Home / ಕವನ / ಕವಿತೆ / ಮಂಗಳಲೋಕದದೂತನು

ಮಂಗಳಲೋಕದದೂತನು

ಜಗವನು ನೋಡಲುಭರದಲಿ ಬಂದನುಮಂಗಳ ಲೋಕದದೂಕನುತಾನೂ|
ಜಗದಲಿ ಮನುಜರನಡುವಳಿ ನೋಡಲು ಭೊಮಿಗೆತಾನಿಳಿದೂ||
ಜಗದೊಳು ಕಾನನಸಿರಿ ಹಾಳಾದುದ ನೋಡಲು ಕರಗಿತು ಮನವಾದೂತನ |
ಜಗದೊಳ ಗಣಜನ ಕಾನನ ಬೆಳಿಸದೆಗೆಡೆಹಿಹ ಹಾಳದನೆನ್ನುತಲಿ || ೧ ||

ಮುಂದೆ ನಡೆಯುತವ ಹೊಲದೋಟಂಗಳ ನೋಡಿದ ಬೆಳೆನಿಸ್ತೇಜಗಳಾ |
ತಂದೆ ಜಗತ್ಪತಿ ಕೊಟ್ಟಿರೆ ಮಳೆ ಹೊಳೆ ಸರಗಳ ನೀಜನರೂ ||
ಚಂದದಿಂದೆ ಶ್ರಮವಹಿಸುತೆ ಕಾಲುವೆ ಕಡಿಯುತೆ ಹೊಲನೀರ್ಗುಡಿಸದಲೆ|
ಅಂದಗೆಡಹುತೆ ಬೀಳ್ಗೆಡಹಿಹರೌ ಅಂಧರು ಮಾನವರು || ೨ ||

ಇಂತು ಮನದೊಳೆ ಚಿಂತಿಸಿನಡೆದೆನು ಹಳ್ಳಿಯಜನಗಳ ನೋಡ್ವವುದಕೇ |
ಸಂತೆಯಂತೆ ಜನ ನೆರೆದುದ ಕಂಡನು ಚಹದಂಗಡಿಗಳ ಚಪ್ಪರದಿ ||
ಎಂತು ಹೊಲಗಳಲಿ ದುಡಿಯುವರೀಜನರಿಂತು ದುರ್ವೆಸನ ಮಾಡುತಿರೆ |
ಇಂತು ಚಿಂತಿಸುತೆ ಮನದೊಳು ಮರುಗಿದೆ ಶಿವಶಿವನೆನ್ನುತ್ತೆ || ೩ ||

ಮನೆ ಮನೆತಿರುಗಿದ ತಾನೊಕ್ಕಲಿಗರ ದನಕರು ಧಾನ್ಯದ ಕಣಜಗಳಾ।
ಸನಿಹದಲಿರುವ ತಿಪ್ಪೆಯ ಕುಂಡಿಯ ನೋಡಲು ಬಯಸುತ್ತೇ ||
ಮನೆಗೋದಲಿಯೊಳು ಚಿಪ್ಪಡಿ ಮೇಯುವ ಬಸವನ ಕಂಡನು ಆದೂತ |
ಎನಿತೀಪರಿ ನೀಂ ಬಿಡುತಲಿ ಸಗ್ಗವ ಬಾಳುವೆ ಜಗದೊಳಗೆ || ೪ ||

ಇಂತು ಹೊಟ್ಟು ದಾಣಿಗಳನು ತಿನ್ನದೆ ಸೊರಗುತೆ ಬಳಕುಕೆ ಬೀಳುತ್ತೆ |
ಎಂತು ಹೊಲಗಳಲಿ ದುಡಿಯುವೆ ನಿರ್ಘ್ರಣಮನುಜರ ಸಲುವಾಗಿ ||
ಕಂತೆ ಮುಗಿದಿದು ನಿನ್ನೀಜಗದೊಳು ಇಂತುದುರ್ದಶೆಯ ಪಡೆದಿರೆ ನೀ|
ಚಿಂತಿಸಿಕೊರಗಿದ ಮನದೊಳೆ ಮರಗುತೆ ಭ್ರಾಂತಿಯಗೊಳ್ಳುತಲಿ || ೫ ||

ಹಸುಗಳ ನೀಕ್ಷಿಸೆ ಗೋದಲಿಯೋಳು ತಾ ನಡೆದನು ಬಸವನ ಮಾತೆಯರ |
ಕೃಷೆಯಾಗುತಲವು ಧಾರೆಗಳಲ್ಲದೆ ಶಿಶುಗಳ ಬಳಕಿಸುತೆ ||
ತುಸುಹಾಲನು ಮನೆಯೊಡತಿಯು ಹಿಂಡುತೆ ಮಾರುವಳಾಚಣದೀ |
ಹೊಸರೊಕ್ಕವ ತಾ ಗಳಿಸಲು ಹಾಲನು ಗೋಳಿಸಿ ಹಸುಗಳನೂ || ೬ ||

ಕಾಳಿನ ಕಣವ ನೋಡಲು ಪೋದನು ಕಾಳಿಲ್ಲದಲಿಲಿ ಹೆಗ್ಗಣವು |
ಮೇಳಿಸಿ ತಾಂಡವ ನಡಿಸಿರೆ ಅತ್ತನು ಗೋಳನು ರೈತರ ಸ್ಮರಿಸುತಲಿ ||
ಕಾಳುಗಳೆಲ್ಲಿಂ ಪಡೆಯುವೆ ತಿನ್ನಲು ರೇಶನ್ ದಾರಿಯೆ ತನಗೆಂದೂ |
ಗೋಳಿಟ್ಟತ್ತನು ದುಃಖದಿರೈತನು ಹಾಳೆನ್ನಯ ಬಾಳೆನ್ನುತಲಿ || ೭ ||

ಬಾಳನು ನಮ್ಮಯ ಸುಖಮಯ ಮಾಡಲು ದುಡಿದನು ಗಾಂಧಿಯು ನಮ್ಮಪ್ಪ |
ಖೂಳನು ಸಹಿಸದೆ ಕೊಂದನು ಗಾಂಧಿಯ ನಾವಾಗಿರುವೆವು ಪರದೇಶಿ ||
ಆಳುವ ಜನಗಳು ನಮ್ಮರು ಇರ್ದೊಡೆ ಸ್ವಾರ್ಥದಿ ಕೆಲಜನ ಪೀಡಿಪರೂ |
ಗೋಳುಗಳೆಲ್ಲವು ಬೆಳೆದಿವೆ ಗಾಂಧಿಯು ನಮ್ಮಯ ಮಧ್ಯದಿತಾಪೋಗೆ || ೮ ||

ಇಲ್ಲದಾಸೆಗಳ ಹಚ್ಚುತ ಬರುವರು ಧೂರ್ತರು ಹೋಟನು ಪಡೆವುದಕೆ |
ಎಲ್ಲ ಹೋಟುಗಳನೆತ್ವರು ಮೋಸದಿ ತಮ್ಮಯ ದುಡ್ಡಿನ ಬಲದಿಂದೆ ||
ಮೆಲ್ಲ ಮೆಲನೆ ವಚನವ ಮುರಿಯುತೆ ಸೊಕ್ಕಿಲಿ ಮೆರೆವರು ಸಭೆಗಳಲಿ |
ಇಲ್ಲಿ ಜನಗಳು ಪಡುತಿಹಗೋಳನು ತಿಳಿಯದಲೆಂದೆಂದೂ || ೯ ||

ನಮ್ಮ ರಾಜ್ಯವನು ನಾವಾಳುತಲಿಕೆ ನಮ್ಮದು ಸುಖವದು ತಾನಿರದು |
ನಮ್ಮನಮ್ಮೊಳು ನಾಡೊಳು ನಡದಿದೆ ಕಲಹವು ಯೆಲ್ಲೆಡೆಗೂ ||
ನಮ್ಮ ನಾಡಿದು ಹೆಮ್ಮಿಲಿ ಮೆರೆವಾ ದಾರಿಯ ತೋರ್ಪುದು ಕರುಣದಲಿ |
ನಮ್ಮನಿಮ್ಮಗಳ ಜಗದೊಡೆಯನು ವೊಬ್ಬನೆ ಸಿರಿಹರಿ ಭಗವಂತಾ || ೧೦ ||

ಸಹಕಾರಕದ ಸಂಘವ ನಿರ್ಮಿಸಿ ಹೊಲಗೂಡಿಸುತೆ ಬೆಳೆಯಿರಿ ಪೈರಾ |
ಮಹಜನ ಸಂಘದಿ ಪೊಳೆವುದು ತೇಜವು ಸುತ್ತಲು ಜಗದೊಳಗೇ ||
ಸಹಕರಿಸುತೆ ನೀವ್ಕೂಡುತೆ ದುಡಿಯಲು ಬಂಧುಗೆಳೆಲ್ಲರು ಒಮ್ಮನದಿ |
ಸಹಕರಿಸುವನವ ಮುರಹರಿ ನಿಮ್ಮೊಳು ಶಾಶ್ಚತ ಸುಖಗಳ ನೀಡುತ್ತೆ || ೧೧ ||

ಹಳ್ಳಿಯ ಉದ್ದಿಮೆಗಳ ನೀವ್ಬೆಳೆಯಿಸಿಕೊಳ್ಳುತೆ ಬಾಳಿರಿವುಳ್ಳದರೋಳ್‌ |
ಸುಳ್ಳರು ಕಳ್ಳರುಯೆನ್ನಿಸಿಕೊಳ್ಳದೆ ಸಜ್ಜನರೆಂಬಭಿಧಾನವ ಗಳಸಿರಿ ||
ತಿಳ್ಳಿಆಟದಲಿ ನಿಪುಣರು ನಿಮ್ಮೆಡೆಬಂದೊಡೆ ಮತಗಳ ಬೇಡ್ವುದಕೆ |
ತಳ್ಳಿ ಹಾಕುತಲಿ ನಿಮ್ಮೊಳು ವಳ್ಳೆಯ ರೈತನ ಕಳುಹಿರಿ ಪ್ರತಿನಿಧಿಯ || ೧೨ ||

ದಿಲ್ಲಿಯಲಿರ್ಪ ನಿಮ್ಮಯಹಿರಿಯರು ಚಿಂತಿಸುತಲಿರ್ಪರು ನಿಮ್ಮಯ ಹಿತವ |
ಅಲ್ಲಿಗೆ ತಿಳುಹಲು ನಿಮ್ಮಯ ಗೋಳನು ಧಾವಿಸಿ ಬರುವರು ಸಾಂತ್ವನಕೆ |
ಗುಲ್ಲನೆಬ್ಬಿಸುವ ಧೂರ್ತರ ತ್ಯಜಿಸುತೆ ನಂಬಿರಿ ನಿಮ್ಮಯ ನಾಯಕರ |
ಎಲ್ಲಸೌಖ್ಯಗಳನೊದಗಿಸೆ ನಾಯ್ಕರು ದುಡಿವರು ನಿಮ್ಮಯ ಸಲುವಾಗೀ ||೧೩||

ಮೂಢನಂಬುಗೆಗಳೆಲ್ಲನು ಬಿಸುಟುತೆ ಮಾಡಿರಿ ಸುಖಮಯ ಬಾಳುವೆಯಾ |
ಮಾಡುತೆ ಕಾಯಕ ಮಡಿಯಿರಿ ತೋಷದಿ ನಿಮ್ಮಯ ನಾಡಿನ ಸಲುವಾಗಿ ||
ದೂಡಿರಿ ಜಾತಿವಿಜಾತಿಯ ಜಗಳವ ಕೂಡುತೆ ನಾಡಿಗರೆಲ್ಲರು ನೀವು |
ಮಾಡಿರಿ ಬಿಚ್ಚೆಯ ಪ್ರಸರಣೆಯೆಲ್ಲೆಡೆ ಬೆಳಗಿರಿ ಜ್ಞಾನದ ಜ್ಯೋಯೋತಿಯನೂ ||೧೪||

ಇಂತು ದೂತತಾ ರೈತನ-ಸಾಂತ್ವನಗೊಳಿಸುತೆ ನಡೆದನು ಶಹರಕ್ಕೇ |
ನಿಂತು ನೋಡಿದನು ಧೂರ್ತರು ಮುರಿವುದ ಬಡವರ ಕತ್ತುಗಳಾ ||
ಎಂತು ಮಾನವರು ನೀತಿಯಬಿಡುತಲಿ ಮಾಡುತಲಿಹಕಾ ಸಂತೆಯಕಪ್ಪನು |
ಕಂತುಪಿತನೆ ನೀಂ ಶಾಶನಗೈಯ್ಯದೆ ಸುಮ್ಮನೇ ಕುಂತಿರುವೀ ||೧೫||

ನಗರನಾಯಕನು ದೂತನ ಕಾಣಲು ಗಡಬಿಡಿಸುತಲವ ತಾ ಬಂದಾ |
ನಗರ ನಮ್ಮದಿದು ಸಂಪದ್ವೈಭವದಿಂದತಿ ಮೆರೆಯುವದು ||
ನಗರವಾಸಿಗಳು ಧನವನು ಗಳಿಸುತೆ ಮೆರೆವರು ಸಂತತ ಭೋಗದಲೀ |
ಜಗಳವಾಡುವರು ತಮ್ಮೊಳು ಸ್ವಾರ್ಥದಿವಿದ್ಯೆಯ ಕಲಿತವರು ||೧೬||

ದೂತಕೇಳುತಲಿ ನಗರಾಧ್ಯಕ್ಷನ ಮಾತಿಗೆ ಪಡಿನುಡಿದಾ |
ನೀತಿಬಿಟ್ಟಿಹರು ಯೆಲ್ಲೆಡೆ ಜನಗಳು ನಿಮ್ಮೀಲೊಕದೊಳೂ ||
ನೀತಿರಹಿತಧನ ಮಾನಂಗಳ ಪಡೆಯಲು ಸಂತತ ಹೆಣಗುವರೂ |
ಕೋತಿಯಂದದಿಂ ಕುಣಿವರು ಹುದ್ದೆಯು ತಾ ಬರೆಮಾನವರು || ೧೭ ||

ನೀತಿ ತತ್ವಗಳ ಕಲಿಸಿರಿ ನಿಮ್ಮಯ ಪಾಠ ಶಾಲೆಯ ಬಾಲರಿಗೇ |
ನೀತಿವಂತರನೆ ಗುರುಗಳನೋದಿಸೆ ಹಚ್ಚಿರಿ ಶಾಲೆಯ ಬಾಲರ್ಗೆ ||
ನೀತಿಬಿಟ್ಟುಬರೆ ವೇತನಕಾಗಿಯೆ ದುಡಿವರ ದೂಡಿರಿ ಆಕ್ಷಣದಿ |
ಏತಕಾಗಿ ನೀವ್ಕೆಡಿಸುತಾಲಿರ್ಪಿರಿ ಭಾವೀಪಿಳಿಗೆಯಾ || ೧೮ ||

ನೀತಿವುಳ್ಳರನೆ ನೌಕರಿಯೊಳ್ಸರ್ಕಾರವು ಯಲ್ಲೆಡೆ ನೇಮಿಸಲೀ |
ನೀತಿಗೆಟ್ಟವಗೆ ಶಾಸನ ವಿಧಿಸಲಿ ದಂಡವನಾಚಣದಿ ||
ನೀತಿವಂತರೆ ರಾಜ್ಯವನಾಳಲು ಯೋಗ್ಯರುಯೆನಿಸುವರೂ |
ನೀತಿಪ್ರಸರಣೆಯು ಆಗಲಿಯಿಲ್ಲೆಡೆ ನಿಮ್ಮೀಜಗದೊಳಗೇ || ೧೯ ||

ಜಾತಿಯೊಂದೆಯೇ ಮಾನವ ಜಾತಿಯು ತಾನಾಗಿರೆ ಜಗದಿ |
ಜಾತಿಭೇದವದು ಪೆಂಣ್ಗಂಡೆಂಬುದು ಸೃಷ್ಟಿಯ ಕ್ರಮದಿಂದೆ ||
ಜಾತಿವಿಜಾತಿಯ ಜಗಳವಪೂಡ್ವುದು ಪಾಶವವೃತ್ತಿಯು ಕೇಳ್‌ |
ಜಾತ್ಯಂಧತೆಯೂ ದೂಡುತೆ ಹೊಂದಿರಿ ಶಾಶ್ವತ ಸುಖಗಳನೂ || ೨೦ ||

ಹಳ್ಳಿಯ ಜನಗಳು ಬಂಧುಗಳೆಂಬ ಭಾವನೆ ಬೆಳೆಯಿಸಿರಿ |
ವಳ್ಳೆತರಹದ ಶಿಕ್ಷಣ ಸೌಕರವೆಲ್ಲೆಡೆವೊದಗಿಸಿರಿ ||
ಮಳ್ಳುತನವ ದೂರೋಡಿಸಿ ಬೆರೆಯಿರಿ ಯೆಲ್ಲರುವೊಂದಾಗಿ |
ಜೊಳ್ಳಭಿಮಾನವ ತೊರೆಯುತೆ ಬಾಳಿರಿ ಎಲ್ಲರು ಸುಖಿಯಾಗಿ || ೨೧ ||

ತರುಣರೆಲ್ಲರೂ ಗಂಡ್ಹೆಣ್ಣೆನ್ನದೆ ಬೆಳೆಸಿರಿ ದೇಹದ ಬಲಗಳನೂ |
ಮರಣಕಂಜದಲೆ ಶಿಸ್ತನು ಕಲಿಯಿರಿ ಶೇರುತೆ ರಾಷ್ಟ್ರದ ಸೈನ್ಯದಲಿ ||
ತರುಣವೃದ್ಧರೂ ಕೂಡಿಯೆ ಹೆಣಗಿರಿ ಬೆಳೆಯಿಸೆ ರಾಷ್ಟ್ರದ ಸಂಪದವಾ |
ತರುಣತರುಣಿಯರೆ ಕೊಳ್ಳಿರಿ ಪಣವನು ನಾಡಿಗೆಯರ್ಪಿಸೆ ದೇಹಗಳಾ || ೨೨ ||

ಹೊಲೆತನನೆಂಬುದು ಬಾರದು ಜನನದಲೆಂಬುದ ನೀವ್ತಿಳಿದೂ |
ಹೊಲೆಯರೆಂದು ನೀವ್ಹಳಿಯಲು ಬೇಡಿರಿ ನಾಡಿನ ಬಂಧುಗಳಾ ||
ವೊಲಿಮೆಯಿಂದ ನೀವಪ್ಪಿರಿ ನಿಮ್ಮಯ ಪೀಡಿತ ಭಾಂಧವರಾ |
ಹೊಲೆತನ ಕೃತ್ಯವಮಾಳ್ಪರ ದೂಡಿರಿ ಬೋಧಿಸೆ ಶಾಸನ ಬಂದಿಯಲೀ || ೨೩ ||

ನಿಮ್ಮಲೋಕದೊಳು ವಾಸಿಪ ಜನಗಳು ವೊಂದೇಮನೆಯವರೂ |
ನಿಮ್ಮೊಳು ಕೆಲಬರ ಪೀಡೆಯೆ ಸರ್ವರ ನಾಶಕೆ ಕಾರಣವೂ ||
ನಿಮ್ಮ ನಿಮ್ಮಗಳ ಭೇದದ ಕಲ್ಪನೆತ್ಯಜಿಸಲು ನೀವಾಗ |
ಹೆಮ್ಮೆಯಿಂದ ನೀವ್ಮೆರೆವಿರಿ ಜಗದೊಳು ಬೊಮ್ಮನ ದಯೆದಿಂದೆ || ೨೪ ||

ನಿಮ್ಮ ಶ್ರೇಷ್ಠ ಪಥ ವೊಮ್ಮನದಿಂದಲಿ ಹರಡಿರಿ ಜಗದೊಳು ಯೆಲ್ಲೆಡೆಗೇ !
ನಿಮ್ಮ ನಿಮ್ಮಗಳ ಬೇಧವ ನಳುಕಿಸಿ ಬಾಳಿರಿ ಬೆಳಗಿರಿ ಪ್ರೇಮದಲೀ ||
ನಿಮ್ಮಲೋಕದೊಳು ಬೆಳೆಯಲು ಐಕ್ಯವು ಯೆಲ್ಲೆಡೆ ಸಿರಿಹರಿ ದಯದಿಂದೆ |
ನಮ್ಮನಿಮ್ಮಗಳ ಶಾಸ್ವತ ಮೈತ್ರಿಯು ಬೆಳೆವುದು ನಿಶ್ಚಯದಿ || ೨೫ ||

ನಮ್ಮನಿಮ್ಮಗಳ ಲೋಕಕ್ಕೊಡೆಯನು ವೊಬ್ಬನೆ ಭಗವಂತಾ |
ಭಿನ್ನಭಿನ್ನಲೋಕದೊಳಮ್ಮನು ಪುಟ್ಟಿಸಿ ಲೀಲೆಯ ಪೂಡಿಹನು ||
ನಮ್ಮನಮ್ಮಗಳ ಕಾಯಕವೆಸಗುತೆ ಮಡಿಯಲು ನಾವಂದು |
ನಿಮ್ಮ ನಾಯಕನು ಗಾಂಧಿಯು ಪೊಂದಿದ ಲೋಕಕೈದುವೆವೂ || ೨೬ ||
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...