ಹಿಮ ಮಾನವ

ನೀರಿಲ್ಲ ನೆರಳಿಲ್ಲ
ಹೊರಗೆ ಕಾಲಿಡುವಂತಿಲ್ಲ
ಅಂಥ ಕಡು ಬೇಸಗೆಯಲ್ಲಿ
ಹಿಮಾಲಯದಿಂದೊಬ್ಬ ಹಿಮ ಮಾನವ
ಹೈದರಾಬಾದಿಗೆ ಬಂದು ಕುಳಿತನು
ಒಂದು ದೊಡ್ಡ ಬಂಡೆಯ ಮೇಲೆ

ಅದೇನು ವಿಚಿತ್ರ!
ತಣ್ಣಗಾಯಿತು ಹವೆ ಒಮ್ಮೆಲೆ
ಹುಲ್ಲು ಕಮರಿದಲ್ಲಿ
ನೆಲ ಬಿರಿದಲ್ಲಿ
ಎದ್ದವು ನೀರ ಬುಗ್ಗೆಗಳು
ತುಂಬಿತು ಕೆರೆ ಹಳ್ಳ
ಒದ್ದೆಯಾಯಿತು ರಸ್ತೆ

ಇನ್ನೇನು ಪರವಾಯಿಲ್ಲಿವೆಂದು
ಜನ ನಿಟ್ಟುಸಿರು ಬಿಟ್ಟರು

ಇತ್ತ ಹಿಮಮಾನವ ಮಾತ್ರ
ನೆಟ್ಟ ದೃಷ್ಟಿಯಲಿ ಕುಳಿತಿದ್ದವನು
ಕರಗುತ್ತಲೇ ಇದ್ದನು
ಮೊದಲವನ ಕೈಕಾಲುಗಳು ಕರಗಿದುವು
ಕಣ್ಣುಗಳು ಕರಗಿದುವು
ತಲೆ ಕರಗಿತು ಹೊಟ್ಟೆ ಕರಗಿತು

ಶಿಶ್ನ ಕರಗಿತು
ಕೊನೆಗುಳಿಯಿತೊಂದು ಬರ್ಫದ ತುಂಡು
ಆಮೇಲೆ ಅದೂ ಕರಗಿತು

ಬಂಡೆಯೊಂದೇ ಉಳಿದುದು
ಖೈರತಾಬಾದಿನಲಿ ಕರಗದೆ
ಇನ್ನೊಂದು ಬೇಸಿಗೆಗೆ
ಇನ್ನೊಬ್ಬ ಹಿಮಮಾನವನು
ಬರುವನೇ ಬಾರನೆ
ಕವಿಯೇ ಹೇಳು!
*****

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಕ್ಕಳೆಂದರೆ
Next post ಸಂಚಕಾರ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys