸ್ತರಣಕ್ಕಾಗಿ ಕೈಗಾದಲ್ಲಿ ಸ್ಥಾಪಿಸಲು ಕೇಳಿದ್ದಾರೆ. ಅವರು ರಾಜ್ಯದಲ್ಲಿ ದೊಡ್ಡಗಾತ್ರದ ಅಣು ರಿಯಾಕ್ಟರ್‌ಗಳನ್ನೊಳಗೊಂಡ ಅಣುಶಕ್ತಿ ಪಾರ್ಕನ್ನು ಸ್ಥಾಪಿಸಲೂ ಒತ್ತಾಯಿಸಹುದು.

ನಮ್ಮ ಮುಖ್ಯಮಂತ್ರಿಗಳ ವಿರೋಧಿಗಳು ನಮ್ಮ ಮುಖ್ಯಮಂತ್ರಿ ಅವರು ಬಹಳ ‘ಪವರ್ ಹಂಗ್ರಿ’ ಎಂದು ಹೇಳುತ್ತಾರೆ. ಆದರೆ ನಮ್ಮ ಜನಪ್ರಿಯ ಮುಖ್ಯಮಂತ್ರಿಯವರಿಗೆ ಪವರ್ ಅಂದರೆ ಥರ್ಮಲ್ ಪವರ್ (ತಾಪಶಕ್ತಿ), ನ್ಯೂಕ್ಲಿಯರ್ ಪವರ್ (ಅಣುಶಕ್ತಿ), ಸೋಲಾರ್ ಪವರ್ (ಸೌರಶಕ್ತಿ), ಹೈಡಲ್ ಪವರ್ (ಜಲವಿದ್ಯುಚ್ಛಕ್ತಿ) ಮತ್ತು ವಿಂಡ್‌ಪವರ್ (ವಾಯುಶಕ್ತಿ). ಅವರು ಅನೇಕ ಶಕ್ತಿಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ. ನಮ್ಮ ರಾಜ್ಯವು ಕ್ರಿ.ಶ. ೨೦೧೪ ರ ಹೊತ್ತಿಗೆ ೧೪,೦೦೦ ಎಂ.ಡಬ್ಲೂ. ಶಕ್ತಿಯನ್ನು ಉತ್ಪಾದಿಸಿ ಸಾಕಷ್ಟು ಶಕ್ತಿಯನ್ನು ಪಡೆದುಕೊಳ್ಳುವುದೆಂದು ನನಗೆ ನಂಬಿಕೆ ಇದೆ.

ನನಗೆ ಅಣುವು ಯಾವಾಗಲೂ ಒಂದು ಗಹನ ಸೌಂದರ್ಯವಾಗಿತ್ತು. ಅಣುವಿನ ಕೇಂದ್ರ ನನಗೆ ಸಿಲುಕದೆಂದು ನನಗೆ ಗೊತ್ತಿತ್ತು. ಆದರೂ ಅದನ್ನು ತಲುಪುವುದಕ್ಕಾಗಿ ಸರ್. ಜಾರ್ಜ್. ಥಾಮಸನ್ ಮತ್ತು ಅನೇಕ ಪುಸ್ತಕಗಳನ್ನು ಓದಿ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೂ ಅಣುವಿನ ಕೇಂದ್ರದತ್ತ ನನ್ನ ದೂರ ಪ್ರಯಾಣದಲ್ಲಿ ಮೊದಲ ಮೈಲಿಯಲ್ಲೇ ನಾನೇಕೆ ನಿಂತು ಹೋಗಿದ್ದೇನೋ ನನಗೆ ನಿಜವಾಗಿಯೂ ತಿಳಿಯದು.
*****

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಡ
Next post ಯುಗಾದಿ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys